<p><strong>ಮುಂಬೈ:</strong> ಮುಂಬೈನಲ್ಲಿ ವಾಟರ್ ಮೆಟ್ರೊ ನಿರ್ಮಿಸುವ ಇರಾದೆ ಇದ್ದು, ಇದಕ್ಕಾಗಿ ವಿವರವಾದ ಯೋಜನಾ ವರದಿಯನ್ನು ಪ್ರಸ್ತುತಪಡಿಸಲು ಕೇರಳದ ಕೊಚ್ಚಿ ವಾಟರ್ ಮೆಟ್ರೊವನ್ನು ಕೋರಲಾಗಿದೆ ಎಂದು ಮಹಾರಾಷ್ಟ್ರ ಬಂದರು ಸಚಿವ ನಿತೇಶ್ ರಾಣೆ ಹೇಳಿದ್ದಾರೆ.</p>.ಮಂಗಳೂರಿನಲ್ಲಿ ವಾಟರ್ ಮೆಟ್ರೊ ಯೋಜನೆ ಪ್ರಸ್ತಾವನೆಗೆ ಮುಖ್ಯಮಂತ್ರಿ ಅನುಮೋದನೆ.<p>ತಿಂಗಳ ಅಂತ್ಯದ ವೇಳೆಗೆ ವಿಸ್ತೃತ ಯೋಜನಾ ವರದಿ ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರದೊಂದಿಗೆ 50:50 ಪಾಲುದಾರಿಕೆಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಯೋಜನೆಯನ್ನು ಕಾರ್ಯಗತಗೊಳಿಸಲು ವಿಶೇಷ ತಂಡ ರಚಿಸಲಾಗುವುದು ಎಂದು ಹೇಳಿದ್ದಾರೆ.</p><p>ಮುಂಬೈ ಏಳು ದ್ವೀಪಗಳಿಂದ ಮಾಡಲ್ಪಟ್ಟಿದೆ. ಆದರೆ ಜಲಮಾರ್ಗಗಳನ್ನು ಅವುಗಳ ಪೂರ್ಣ ಸಾಮರ್ಥ್ಯಕ್ಕೆ ಹಿಂದೆಂದೂ ಬಳಸಲಾಗಿಲ್ಲ. ವಾಟರ್ ಮೆಟ್ರೊ, ರಸ್ತೆಗಳು ಮತ್ತು ಉಪನಗರ ರೈಲ್ವೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಪ್ರತಿಪಾದಿಸಿದ್ದಾರೆ.</p><p>ವಾಟರ್ ಮೆಟ್ರೊ ಯೋಜನೆಯು ನಗರ ಸಾರಿಗೆಯನ್ನು ಸುಧಾರಿಸಲಿದೆ. ಮುಂಬೈ ಪ್ರವಾಸೋದ್ಯಮಕ್ಕೆ ಇಂಬು ನೀಡಲಿದೆ ಎಂದು ರಾಣೆ ವಿವರಿಸಿದ್ದಾರೆ.</p>.Budget | ದ.ಕನ್ನಡಕ್ಕೆ ಭರಪೂರ ಯೋಜನೆ: ಮೆಡಿಕಲ್ ಕಾಲೇಜು, ಕ್ರೂಸ್, ವಾಟರ್ ಮೆಟ್ರೊ.