ದೆಹಲಿಯ ಹಿಂಸಾಚಾರ ಘಟನೆಗಳಿಂದ ಕಾಂಗ್ರೆಸ್ ಪಕ್ಷ ಹಾಗೂ ಇಡೀ ದೇಶವೇ ನೋವಿಗೊಳಗಾಗಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆಗಳಿಗೆ ಸ್ಥಾನವಿಲ್ಲ. ಚಳವಳಿಗಾರರು ತಮ್ಮ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅಹಿಂಸೆ ಹಾಗೂ ಶಾಂತಿ ರೈತ ಆಂದೋಲನದ ಬಹುದೊಡ್ಡ ಶಕ್ತಿಯಾಗಿ ಉಳಿದಿದೆ. ಮೂರು ಕೃಷಿ ಕಾಯ್ದೆಗಳನ್ನುರದ್ದುಗೊಳಿಸುವ ವರೆಗೂ ರೈತರು ಶಾಂತಿಯುತ ಹೋರಾಟಕ್ಕೆ ಬದ್ಧರಾಗಿರುತ್ತಾರೆ ಎಂದು ನಾವು ಪ್ರಮಾಣಿಕವಾಗಿ ಭಾವಿಸುತ್ತೇವೆ ಎಂದು ತಿಳಿಸಿದರು.