‘ಜಾತಿಗಣತಿ ಬೇಡಿಕೆ ಉಲ್ಲೇಖಿಸಿ ಪ್ರತಿಪಕ್ಷಗಳನ್ನು ಟೀಕಿಸಿದ ಪ್ರಧಾನಿ, ‘ಸುದೀರ್ಘ ಕಾಲ ಆಡಳಿತ ನಡೆಸಿದ ಪಕ್ಷಗಳು ರಾಜನಂತೆ ವರ್ತಿಸಿವೆ. ಅವುಗಳಿಗೆ ಅಧಿಕಾರ ಗಳಿಸುವ ಸುಲಭ ಮಾರ್ಗವೆಂದರೆ ಜನರನ್ನು ನಿರ್ಗತಿಕರಾಗೇ ಇರಿಸುವುದು, ಸಮಾಜವನ್ನು ಒಡೆಯುವುದು. ಇದರ ಪರಿಣಾಮವನ್ನು ದೇಶ ಮತ್ತು ಹಲವು ಪೀಳಿಗೆಗಳು ಎದುರಿಸಿವೆ’ ಎಂದರು.
ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿ ಕೆಲವು ಪಕ್ಷಗಳು ಗರೀಬಿ ಹಟಾವೊ ಹೆಸರಿನಲ್ಲಿ ಕಲವೇ ಜನರನ್ನು ಶ್ರೀಮಂತರಾಗಿಸಿವೆ. ಹಲವು ವರ್ಷ ಇವರು ಗರೀಬಿ ಹಟಾವೊ ಮಂತ್ರ ಜಪಿಸಿದರು. ಆದರೆ, ಲಾಭವನ್ನು ಕೆಲವೇ ಜನರು ಪಡೆದುಕೊಂಡರು ಎಂದು ತರಾಟೆಗೆ ತೆಗೆದುಕೊಂಡರು