<p><strong>ನವದೆಹಲಿ</strong>: ದೇಶದಲ್ಲಿ ಮುದ್ರಣ ಮಾಧ್ಯಮಗಳಿಗೆ ಆಗುತ್ತಿರುವ ನ್ಯೂಸ್ ಪ್ರಿಂಟ್ನ ಸಮಸ್ಯೆ ಬಗ್ಗೆ ‘ದಿ ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ’ (INS) ತೀವ್ರ ಕಳವಳ ವ್ಯಕ್ತಪಡಿಸಿದೆ.</p><p>ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಐಎನ್ಎಸ್, ಭಾರತದಲ್ಲಿ ನ್ಯೂಸ್ ಪ್ರಿಂಟ್ನ (ಸುದ್ದಿ ಪತ್ರಿಕೆಗಳನ್ನು ತಯಾರಿಸಲು ಬಳಸುವ ಕಚ್ಚಾ ಕಾಗದ) ಸಮಸ್ಯೆ ಹೀಗೆ ಮುಂದುವರಿದಲ್ಲಿ ಮುದ್ರಣ ಮಾಧ್ಯಮವನ್ನು ವಿಸ್ತರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.</p><p>ಭಾರತದಲ್ಲಿ ನ್ಯೂಸ್ ಪ್ರಿಂಟ್ಗಾಗಿ ಅತಿಯಾಗಿ ಆಮದಿನ ಮೇಲೆಯೇ ಅವಲಂಬನೆ ಇದೆ. ಇದು ತಗ್ಗುತ್ತಿಲ್ಲ. ವಿದೇಶಗಳಿಂದಲೇ ಶೇ 60 ರಷ್ಟು ನ್ಯೂಸ್ ಪ್ರಿಂಟ್ನ್ನು ತರಿಸಿಕೊಳ್ಳುತ್ತಿದ್ದೇವೆ. ಇದರಿಂದ ವೆಚ್ಚವೂ ಹೆಚ್ಚು. ದೇಶೀಯವಾಗಿ ಉದ್ಯಮಗಳು ಶೇ 40 ರಷ್ಟು ನ್ಯೂಸ್ ಪ್ರಿಂಟ್ ಅನ್ನು ಉತ್ಪಾದಿಸಲೂ ಹೆಣಗಾಡುತ್ತಿವೆ ಎಂದು ಹೇಳಿದೆ.</p><p>ಸುಮಾರು 2 ದಶಕಗಳಿಂದ ಇದೇ ಪರಿಸ್ಥಿತಿ ದೇಶದಲ್ಲಿರುವುದರಿಂದ ಮುದ್ರಣ ಮಾಧ್ಯಮಗಳನ್ನು ನಡೆಸುವುದು ಕಷ್ಟವಾಗಿದೆ. ಆದರೆ, ಮುದ್ರಣ ಮಾಧ್ಯಮವು ದೇಶದ ಸಾರ್ವಜನಿಕ ವಿಷಯಗಳ ಚರ್ಚೆಗೆ ಅತ್ಯವಶ್ಯಕವಾಗಿದೆ ಎಂದು ಐಎನ್ಎಸ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದೇಶದಲ್ಲಿ ಮುದ್ರಣ ಮಾಧ್ಯಮಗಳಿಗೆ ಆಗುತ್ತಿರುವ ನ್ಯೂಸ್ ಪ್ರಿಂಟ್ನ ಸಮಸ್ಯೆ ಬಗ್ಗೆ ‘ದಿ ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ’ (INS) ತೀವ್ರ ಕಳವಳ ವ್ಯಕ್ತಪಡಿಸಿದೆ.</p><p>ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಐಎನ್ಎಸ್, ಭಾರತದಲ್ಲಿ ನ್ಯೂಸ್ ಪ್ರಿಂಟ್ನ (ಸುದ್ದಿ ಪತ್ರಿಕೆಗಳನ್ನು ತಯಾರಿಸಲು ಬಳಸುವ ಕಚ್ಚಾ ಕಾಗದ) ಸಮಸ್ಯೆ ಹೀಗೆ ಮುಂದುವರಿದಲ್ಲಿ ಮುದ್ರಣ ಮಾಧ್ಯಮವನ್ನು ವಿಸ್ತರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.</p><p>ಭಾರತದಲ್ಲಿ ನ್ಯೂಸ್ ಪ್ರಿಂಟ್ಗಾಗಿ ಅತಿಯಾಗಿ ಆಮದಿನ ಮೇಲೆಯೇ ಅವಲಂಬನೆ ಇದೆ. ಇದು ತಗ್ಗುತ್ತಿಲ್ಲ. ವಿದೇಶಗಳಿಂದಲೇ ಶೇ 60 ರಷ್ಟು ನ್ಯೂಸ್ ಪ್ರಿಂಟ್ನ್ನು ತರಿಸಿಕೊಳ್ಳುತ್ತಿದ್ದೇವೆ. ಇದರಿಂದ ವೆಚ್ಚವೂ ಹೆಚ್ಚು. ದೇಶೀಯವಾಗಿ ಉದ್ಯಮಗಳು ಶೇ 40 ರಷ್ಟು ನ್ಯೂಸ್ ಪ್ರಿಂಟ್ ಅನ್ನು ಉತ್ಪಾದಿಸಲೂ ಹೆಣಗಾಡುತ್ತಿವೆ ಎಂದು ಹೇಳಿದೆ.</p><p>ಸುಮಾರು 2 ದಶಕಗಳಿಂದ ಇದೇ ಪರಿಸ್ಥಿತಿ ದೇಶದಲ್ಲಿರುವುದರಿಂದ ಮುದ್ರಣ ಮಾಧ್ಯಮಗಳನ್ನು ನಡೆಸುವುದು ಕಷ್ಟವಾಗಿದೆ. ಆದರೆ, ಮುದ್ರಣ ಮಾಧ್ಯಮವು ದೇಶದ ಸಾರ್ವಜನಿಕ ವಿಷಯಗಳ ಚರ್ಚೆಗೆ ಅತ್ಯವಶ್ಯಕವಾಗಿದೆ ಎಂದು ಐಎನ್ಎಸ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>