<p>ನಾರಂಗಿ-ಖರ್ವದೇಶ್ವರಿ, ವಸೈ-ಮೀರಾ ಭಾಯಂದರ್, ಫೌಂಟೇನ್ ಜೆಟ್ಟಿ-ಗೈಮುಖ್-ನಾಗಲೆ, ಕೋಲ್ಸೆಟ್-ಕಲ್ಹೇರ್-ಮುಂಬ್ರಾ-ಕಲ್ಯಾಣ್, ಕಲ್ಯಾಣ್-ಮುಂಬ್ರಾ-ಮುಲುಂಡ್-ಐರೋಲಿ, ವಾಶಿ-ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ (ಡಿಸಿಟಿ) ಎಂದೂ ಕರೆಯುತ್ತಾರೆ. ಡಿಸಿಟಿ-ಗೇಟ್ವೇ ಆಫ್ ಇಂಡಿಯಾ, ಮೀರಾ ಭಾಯಂದರ್-ವಸಾಯಿ-ಬೋರಿವಲಿ-ನರೀಮನ್ ಪಾಯಿಂಟ್-ಮಾಂಡ್ವಾ, ಬೇಲಾಪುರ-ಗೇಟ್ವೇ-ಮಾಂಡ್ವಾ, ಬೊರಿವಲಿ-ಗೊರೈ-ನರೀಮನ್ ಪಾಯಿಂಟ್ ಸಂಭವ್ಯ ಮಾರ್ಗಗಳು ಎಂದು ರಾಣೆ ಮಾಹಿತಿ ನೀಡಿದ್ದಾರೆ.</p><p>ಡಿಸೆಂಬರ್ 2023ರಲ್ಲಿ ಕೊಚ್ಚಿಯಲ್ಲಿ ಮೊದಲ ಬಾರಿಗೆ ವಾಟರ್ ಮೆಟ್ರೊ ಆರಂಭವಾಗಿತ್ತು. ಆ ಮೂಲಕ ಈ ಸಾರಿಗೆ ವ್ಯವಸ್ಥೆ ಹೊಂದಿದ ಮೊದಲ ನಗರ ಎಂಬ ಕೀರ್ತಿಗೂ ಪಾತ್ರವಾಗಿತ್ತು.</p>.ಕೊಚ್ಚಿಯಲ್ಲಿ ₹1,137 ಕೋಟಿ ವೆಚ್ಚದ ವಾಟರ್ ಮೆಟ್ರೊ.. ಇಲ್ಲಿದೆ ಅದರ ವಿಶೇಷತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮುಂಬೈನಲ್ಲಿ ವಾಟರ್ ಮೆಟ್ರೊ ನಿರ್ಮಿಸುವ ಇರಾದೆ ಇದ್ದು, ಇದಕ್ಕಾಗಿ ವಿವರವಾದ ಯೋಜನಾ ವರದಿಯನ್ನು ಪ್ರಸ್ತುತಪಡಿಸಲು ಕೇರಳದ ಕೊಚ್ಚಿ ವಾಟರ್ ಮೆಟ್ರೊವನ್ನು ಕೋರಲಾಗಿದೆ ಎಂದು ಮಹಾರಾಷ್ಟ್ರ ಬಂದರು ಸಚಿವ ನಿತೇಶ್ ರಾಣೆ ಹೇಳಿದ್ದಾರೆ.</p>.ಮಂಗಳೂರಿನಲ್ಲಿ ವಾಟರ್ ಮೆಟ್ರೊ ಯೋಜನೆ ಪ್ರಸ್ತಾವನೆಗೆ ಮುಖ್ಯಮಂತ್ರಿ ಅನುಮೋದನೆ.<p>ತಿಂಗಳ ಅಂತ್ಯದ ವೇಳೆಗೆ ವಿಸ್ತೃತ ಯೋಜನಾ ವರದಿ ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರದೊಂದಿಗೆ 50:50 ಪಾಲುದಾರಿಕೆಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಯೋಜನೆಯನ್ನು ಕಾರ್ಯಗತಗೊಳಿಸಲು ವಿಶೇಷ ತಂಡ ರಚಿಸಲಾಗುವುದು ಎಂದು ಹೇಳಿದ್ದಾರೆ.