<p><strong>ಲಖನೌ:</strong> ಸರಕು ಸಾಗಣೆ ಹಡಗು ಕಂಪನಿ ಯೊಂದರಲ್ಲಿ ಅಧಿಕಾರಿಯಾಗಿದ್ದ ಪತಿಯನ್ನು, ಪ್ರಿಯಕರನ ನೆರವಿನಿಂದ ಪತ್ನಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.</p><p>ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ, ಡ್ರಮ್ವೊಂದ ರಲ್ಲಿ ಇರಿಸಿ ಸಿಮೆಂಟ್ನಿಂದ ಪ್ಯಾಕ್ಮಾಡ ಲಾಗಿತ್ತು ಎಂದೂ ಆರೋಪಿಸಲಾಗಿದೆ.</p><p>ಉತ್ತರ ಪ್ರದೇಶದ ಮೀರಠ್ನಲ್ಲಿ ಈ ಭೀಕರ ಘಟನೆ ವರದಿಯಾಗಿದೆ. ಸೌರವ್ ಹತ್ಯೆಯಾಗಿರುವ ಅಧಿಕಾರಿ.</p><p>ಪ್ರಕರಣಕ್ಕೆ ಸಂಬಂಧಿಸಿ, ಸೌರವ್ ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. </p><p>‘ಸೌರವ್ ಅವರನ್ನು ಹತ್ಯೆ ಮಾಡಿದ ನಂತರ, ಮುಸ್ಕಾನ್ ಹಾಗೂ ಸಾಹಿಲ್ ಶಿಮ್ಲಾಕ್ಕೆ ತೆರಳಿದ್ದರು. ತಮ್ಮ ಮದುವೆಗೆ ಸಿದ್ಧತೆಯಲ್ಲಿದ್ದರು’ ಎಂದು ತಿಳಿಸಿವೆ.</p><p>ಪರಸ್ಪರ ಪ್ರೀತಿಸುತ್ತಿದ್ದ ಸೌರವ್ ಹಾಗೂ ಮುಸ್ಕಾನ್, 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಆರು ವರ್ಷದ ಮಗಳು ಇದ್ದಾಳೆ. ಮಗಳ ಜನ್ಮದಿನಾಚರಣೆಗಾಗಿ ಸೌರವ್, ಫೆಬ್ರುವರಿ 24ರಂದು ಮನೆಗೆ ಬಂದಿದ್ದರು.</p><p>‘ಮಾರ್ಚ್ 4ರಂದು ಮುಸ್ಕಾನ್, ನಿದ್ರೆ ಮಾತ್ರೆ ಬೆರೆಸಿದ್ದ ಆಹಾರವನ್ನು ಸೌರವ್ ಅವರಿಗೆ ನೀಡಿದ್ದಳು. ನಿದ್ರೆಗೆ ಜಾರಿದ್ದ ಅವರನ್ನು ಚಾಕುವಿನಿಂದ ಇರಿದು ಮುಸ್ಕಾನ್ ಹತ್ಯೆ ಮಾಡಿದ್ದಳು. ಇದಕ್ಕೆ ಸಾಹಿಲ್ ನೆರವು ನೀಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p><p>‘ಮೃತದೇಹದ ತುಂಡುಗಳನ್ನು ಇರಿಸಿದ್ದ ಡ್ರಮ್ಅನ್ನು ನಿರ್ಜನ ಪ್ರದೇಶ ವೊಂದರಲ್ಲಿ ಬಿಸಾಕಲು ಇಬ್ಬರೂ ಮಂಗಳವಾರ ಪ್ರಯತ್ನಿಸಿದ್ದರು. ಅದು ಭಾರವಾಗಿದ್ದ ಕಾರಣ, ಅವರ ಪ್ರಯತ್ನ ಕೈಗೂಡಿರಲಿಲ್ಲ’.</p><p>ಈ ನಡುವೆ, ಸೌರವ್ ತಮ್ಮ ಮೊಬೈಲ್ ಕರೆಗಳನ್ನು ಸ್ವೀಕರಿಸದ ಕಾರಣ, ಅವರ ಪಾಲಕರು ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಶೋಧ ಕೈಗೊಂಡಿದ್ದರು.</p><p>ಶಿಮ್ಲಾದಿಂದ ವಾಪಸು ಬಂದಿದ್ದ ಮುಸ್ಕಾನ್ ಹಾಗೂ ಸಾಹಿಲ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಅವರು ತಪ್ಪೊಪ್ಪಿ ಕೊಂಡಿದ್ದಾರೆ ಎಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಸರಕು ಸಾಗಣೆ ಹಡಗು ಕಂಪನಿ ಯೊಂದರಲ್ಲಿ ಅಧಿಕಾರಿಯಾಗಿದ್ದ ಪತಿಯನ್ನು, ಪ್ರಿಯಕರನ ನೆರವಿನಿಂದ ಪತ್ನಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.