<p>ಕಾಡಿನ ಪ್ರಾಣಿಗಳೆಲ್ಲ ಸಭೆ ಸೇರಿ ಗುಸು ಗುಸು ಮಾತನಾಡುತ್ತಲೇ ಇದ್ದವು. </p>.<p>‘ಸದ್ದು...’ ರಾಜಗಾಂಭೀರ್ಯದಲ್ಲಿ ಬಂದು ಕುಳಿತು ಗರ್ಜಿಸಿತು ಸಿಂಹ. </p>.<p>ಪ್ರಾಣಿಗಳು ಸೈಲೆಂಟ್ ಆದವು. ‘ಇಂದಿನ ಸಭೆಯ ಅಜೆಂಡಾ ಏನು’ ಕೇಳಿತು ಕಾಡಿನ ರಾಜ. </p>.<p>‘ಕರ್ನಾಟಕ ಸರ್ಕಾರದ ನಿರ್ಧಾರ ಕುರಿತು ಚರ್ಚಿಸುವುದು ಮಹಾರಾಜ’ ವಿನಯದಿಂದ ಹೇಳಿತು ಜಿಂಕೆ.</p>.<p>‘ಸರ್ಕಾರದ ನಿರ್ಧಾರವೇ? ಏನಂತೆ ಅವರದು?’ </p>.<p>‘ದನ–ಕರುಗಳನ್ನು ಕಾಡಿನೊಳಗೆ ಬಿಡಬಾರದು ಎಂದು ಆದೇಶ ಹೊರಡಿಸಿದ್ದಾರೆ ಪ್ರಭು’.</p>.<p>‘ಜಾನುವಾರುಗಳು ಯಾಕ್ ಬರಬಾರದಂತೆ?’ </p>.<p>‘ನಮ್ಮ ರಕ್ಷಣೆಗೆ, ಅಂದ್ರೆ ಕಾಡು ಮತ್ತು ಕಾಡಿನ ಪ್ರಾಣಿಗಳನ್ನು ಕಾಪಾಡುವ ಉದ್ದೇಶವಂತೆ ರಾಜ’.</p>.<p>ಜೋರಾಗಿ ನಕ್ಕ ಸಿಂಹ, ‘ದನ–ಕರುಗಳು ಕಾಡಿನೊಳಗೆ ಬಂದರೆ ನಮಗೆ ಭಯವಿಲ್ಲ, ಈ ಜನ–ಪ್ರಭುಗಳು ಅರಣ್ಯದೊಳಗೆ ಬಂದರೆ ನಮಗೆ ಆತಂಕ’ ಎಂದಿತು. </p>.<p>‘ಹೌದು, ದನಗಳು ಬಂದರೆ ಏನೋ ಒಂದಿಷ್ಟು ಹುಲ್ಲು ತಿಂದು ಹೋಗುತ್ತವೆ. ಆದರೆ, ಈ ಜನಗಳು ಬಂದರೆ ಕಾಡನ್ನೇ ನುಂಗಿಬಿಡ್ತಾರೆ’ ಗಂಭೀರವಾಗಿ ಹೇಳಿತು ಆನೆ. </p>.<p>ಸಭೆಯಲ್ಲಿ ಮತ್ತೆ ಗುಸುಗುಸು ಆರಂಭವಾಯಿತು. ‘ಸದ್ದು..! ಏನದು ಗುಸುಗುಸು’ ಎಂದಿತು ಸಿಂಹ.</p>.<p>‘ಪ್ರಭು, ಇಲ್ಲಿ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದೆ’ ಎಂದಿತು ಜಿಂಕೆ. </p>.<p>‘ಏನಂತೆ ವಿಷಯ?’ </p>.<p>‘ಈ ಕಾಡಿನ ಅಭಿವೃದ್ಧಿಗೆ ನಿಮಗಿಂತ ಮಂತ್ರಿ ಹುಲಿಯದ್ದೇ ಹೆಚ್ಚಿನ ಕೊಡುಗೆ ಇದೆಯಂತೆ. ಹಾಗಂತ ಮರಿ ಹುಲಿ ಹೇಳಿಕೊಂಡು ಓಡಾಡುತ್ತಿದೆ. </p>.<p>ಸಿಂಹ ಏನೂ ಪ್ರತಿಕ್ರಿಯಿಸಲಿಲ್ಲ. ಆದರೆ, ನಗುತ್ತಾ ಆನೆ ಹೇಳಿತು, ‘ರಾಜ ರಾಜನೇ, ಮಂತ್ರಿ ಮಂತ್ರಿಯೇ’.</p>.<p>‘ಅನಗತ್ಯ ಚರ್ಚೆ ಬೇಡ. ದನಗಳು ಬರಬಹುದು. ಆದರೆ, ಪ್ರಭಾವಿ ಜನಗಳಿಗೆ ಈ ಕಾಡಿನೊಳಗೆ ಪ್ರವೇಶವಿಲ್ಲ ಎಂದು ಅರಣ್ಯದ ಮುಂದೆ ಬೋರ್ಡ್ ಹಾಕಿ’ ಎಂದು ಪುನರುಚ್ಚರಿಸಿದ ಸಿಂಹ ಎದ್ದು ಹೊರಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಡಿನ ಪ್ರಾಣಿಗಳೆಲ್ಲ ಸಭೆ ಸೇರಿ ಗುಸು ಗುಸು ಮಾತನಾಡುತ್ತಲೇ ಇದ್ದವು. </p>.