<p><strong>ಲಖನೌ: </strong>ಇಲ್ಲಿನ ಮಾಲ್ವೊಂದರಲ್ಲಿ ಕೆಲವರು ‘ನಮಾಜ್’ ಮಾಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅಖಿಲ ಭಾರತೀಯ ಹಿಂದೂ ಮಹಾಸಭಾದ ಮುಖಂಡರು ಮಾಲ್ನಲ್ಲಿ ‘ಹನುಮಾನ್ ಚಾಲೀಸಾ’ ಪಠಿಸುವುದಾಗಿ ಗುರುವಾರ ಬೆದರಿಕೆಯೊಡ್ಡಿದ್ದಾರೆ.</p>.<p>ಈ ಸಂಬಂಧ ಮಹಾಸಭಾ ಪೊಲೀಸರಿಗೆ ದೂರು ಸಲ್ಲಿಸಿದೆ. ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಲು ಪೊಲೀಸರು ವಿಫಲರಾದರೆ, ಸಂಘಟನೆಯ ಸದಸ್ಯರು ಮಾಲ್ನಲ್ಲಿ ‘ಹನುಮಾನ್ ಚಾಲೀಸಾ’ ಪಠಿಸಲಿದ್ದಾರೆ ಎಂದು ಸಭಾ ತಿಳಿಸಿದೆ.</p>.<p>‘ಗಲ್ಫ್ ಮೂಲದ ಕಂಪನಿಯ ಒಡೆತನದ ಈ ಮಾಲ್ನಲ್ಲಿ ಶೇ 80ರಷ್ಟು ಸಿಬ್ಬಂದಿ ಮುಸ್ಲಿಂ ಸಮುದಾಯದವರು. ಇಲ್ಲಿ ಹಲವು ಹಿಂದೂ ಯುವತಿಯರೂ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮಾಲ್ನಲ್ಲಿ ನಮಾಜ್ ಮಾಡುವುದು ಸರಿಯಲ್ಲ’ ಎಂದು ಅಯೋಧ್ಯೆಯ ಹನುಮಾನ್ ದೇವಾಲಯವೊಂದರ ಅರ್ಚಕ ಮಹಾಂತ ರಾಜು ದಾಸ್ಹೇಳಿದ್ದಾರೆ.</p>.<p>‘ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಆಗಿಯೇ ಇರಬೇಕು.ಅದನ್ನು ಮಸೀದಿ ಮಾಡಲು ಸರ್ಕಾರ ಬಿಡಬಾರದು’ ಎಂದು ಹಿಂದೂ ಮಹಾಸಭಾದ ಮುಖಂಡ ಚತುರ್ವೇದಿ ಆಗ್ರಹಿಸಿದ್ದಾರೆ.</p>.<p><strong>ಆಡಳಿತ ಮಂಡಳಿ ಪ್ರತಿಕ್ರಿಯೆ:</strong> ‘ಮಾಲ್ನ ಸಿಬ್ಬಂದಿ ಅಥವಾ ಹೊರಗಿನವರಿಗೆ ಇಲ್ಲಿ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿತ್ತಾ ಎಂಬುದರ ಕುರಿತು ಪರಿಶೀಲಿಸುತ್ತಿರುವುದಾಗಿ’ ಮಾಲ್ನ ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ. ಈ ಮಾಲ್ ಅನ್ನು ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉದ್ಘಾಟಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ: </strong>ಇಲ್ಲಿನ ಮಾಲ್ವೊಂದರಲ್ಲಿ ಕೆಲವರು ‘ನಮಾಜ್’ ಮಾಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅಖಿಲ ಭಾರತೀಯ ಹಿಂದೂ ಮಹಾಸಭಾದ ಮುಖಂಡರು ಮಾಲ್ನಲ್ಲಿ ‘ಹನುಮಾನ್ ಚಾಲೀಸಾ’ ಪಠಿಸುವುದಾಗಿ ಗುರುವಾರ ಬೆದರಿಕೆಯೊಡ್ಡಿದ್ದಾರೆ.</p>.<p>ಈ ಸಂಬಂಧ ಮಹಾಸಭಾ ಪೊಲೀಸರಿಗೆ ದೂರು ಸಲ್ಲಿಸಿದೆ. ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಲು ಪೊಲೀಸರು ವಿಫಲರಾದರೆ, ಸಂಘಟನೆಯ ಸದಸ್ಯರು ಮಾಲ್ನಲ್ಲಿ ‘ಹನುಮಾನ್ ಚಾಲೀಸಾ’ ಪಠಿಸಲಿದ್ದಾರೆ ಎಂದು ಸಭಾ ತಿಳಿಸಿದೆ.</p>.<p>‘ಗಲ್ಫ್ ಮೂಲದ ಕಂಪನಿಯ ಒಡೆತನದ ಈ ಮಾಲ್ನಲ್ಲಿ ಶೇ 80ರಷ್ಟು ಸಿಬ್ಬಂದಿ ಮುಸ್ಲಿಂ ಸಮುದಾಯದವರು. ಇಲ್ಲಿ ಹಲವು ಹಿಂದೂ ಯುವತಿಯರೂ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮಾಲ್ನಲ್ಲಿ ನಮಾಜ್ ಮಾಡುವುದು ಸರಿಯಲ್ಲ’ ಎಂದು ಅಯೋಧ್ಯೆಯ ಹನುಮಾನ್ ದೇವಾಲಯವೊಂದರ ಅರ್ಚಕ ಮಹಾಂತ ರಾಜು ದಾಸ್ಹೇಳಿದ್ದಾರೆ.</p>.<p>‘ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಆಗಿಯೇ ಇರಬೇಕು.ಅದನ್ನು ಮಸೀದಿ ಮಾಡಲು ಸರ್ಕಾರ ಬಿಡಬಾರದು’ ಎಂದು ಹಿಂದೂ ಮಹಾಸಭಾದ ಮುಖಂಡ ಚತುರ್ವೇದಿ ಆಗ್ರಹಿಸಿದ್ದಾರೆ.</p>.<p><strong>ಆಡಳಿತ ಮಂಡಳಿ ಪ್ರತಿಕ್ರಿಯೆ:</strong> ‘ಮಾಲ್ನ ಸಿಬ್ಬಂದಿ ಅಥವಾ ಹೊರಗಿನವರಿಗೆ ಇಲ್ಲಿ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿತ್ತಾ ಎಂಬುದರ ಕುರಿತು ಪರಿಶೀಲಿಸುತ್ತಿರುವುದಾಗಿ’ ಮಾಲ್ನ ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ. ಈ ಮಾಲ್ ಅನ್ನು ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉದ್ಘಾಟಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>