ಈ ಹೇಳಿಕೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ, ಕಾಂಗ್ರಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ಜೈರಾಂ ರಮೇಶ್, ಮೋದಿ ಸರ್ಕಾರದ ಸರ್ವಾಧಿಕಾರಿ ಮನಸ್ಥಿತಿ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಪಕ್ಷವು ನಿರಂತರ ಹೋರಾಡಲಿದೆ. ಆದರೆ, ಪ್ರಧಾನ ಮಂತ್ರಿ ವಿರುದ್ಧದ ಯಾವುದೇ ಅಸಭ್ಯ ಹೇಳಿಕೆಗಳನ್ನು ಪಕ್ಷ ಅನುಮೋದಿಸುವುದಿಲ್ಲ. ಗಾಂಧಿ ತತ್ವಗಳ ಆಧಾರದ ಮೇಲೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.