<p>‘ಸದ್ದು...’ ರಾಜಗಾಂಭೀರ್ಯದಲ್ಲಿ ಬಂದು ಕುಳಿತು ಗರ್ಜಿಸಿತು ಸಿಂಹ. </p>.<p>ಪ್ರಾಣಿಗಳು ಸೈಲೆಂಟ್ ಆದವು. ‘ಇಂದಿನ ಸಭೆಯ ಅಜೆಂಡಾ ಏನು’ ಕೇಳಿತು ಕಾಡಿನ ರಾಜ. </p>.<p>‘ಕರ್ನಾಟಕ ಸರ್ಕಾರದ ನಿರ್ಧಾರ ಕುರಿತು ಚರ್ಚಿಸುವುದು ಮಹಾರಾಜ’ ವಿನಯದಿಂದ ಹೇಳಿತು ಜಿಂಕೆ.</p>.<p>‘ಸರ್ಕಾರದ ನಿರ್ಧಾರವೇ? ಏನಂತೆ ಅವರದು?’ </p>.<p>‘ದನ–ಕರುಗಳನ್ನು ಕಾಡಿನೊಳಗೆ ಬಿಡಬಾರದು ಎಂದು ಆದೇಶ ಹೊರಡಿಸಿದ್ದಾರೆ ಪ್ರಭು’.</p>.<p>‘ಜಾನುವಾರುಗಳು ಯಾಕ್ ಬರಬಾರದಂತೆ?’ </p>.<p>‘ನಮ್ಮ ರಕ್ಷಣೆಗೆ, ಅಂದ್ರೆ ಕಾಡು ಮತ್ತು ಕಾಡಿನ ಪ್ರಾಣಿಗಳನ್ನು ಕಾಪಾಡುವ ಉದ್ದೇಶವಂತೆ ರಾಜ’.</p>.<p>ಜೋರಾಗಿ ನಕ್ಕ ಸಿಂಹ, ‘ದನ–ಕರುಗಳು ಕಾಡಿನೊಳಗೆ ಬಂದರೆ ನಮಗೆ ಭಯವಿಲ್ಲ, ಈ ಜನ–ಪ್ರಭುಗಳು ಅರಣ್ಯದೊಳಗೆ ಬಂದರೆ ನಮಗೆ ಆತಂಕ’ ಎಂದಿತು. </p>.<p>‘ಹೌದು, ದನಗಳು ಬಂದರೆ ಏನೋ ಒಂದಿಷ್ಟು ಹುಲ್ಲು ತಿಂದು ಹೋಗುತ್ತವೆ. ಆದರೆ, ಈ ಜನಗಳು ಬಂದರೆ ಕಾಡನ್ನೇ ನುಂಗಿಬಿಡ್ತಾರೆ’ ಗಂಭೀರವಾಗಿ ಹೇಳಿತು ಆನೆ. </p>.<p>ಸಭೆಯಲ್ಲಿ ಮತ್ತೆ ಗುಸುಗುಸು ಆರಂಭವಾಯಿತು. ‘ಸದ್ದು..! ಏನದು ಗುಸುಗುಸು’ ಎಂದಿತು ಸಿಂಹ.</p>.<p>‘ಪ್ರಭು, ಇಲ್ಲಿ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದೆ’ ಎಂದಿತು ಜಿಂಕೆ. </p>.<p>‘ಏನಂತೆ ವಿಷಯ?’ </p>.<p>‘ಈ ಕಾಡಿನ ಅಭಿವೃದ್ಧಿಗೆ ನಿಮಗಿಂತ ಮಂತ್ರಿ ಹುಲಿಯದ್ದೇ ಹೆಚ್ಚಿನ ಕೊಡುಗೆ ಇದೆಯಂತೆ. ಹಾಗಂತ ಮರಿ ಹುಲಿ ಹೇಳಿಕೊಂಡು ಓಡಾಡುತ್ತಿದೆ. </p>.<p>ಸಿಂಹ ಏನೂ ಪ್ರತಿಕ್ರಿಯಿಸಲಿಲ್ಲ. ಆದರೆ, ನಗುತ್ತಾ ಆನೆ ಹೇಳಿತು, ‘ರಾಜ ರಾಜನೇ, ಮಂತ್ರಿ ಮಂತ್ರಿಯೇ’.</p>.<p>‘ಅನಗತ್ಯ ಚರ್ಚೆ ಬೇಡ. ದನಗಳು ಬರಬಹುದು. ಆದರೆ, ಪ್ರಭಾವಿ ಜನಗಳಿಗೆ ಈ ಕಾಡಿನೊಳಗೆ ಪ್ರವೇಶವಿಲ್ಲ ಎಂದು ಅರಣ್ಯದ ಮುಂದೆ ಬೋರ್ಡ್ ಹಾಕಿ’ ಎಂದು ಪುನರುಚ್ಚರಿಸಿದ ಸಿಂಹ ಎದ್ದು ಹೊರಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>