ಪಟ್ನಾ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿರುವ ಜೆಡಿ(ಯು) ನಾಯಕ ನಿತೀಶ್ ಕುಮಾರ್, ‘ಮಹಾಘಟಬಂಧ’ನ (ಆರ್ಜೆಡಿ, ಜೆಡಿಯು, ಕಾಂಗ್ರೆಸ್ ಸೇರಿ ಇತರ ಪಕ್ಷಗಳ ಮೈತ್ರಿ) ಶಾಸಕಾಂಗ ಪಕ್ಷದ ನಾಯಕರಾಗಿ ಮಂಗಳವಾರ ಆಯ್ಕೆಯಾದರು.
ಬಳಿಕ ರಾಜಭವನಕ್ಕೆ ತೆರಳಿದ ಅವರು, ‘ಮಹಾಘಟಬಂಧ’ನ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಹಕ್ಕು ಮಂಡಿಸಿದರು.
ಇದಕ್ಕೂ ಮುನ್ನ ಮಾತನಾಡಿದ್ದ ನಿತೀಶ್ ಕುಮಾರ್, ಎಲ್ಲ ಸಂಸದರು, ಶಾಸಕರು ಒಮ್ಮತಕ್ಕೆ ಬಂದ ಬಳಿಕವೇ ಎನ್ಡಿಎ ಮೈತ್ರಿಕೂಟ ತೊರೆಯುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದರು.
ಜೆಡಿ(ಯು) ವಿರುದ್ಧ ಬಿಜೆಪಿ ಆಕ್ರೋಶ:
2020ರ ವಿಧಾನಸಭೆ ಚುನಾವಣೆಯನ್ನು ತಮ್ಮ ಜತೆಗಿನ ಮೈತ್ರಿಯೊಂದಿಗೆ ಎದುರಿಸಿದ್ದ ಜೆಡಿ(ಯು) ಈಗ ದ್ರೋಹ ಬಗೆದಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಚುನಾವಣೆಯನ್ನು ಒಟ್ಟಿಗೆ ಎದುರಿಸಲಾಗಿತ್ತು. ನಾವು (ಬಿಜೆಪಿ) ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದೆವು. ಆದರೂ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡಿದ್ದೆವು. ಇಂದು ಅವರು ದ್ರೋಹ ಬಗೆದಿದ್ದಾರೆ ಎಂದು ಬಿಜೆಪಿಯ ಬಿಹಾರ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ದೂರಿದ್ದಾರೆ.
Bihar | We fought the 2020 polls together under NDA, the mandate was for JD-U and BJP, we won more seats despite that, Nitish Kumar was made the CM. Whatever happened today is a betrayal of Bihar's people & the BJP: Bihar BJP chief Sanjay Jaiswal pic.twitter.com/VUL5OVvizT