<p><strong>ನವದೆಹಲಿ</strong>: ‘ನೀವು ಇಂದು ರಾತ್ರಿ ಒಟ್ಟಿಗೆ ಕೂತು ಊಟ ಮಾಡಿ. ನಿಮ್ಮ ಮಧ್ಯೆ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಮಾತುಕತೆ ನಡೆಸಿಕೊಂಡು ನೀವೇ ಪರಿಹಾರ ಕಂಡುಕೊಳ್ಳಿ’ ಎಂದು ವಿಚ್ಛೇದನ ಅರ್ಜಿಯ ವಿಚಾರಣೆ ನಡೆಯುತ್ತಿದ್ದ ವೇಳೆ ದಂಪತಿಯನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್ ಸೋಮವಾರ ಈ ರೀತಿ ಹೇಳಿದೆ.</p>.<p>ಫ್ಯಾಷನ್ ಉದ್ಯಮಿ ಮಹಿಳೆಯು ತನ್ನ ಮೂರು ವರ್ಷ ಮಗುವಿನೊಂದಿಗೆ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ಚಂದ್ರ ಶರ್ಮಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿದರು.</p>.<p>‘ನಿಮಗೆ ಮೂರು ವರ್ಷದ ಮಗುವಿದೆ. ನಿಮ್ಮಿಬ್ಬರ ಮಧ್ಯೆ ಅದೆಂಥಾ ಅಹಂಕಾರ? ನಮ್ಮ ನ್ಯಾಯಾಲಯದ ಕ್ಯಾಂಟೀನ್ ನಿಮಗೆ ಇಷ್ಟವಾಗದೇ ಇರಬಹುದು. ಅದಕ್ಕಾಗಿ ಒಂದು ಕೋಣೆಯನ್ನು ನೀಡುತ್ತೇವೆ. ರಾತ್ರಿ ಕೂತು ಊಟ ಮಾಡಿ. ಮಾತುಕತೆ ನಡೆಸಿ. ಮಾತುಕತೆಯಿಂದ ಎಲ್ಲವೂ ಬಗೆಹರಿಯುತ್ತದೆ’ ಎಂದು ಪೀಠ ಹೇಳಿತು.</p>.<p>‘ಹಳೆಯ ಕಹಿ ಘಟನೆಗಳನ್ನು ಮರೆತುಬಿಡಿ. ಭವಿಷ್ಯದ ಕುರಿತು ಯೋಜನೆ ಮಾಡಿ. ನಾಳೆ ಬನ್ನಿ’ ಎಂದಿತು. ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ನೀವು ಇಂದು ರಾತ್ರಿ ಒಟ್ಟಿಗೆ ಕೂತು ಊಟ ಮಾಡಿ. ನಿಮ್ಮ ಮಧ್ಯೆ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಮಾತುಕತೆ ನಡೆಸಿಕೊಂಡು ನೀವೇ ಪರಿಹಾರ ಕಂಡುಕೊಳ್ಳಿ’ ಎಂದು ವಿಚ್ಛೇದನ ಅರ್ಜಿಯ ವಿಚಾರಣೆ ನಡೆಯುತ್ತಿದ್ದ ವೇಳೆ ದಂಪತಿಯನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್ ಸೋಮವಾರ ಈ ರೀತಿ ಹೇಳಿದೆ.</p>.<p>ಫ್ಯಾಷನ್ ಉದ್ಯಮಿ ಮಹಿಳೆಯು ತನ್ನ ಮೂರು ವರ್ಷ ಮಗುವಿನೊಂದಿಗೆ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ಚಂದ್ರ ಶರ್ಮಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿದರು.</p>.<p>‘ನಿಮಗೆ ಮೂರು ವರ್ಷದ ಮಗುವಿದೆ. ನಿಮ್ಮಿಬ್ಬರ ಮಧ್ಯೆ ಅದೆಂಥಾ ಅಹಂಕಾರ? ನಮ್ಮ ನ್ಯಾಯಾಲಯದ ಕ್ಯಾಂಟೀನ್ ನಿಮಗೆ ಇಷ್ಟವಾಗದೇ ಇರಬಹುದು. ಅದಕ್ಕಾಗಿ ಒಂದು ಕೋಣೆಯನ್ನು ನೀಡುತ್ತೇವೆ. ರಾತ್ರಿ ಕೂತು ಊಟ ಮಾಡಿ. ಮಾತುಕತೆ ನಡೆಸಿ. ಮಾತುಕತೆಯಿಂದ ಎಲ್ಲವೂ ಬಗೆಹರಿಯುತ್ತದೆ’ ಎಂದು ಪೀಠ ಹೇಳಿತು.</p>.<p>‘ಹಳೆಯ ಕಹಿ ಘಟನೆಗಳನ್ನು ಮರೆತುಬಿಡಿ. ಭವಿಷ್ಯದ ಕುರಿತು ಯೋಜನೆ ಮಾಡಿ. ನಾಳೆ ಬನ್ನಿ’ ಎಂದಿತು. ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>