</p><p>ಮುಂಬೈ ಏಳು ದ್ವೀಪಗಳಿಂದ ಮಾಡಲ್ಪಟ್ಟಿದೆ. ಆದರೆ ಜಲಮಾರ್ಗಗಳನ್ನು ಅವುಗಳ ಪೂರ್ಣ ಸಾಮರ್ಥ್ಯಕ್ಕೆ ಹಿಂದೆಂದೂ ಬಳಸಲಾಗಿಲ್ಲ. ವಾಟರ್ ಮೆಟ್ರೊ, ರಸ್ತೆಗಳು ಮತ್ತು ಉಪನಗರ ರೈಲ್ವೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಪ್ರತಿಪಾದಿಸಿದ್ದಾರೆ.</p><p>ವಾಟರ್ ಮೆಟ್ರೊ ಯೋಜನೆಯು ನಗರ ಸಾರಿಗೆಯನ್ನು ಸುಧಾರಿಸಲಿದೆ. ಮುಂಬೈ ಪ್ರವಾಸೋದ್ಯಮಕ್ಕೆ ಇಂಬು ನೀಡಲಿದೆ ಎಂದು ರಾಣೆ ವಿವರಿಸಿದ್ದಾರೆ.</p>.Budget | ದ.ಕನ್ನಡಕ್ಕೆ ಭರಪೂರ ಯೋಜನೆ: ಮೆಡಿಕಲ್ ಕಾಲೇಜು, ಕ್ರೂಸ್, ವಾಟರ್ ಮೆಟ್ರೊ.<p>ನಾರಂಗಿ-ಖರ್ವದೇಶ್ವರಿ, ವಸೈ-ಮೀರಾ ಭಾಯಂದರ್, ಫೌಂಟೇನ್ ಜೆಟ್ಟಿ-ಗೈಮುಖ್-ನಾಗಲೆ, ಕೋಲ್ಸೆಟ್-ಕಲ್ಹೇರ್-ಮುಂಬ್ರಾ-ಕಲ್ಯಾಣ್, ಕಲ್ಯಾಣ್-ಮುಂಬ್ರಾ-ಮುಲುಂಡ್-ಐರೋಲಿ, ವಾಶಿ-ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ (ಡಿಸಿಟಿ) ಎಂದೂ ಕರೆಯುತ್ತಾರೆ. ಡಿಸಿಟಿ-ಗೇಟ್ವೇ ಆಫ್ ಇಂಡಿಯಾ, ಮೀರಾ ಭಾಯಂದರ್-ವಸಾಯಿ-ಬೋರಿವಲಿ-ನರೀಮನ್ ಪಾಯಿಂಟ್-ಮಾಂಡ್ವಾ, ಬೇಲಾಪುರ-ಗೇಟ್ವೇ-ಮಾಂಡ್ವಾ, ಬೊರಿವಲಿ-ಗೊರೈ-ನರೀಮನ್ ಪಾಯಿಂಟ್ ಸಂಭವ್ಯ ಮಾರ್ಗಗಳು ಎಂದು ರಾಣೆ ಮಾಹಿತಿ ನೀಡಿದ್ದಾರೆ.</p><p>ಡಿಸೆಂಬರ್ 2023ರಲ್ಲಿ ಕೊಚ್ಚಿಯಲ್ಲಿ ಮೊದಲ ಬಾರಿಗೆ ವಾಟರ್ ಮೆಟ್ರೊ ಆರಂಭವಾಗಿತ್ತು. ಆ ಮೂಲಕ ಈ ಸಾರಿಗೆ ವ್ಯವಸ್ಥೆ ಹೊಂದಿದ ಮೊದಲ ನಗರ ಎಂಬ ಕೀರ್ತಿಗೂ ಪಾತ್ರವಾಗಿತ್ತು.</p>.ಕೊಚ್ಚಿಯಲ್ಲಿ ₹1,137 ಕೋಟಿ ವೆಚ್ಚದ ವಾಟರ್ ಮೆಟ್ರೊ.. ಇಲ್ಲಿದೆ ಅದರ ವಿಶೇಷತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>