<p><strong>ತಿರುವನಂತಪುರ</strong>: ಮುಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ವಿಶ್ರಾಂತಿ ಪಡೆಯಲು ಕೇರಳದ ಕಟ್ಟಾಕಡ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. </p><p>ಸರ್ಕಾರಿ ಮತ್ತು ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆಯ ಸೌಲಭ್ಯ ಘೋಷಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವು ಹಲವು ಆಯಾಮದ ಚರ್ಚೆಗಳಿಗೆ ಗ್ರಾಸವಾಗಿರುವಾಗಲೇ ಈ ಬೆಳವಣಿಗೆಯೂ ನಡೆದಿದೆ. </p><p>ಕಟ್ಟಾಕಡ ಕ್ಷೇತ್ರದಲ್ಲಿರುವ ಎಲ್ಲಾ 16 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ (ಪ್ರೌಢಶಾಲೆ ಮತ್ತು 11–12ನೇ ತರಗತಿ) ವಿದ್ಯಾರ್ಥಿನಿಯರು ಮುಟ್ಟಿನ ಸಂದರ್ಭದಲ್ಲಿ ವಿಶ್ರಾಂತಿ ಪಡೆಯಲು ವಿಶೇಷ ಕೊಠಡಿಗಳನ್ನು ನಿರ್ಮಿಸಲಾಗಿದೆ. </p><p> ‘ಒಪ್ಪಂ’ ಎಂಬ ಉಪಕ್ರಮದ ಭಾಗವಾಗಿ ಕಟ್ಟಾಕಡ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣವನ್ನು ಖಾತರಿಪಡಿಸಿಕೊಳ್ಳಲು ಶಾಸಕ ಐ.ಬಿ.ಸತೀಶ್ ಅವರು ಈ ವಿಶ್ರಾಂತ ಕೊಠಡಿಗಳ ನಿರ್ಮಾಣದ ಯೋಜನೆಯನ್ನು ಜಾರಿಗೊಳಿಸಿದ್ದಾರೆ. </p><p>‘ಕೊಠಡಿಯಲ್ಲಿ ಎರಡು ಹಾಸಿಗೆ, ಕುರ್ಚಿಗಳು, ಬಿಸಿನೀರಿನ ಬ್ಯಾಗ್, ನ್ಯಾಪ್ಕಿನ್ ವೆಂಡಿಂಗ್ ಮಷಿನ್ ಇದೆ. ಅಲ್ಲದೇ, ಮನಃಶಾಸ್ತ್ರಜ್ಞರ ಸಲಹೆಯಂತೆ ಮನಸ್ಸಿಗೆ ಮುದ ನೀಡುವಂಥ ಬಣ್ಣಗಳನ್ನು ಕೊಠಡಿಯ ಗೋಡೆಗಳಿಗೆ ಬಳಿಯಲಾಗಿದೆ’ ಎಂದು ಸತೀಶ್ ಮಾಹಿತಿ ನೀಡಿದ್ದಾರೆ.</p><p>ಈ ಉಪಕ್ರಮದಿಂದ ಬರೀ ವಿದ್ಯಾರ್ಥಿನಿಯರಿಗೆ ಮಾತ್ರವಲ್ಲ, ತಮಗೂ ಸಹಕಾರಿಯಾಗಿದೆ ಎಂದು ಹಲವು ಶಿಕ್ಷಕಿಯರು ಹೇಳುತ್ತಿದ್ದಾರೆ ಎಂದೂ ಸತೀಶ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಮುಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ವಿಶ್ರಾಂತಿ ಪಡೆಯಲು ಕೇರಳದ ಕಟ್ಟಾಕಡ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. </p><p>ಸರ್ಕಾರಿ ಮತ್ತು ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆಯ ಸೌಲಭ್ಯ ಘೋಷಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವು ಹಲವು ಆಯಾಮದ ಚರ್ಚೆಗಳಿಗೆ ಗ್ರಾಸವಾಗಿರುವಾಗಲೇ ಈ ಬೆಳವಣಿಗೆಯೂ ನಡೆದಿದೆ. </p><p>ಕಟ್ಟಾಕಡ ಕ್ಷೇತ್ರದಲ್ಲಿರುವ ಎಲ್ಲಾ 16 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ (ಪ್ರೌಢಶಾಲೆ ಮತ್ತು 11–12ನೇ ತರಗತಿ) ವಿದ್ಯಾರ್ಥಿನಿಯರು ಮುಟ್ಟಿನ ಸಂದರ್ಭದಲ್ಲಿ ವಿಶ್ರಾಂತಿ ಪಡೆಯಲು ವಿಶೇಷ ಕೊಠಡಿಗಳನ್ನು ನಿರ್ಮಿಸಲಾಗಿದೆ. </p><p> ‘ಒಪ್ಪಂ’ ಎಂಬ ಉಪಕ್ರಮದ ಭಾಗವಾಗಿ ಕಟ್ಟಾಕಡ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣವನ್ನು ಖಾತರಿಪಡಿಸಿಕೊಳ್ಳಲು ಶಾಸಕ ಐ.ಬಿ.ಸತೀಶ್ ಅವರು ಈ ವಿಶ್ರಾಂತ ಕೊಠಡಿಗಳ ನಿರ್ಮಾಣದ ಯೋಜನೆಯನ್ನು ಜಾರಿಗೊಳಿಸಿದ್ದಾರೆ. </p><p>‘ಕೊಠಡಿಯಲ್ಲಿ ಎರಡು ಹಾಸಿಗೆ, ಕುರ್ಚಿಗಳು, ಬಿಸಿನೀರಿನ ಬ್ಯಾಗ್, ನ್ಯಾಪ್ಕಿನ್ ವೆಂಡಿಂಗ್ ಮಷಿನ್ ಇದೆ. ಅಲ್ಲದೇ, ಮನಃಶಾಸ್ತ್ರಜ್ಞರ ಸಲಹೆಯಂತೆ ಮನಸ್ಸಿಗೆ ಮುದ ನೀಡುವಂಥ ಬಣ್ಣಗಳನ್ನು ಕೊಠಡಿಯ ಗೋಡೆಗಳಿಗೆ ಬಳಿಯಲಾಗಿದೆ’ ಎಂದು ಸತೀಶ್ ಮಾಹಿತಿ ನೀಡಿದ್ದಾರೆ.</p><p>ಈ ಉಪಕ್ರಮದಿಂದ ಬರೀ ವಿದ್ಯಾರ್ಥಿನಿಯರಿಗೆ ಮಾತ್ರವಲ್ಲ, ತಮಗೂ ಸಹಕಾರಿಯಾಗಿದೆ ಎಂದು ಹಲವು ಶಿಕ್ಷಕಿಯರು ಹೇಳುತ್ತಿದ್ದಾರೆ ಎಂದೂ ಸತೀಶ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>