<p><strong>ಮುಂಬೈ:</strong> ಮುಂಬೈಯ ಸುಪ್ರಸಿದ್ದ ಲಾಲ್ಬಾಗ್ಚಾ ರಾಜ ಗಣೇಶೋತ್ಸವ ಈ ವರ್ಷನಡೆಯುವುದಿಲ್ಲ. ಸಾಂಪ್ರದಾಯಿಕ ಗಣೇಶ ಪೂಜೆಯ ಬದಲು ಈ ಬಾರಿ ರಕ್ತ ಮತ್ತು ಪ್ಲಾಸ್ಮಾ ದಾನ ಶಿಬಿರ ಆಯೋಜಿಸಲಾಗಿದೆ.</p>.<p>ದೇಶಕ್ಕೆ ದೇಶವೇ ಕೊರೊನಾವೈರಸ್ನಿಂದ ತತ್ತರಿಸಿರುವ ಈ ಹೊತ್ತಲ್ಲಿ ಗಣೇಶೋತ್ಸವದ ಬದಲು ಆರೋಗ್ಯ ಉತ್ಸವ ನಡೆಯಲಿದೆ ಎಂದು ಲಾಲ್ಬಾಗ್ಚಾ ರಾಜ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಎಜಿಎಂ ಹೇಳಿದ್ದಾರೆ.</p>.<p>ಕೊರೊನಾವೈರಸ್ ವಿರುದ್ಧದ ಹೋರಾಟಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹25 ಲಕ್ಷ ದೇಣಿಗೆ ನೀಡುವುದಾಗಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸುಧೀರ್ ಸಾಲ್ವಿ ಹೇಳಿದ್ದಾರೆ.</p>.<p>ಲಾಲ್ಬಾಗ್ಚಾ ರಾಜ ಬಗ್ಗೆ ಜನರಿಗೆ ವಿಶ್ವಾಸ ಜಾಸ್ತಿ. ಜನರು ಬರಬಹುದು. ನಾವು ಅಂತರ ಕಾಯ್ದುಕೊಳ್ಳುವ ಬಗ್ಗೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಅದೇ ವೇಳೆ 4 ಅಡಿ ಎತ್ತರದ ಗಣೇಶನ ಮೂರ್ತಿ ಕೂರಿಸುತ್ತಿರಾ? ಎಂದು ಕೇಳಿದಾಗ ಇಲ್ಲ ಎಂದ ಸಾಲ್ವಿ, ಅದೇ ಜಾಗದಲ್ಲಿ ರಕ್ತದಾನ ಮತ್ತು ಪ್ಲಾಸ್ಮಾ ದಾನ ಶಿಬಿರ ಆಯೋಜಿಸುವುದಾಗಿ ಹೇಳಿದ್ದಾರೆ.</p>.<p>ದೇಶಕ್ಕಾಗಿ ಹುತಾತ್ಮರಾದ ಯೋಧರ ಕುಟುಂಬ ಮತ್ತು ಕೋವಿಡ್ ಸೇನಾನಿಗಳ ಕುಟುಂಬಗಳಿಗೆ ಗೌರವಾದರಗಳೊಂದಿಗೆ ಸನ್ಮಾನ ಮಾಡಲು ನಾವು ತೀರ್ಮಾನಿಸಿದ್ದೇವೆ. ಲಾಲ್ಬಾಗ್ಚಾ ರಾಜ ಗಣೇಶೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಗಣೇಶನ ಮೂರ್ತಿ ಕೂರಿಸದೇ ಇರುವುದು ಎಂದು ಅವರು ಹೇಳಿದ್ದಾರೆ.</p>.