</p><p>ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ, ಡ್ರಮ್ವೊಂದ ರಲ್ಲಿ ಇರಿಸಿ ಸಿಮೆಂಟ್ನಿಂದ ಪ್ಯಾಕ್ಮಾಡ ಲಾಗಿತ್ತು ಎಂದೂ ಆರೋಪಿಸಲಾಗಿದೆ.</p><p>ಉತ್ತರ ಪ್ರದೇಶದ ಮೀರಠ್ನಲ್ಲಿ ಈ ಭೀಕರ ಘಟನೆ ವರದಿಯಾಗಿದೆ. ಸೌರವ್ ಹತ್ಯೆಯಾಗಿರುವ ಅಧಿಕಾರಿ.</p><p>ಪ್ರಕರಣಕ್ಕೆ ಸಂಬಂಧಿಸಿ, ಸೌರವ್ ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. </p><p>‘ಸೌರವ್ ಅವರನ್ನು ಹತ್ಯೆ ಮಾಡಿದ ನಂತರ, ಮುಸ್ಕಾನ್ ಹಾಗೂ ಸಾಹಿಲ್ ಶಿಮ್ಲಾಕ್ಕೆ ತೆರಳಿದ್ದರು. ತಮ್ಮ ಮದುವೆಗೆ ಸಿದ್ಧತೆಯಲ್ಲಿದ್ದರು’ ಎಂದು ತಿಳಿಸಿವೆ.</p><p>ಪರಸ್ಪರ ಪ್ರೀತಿಸುತ್ತಿದ್ದ ಸೌರವ್ ಹಾಗೂ ಮುಸ್ಕಾನ್, 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಆರು ವರ್ಷದ ಮಗಳು ಇದ್ದಾಳೆ. ಮಗಳ ಜನ್ಮದಿನಾಚರಣೆಗಾಗಿ ಸೌರವ್, ಫೆಬ್ರುವರಿ 24ರಂದು ಮನೆಗೆ ಬಂದಿದ್ದರು.</p><p>‘ಮಾರ್ಚ್ 4ರಂದು ಮುಸ್ಕಾನ್, ನಿದ್ರೆ ಮಾತ್ರೆ ಬೆರೆಸಿದ್ದ ಆಹಾರವನ್ನು ಸೌರವ್ ಅವರಿಗೆ ನೀಡಿದ್ದಳು. ನಿದ್ರೆಗೆ ಜಾರಿದ್ದ ಅವರನ್ನು ಚಾಕುವಿನಿಂದ ಇರಿದು ಮುಸ್ಕಾನ್ ಹತ್ಯೆ ಮಾಡಿದ್ದಳು. ಇದಕ್ಕೆ ಸಾಹಿಲ್ ನೆರವು ನೀಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p><p>‘ಮೃತದೇಹದ ತುಂಡುಗಳನ್ನು ಇರಿಸಿದ್ದ ಡ್ರಮ್ಅನ್ನು ನಿರ್ಜನ ಪ್ರದೇಶ ವೊಂದರಲ್ಲಿ ಬಿಸಾಕಲು ಇಬ್ಬರೂ ಮಂಗಳವಾರ ಪ್ರಯತ್ನಿಸಿದ್ದರು. ಅದು ಭಾರವಾಗಿದ್ದ ಕಾರಣ, ಅವರ ಪ್ರಯತ್ನ ಕೈಗೂಡಿರಲಿಲ್ಲ’.</p><p>ಈ ನಡುವೆ, ಸೌರವ್ ತಮ್ಮ ಮೊಬೈಲ್ ಕರೆಗಳನ್ನು ಸ್ವೀಕರಿಸದ ಕಾರಣ, ಅವರ ಪಾಲಕರು ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಶೋಧ ಕೈಗೊಂಡಿದ್ದರು.</p><p>ಶಿಮ್ಲಾದಿಂದ ವಾಪಸು ಬಂದಿದ್ದ ಮುಸ್ಕಾನ್ ಹಾಗೂ ಸಾಹಿಲ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಅವರು ತಪ್ಪೊಪ್ಪಿ ಕೊಂಡಿದ್ದಾರೆ ಎಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>