<p><strong>ನವದೆಹಲಿ: </strong>ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ದೇಶದ ಬೇರೆ ಬೇರೆ ನಗರಗಳಿಗೆ ಹೋಗುತ್ತಿರುವ ರೈಲುಗಳು ಭರ್ತಿಯಾಗಿ ಸಾಗುತ್ತಿವೆ. ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದಾಗಿ ನಿಧಾನಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಹಳಿಗೆ ಮರಳುತ್ತಿವೆ ಎಂಬುದರ ಸೂಚನೆ ಇದು ಎನ್ನಲಾಗಿದೆ.</p>.<p>ಉತ್ತರ ಭಾರತದಿಂದ ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿ ಬೇರೆ ಬೇರೆ ನಗರಗಳಿಗೆ ಸಂಚರಿಸುತ್ತಿರುವ ರೈಲುಗಳ ಎಲ್ಲ ಆಸನಗಳನ್ನು ಕಾಯ್ದಿರಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಸಂಚರಿಸಲಿರುವ ಯಾವುದೇ ರೈಲಿನಲ್ಲಿ ಆಸನಗಳು ಖಾಲಿ ಇಲ್ಲ ಎಂದು ರೈಲ್ವೆಯ ಮೂಲಗಳು ತಿಳಿಸಿವೆ.</p>.<p>ಲಾಕ್ಡೌನ್ ಕಾರಣಕ್ಕೆ ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಿದ್ದರು. ಈಗ ಹೆಚ್ಚಿನ ನಗರಗಳಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಹಾಗಾಗಿ, ವಲಸೆ ಕಾರ್ಮಿಕರು ನಗರಗಳಿಗೆ ಮರಳುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಕೋವಿಡ್ ಸ್ಥಿತಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ರೈಲುಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಇಲಾಖೆಯು ಹೇಳಿದೆ.</p>.<p>ನೂರು ಜತೆ ವಿಶೇಷ ರೈಲುಗಳನ್ನು ಜೂನ್ 1ರಿಂದ ಆರಂಭಿಸಲಾಗಿದೆ. 15 ಜತೆ ರಾಜಧಾನಿ ವಿಶೇಷ ರೈಲುಗಳನ್ನು ಮೇ 12ರಿಂದ ಆರಂಭಿಸಲಾಗಿದೆ. ಆದರೆ, ನಿಯಮಿತ ರೈಲುಗಳ ಸೇವೆಯನ್ನು ಆಗಸ್ಟ್ 12ರವರೆಗೆ ಸ್ಥಗಿತಗೊಳಿಸಲಾಗಿದೆ.</p>.<p><strong>ರೈಲುಗಳು ಭರ್ತಿ</strong></p>.<p>* ದಾನಾಪುರ (ಬಿಹಾರ)– ಬೆಂಗಳೂರು ರೈಲು: ಜುಲೈ 14ರವರೆಗೆ ಎಲ್ಲ ಆಸನಗಳನ್ನು ಕಾಯ್ದಿರಿಸಲಾಗಿದೆ</p>.<p>* ನಿಜಾಮುದ್ದೀನ್–ಯಶವಂತಪುರ ಸಂಪರ್ಕ ಕ್ರಾಂತಿ ರೈಲು, ಹೌರಾ–ಯಶವಂತಪುರ ರೈಲು: ಜುಲೈ 10ರವರೆಗೆ ಎಲ್ಲ ಆಸನಗಳನ್ನು ಕಾಯ್ದಿರಿಸಲಾಗಿದೆ</p>.<p>* ಗೋರಖಪುರ–ಬಾಂದ್ರಾ ನಡುವಣ ಅವಧ್ ಎಕ್ಸ್ಪ್ರೆಸ್, ಗೋರಖಪುರ–ಅಹಮದಾಬಾದ್, ಮುಝಫ್ಫರ್ಪುರ–ಬಾಂದ್ರಾ, ಹೌರಾ–ಸಿಕಂದರಾಬಾದ್–ದೆಹಲಿ: ಈ ರೈಲುಗಳಲ್ಲಿ ಮುಂದಿನ 10 ದಿನಗಳಿಗೆ ಯಾವುದೇ ಆಸನ ಖಾಲಿ ಇಲ್ಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ದೇಶದ ಬೇರೆ ಬೇರೆ ನಗರಗಳಿಗೆ ಹೋಗುತ್ತಿರುವ ರೈಲುಗಳು ಭರ್ತಿಯಾಗಿ ಸಾಗುತ್ತಿವೆ. ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದಾಗಿ ನಿಧಾನಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಹಳಿಗೆ ಮರಳುತ್ತಿವೆ ಎಂಬುದರ ಸೂಚನೆ ಇದು ಎನ್ನಲಾಗಿದೆ.</p>.<p>ಉತ್ತರ ಭಾರತದಿಂದ ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿ ಬೇರೆ ಬೇರೆ ನಗರಗಳಿಗೆ ಸಂಚರಿಸುತ್ತಿರುವ ರೈಲುಗಳ ಎಲ್ಲ ಆಸನಗಳನ್ನು ಕಾಯ್ದಿರಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಸಂಚರಿಸಲಿರುವ ಯಾವುದೇ ರೈಲಿನಲ್ಲಿ ಆಸನಗಳು ಖಾಲಿ ಇಲ್ಲ ಎಂದು ರೈಲ್ವೆಯ ಮೂಲಗಳು ತಿಳಿಸಿವೆ.</p>.<p>ಲಾಕ್ಡೌನ್ ಕಾರಣಕ್ಕೆ ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಿದ್ದರು. ಈಗ ಹೆಚ್ಚಿನ ನಗರಗಳಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಹಾಗಾಗಿ, ವಲಸೆ ಕಾರ್ಮಿಕರು ನಗರಗಳಿಗೆ ಮರಳುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಕೋವಿಡ್ ಸ್ಥಿತಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ರೈಲುಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಇಲಾಖೆಯು ಹೇಳಿದೆ.</p>.<p>ನೂರು ಜತೆ ವಿಶೇಷ ರೈಲುಗಳನ್ನು ಜೂನ್ 1ರಿಂದ ಆರಂಭಿಸಲಾಗಿದೆ. 15 ಜತೆ ರಾಜಧಾನಿ ವಿಶೇಷ ರೈಲುಗಳನ್ನು ಮೇ 12ರಿಂದ ಆರಂಭಿಸಲಾಗಿದೆ. ಆದರೆ, ನಿಯಮಿತ ರೈಲುಗಳ ಸೇವೆಯನ್ನು ಆಗಸ್ಟ್ 12ರವರೆಗೆ ಸ್ಥಗಿತಗೊಳಿಸಲಾಗಿದೆ.</p>.<p><strong>ರೈಲುಗಳು ಭರ್ತಿ</strong></p>.<p>* ದಾನಾಪುರ (ಬಿಹಾರ)– ಬೆಂಗಳೂರು ರೈಲು: ಜುಲೈ 14ರವರೆಗೆ ಎಲ್ಲ ಆಸನಗಳನ್ನು ಕಾಯ್ದಿರಿಸಲಾಗಿದೆ</p>.<p>* ನಿಜಾಮುದ್ದೀನ್–ಯಶವಂತಪುರ ಸಂಪರ್ಕ ಕ್ರಾಂತಿ ರೈಲು, ಹೌರಾ–ಯಶವಂತಪುರ ರೈಲು: ಜುಲೈ 10ರವರೆಗೆ ಎಲ್ಲ ಆಸನಗಳನ್ನು ಕಾಯ್ದಿರಿಸಲಾಗಿದೆ</p>.<p>* ಗೋರಖಪುರ–ಬಾಂದ್ರಾ ನಡುವಣ ಅವಧ್ ಎಕ್ಸ್ಪ್ರೆಸ್, ಗೋರಖಪುರ–ಅಹಮದಾಬಾದ್, ಮುಝಫ್ಫರ್ಪುರ–ಬಾಂದ್ರಾ, ಹೌರಾ–ಸಿಕಂದರಾಬಾದ್–ದೆಹಲಿ: ಈ ರೈಲುಗಳಲ್ಲಿ ಮುಂದಿನ 10 ದಿನಗಳಿಗೆ ಯಾವುದೇ ಆಸನ ಖಾಲಿ ಇಲ್ಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>