<p>ರಕ್ತ ಮತ್ತು ಪ್ಲಾಸ್ಮಾ ದಾನ ಶಿಬಿರ ಮುಂಬೈಯ ಪರೇಲ್ನಲ್ಲಿರುವ ಕಿಂಗ್ ಎಡ್ವರ್ಡ್ ಮೆಮೊರಿಯಲ್ ಆಸ್ಪತ್ರೆಯ ಸಹಕಾರದೊಂದಿಗೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮುಂಬೈಯ ಸುಪ್ರಸಿದ್ದ ಲಾಲ್ಬಾಗ್ಚಾ ರಾಜ ಗಣೇಶೋತ್ಸವ ಈ ವರ್ಷನಡೆಯುವುದಿಲ್ಲ. ಸಾಂಪ್ರದಾಯಿಕ ಗಣೇಶ ಪೂಜೆಯ ಬದಲು ಈ ಬಾರಿ ರಕ್ತ ಮತ್ತು ಪ್ಲಾಸ್ಮಾ ದಾನ ಶಿಬಿರ ಆಯೋಜಿಸಲಾಗಿದೆ.</p>.<p>ದೇಶಕ್ಕೆ ದೇಶವೇ ಕೊರೊನಾವೈರಸ್ನಿಂದ ತತ್ತರಿಸಿರುವ ಈ ಹೊತ್ತಲ್ಲಿ ಗಣೇಶೋತ್ಸವದ ಬದಲು ಆರೋಗ್ಯ ಉತ್ಸವ ನಡೆಯಲಿದೆ ಎಂದು ಲಾಲ್ಬಾಗ್ಚಾ ರಾಜ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಎಜಿಎಂ ಹೇಳಿದ್ದಾರೆ.</p>.<p>ಕೊರೊನಾವೈರಸ್ ವಿರುದ್ಧದ ಹೋರಾಟಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹25 ಲಕ್ಷ ದೇಣಿಗೆ ನೀಡುವುದಾಗಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸುಧೀರ್ ಸಾಲ್ವಿ ಹೇಳಿದ್ದಾರೆ.</p>.<p>ಲಾಲ್ಬಾಗ್ಚಾ ರಾಜ ಬಗ್ಗೆ ಜನರಿಗೆ ವಿಶ್ವಾಸ ಜಾಸ್ತಿ. ಜನರು ಬರಬಹುದು. ನಾವು ಅಂತರ ಕಾಯ್ದುಕೊಳ್ಳುವ ಬಗ್ಗೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಅದೇ ವೇಳೆ 4 ಅಡಿ ಎತ್ತರದ ಗಣೇಶನ ಮೂರ್ತಿ ಕೂರಿಸುತ್ತಿರಾ? ಎಂದು ಕೇಳಿದಾಗ ಇಲ್ಲ ಎಂದ ಸಾಲ್ವಿ, ಅದೇ ಜಾಗದಲ್ಲಿ ರಕ್ತದಾನ ಮತ್ತು ಪ್ಲಾಸ್ಮಾ ದಾನ ಶಿಬಿರ ಆಯೋಜಿಸುವುದಾಗಿ ಹೇಳಿದ್ದಾರೆ.</p>.<p>ದೇಶಕ್ಕಾಗಿ ಹುತಾತ್ಮರಾದ ಯೋಧರ ಕುಟುಂಬ ಮತ್ತು ಕೋವಿಡ್ ಸೇನಾನಿಗಳ ಕುಟುಂಬಗಳಿಗೆ ಗೌರವಾದರಗಳೊಂದಿಗೆ ಸನ್ಮಾನ ಮಾಡಲು ನಾವು ತೀರ್ಮಾನಿಸಿದ್ದೇವೆ. ಲಾಲ್ಬಾಗ್ಚಾ ರಾಜ ಗಣೇಶೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಗಣೇಶನ ಮೂರ್ತಿ ಕೂರಿಸದೇ ಇರುವುದು ಎಂದು ಅವರು ಹೇಳಿದ್ದಾರೆ.</p>.<p>ರಕ್ತ ಮತ್ತು ಪ್ಲಾಸ್ಮಾ ದಾನ ಶಿಬಿರ ಮುಂಬೈಯ ಪರೇಲ್ನಲ್ಲಿರುವ ಕಿಂಗ್ ಎಡ್ವರ್ಡ್ ಮೆಮೊರಿಯಲ್ ಆಸ್ಪತ್ರೆಯ ಸಹಕಾರದೊಂದಿಗೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>