ನವದೆಹಲಿ: ’ಕಾಂಗ್ರೆಸ್ ಪಕ್ಷಕ್ಕೆ ಮರಳುವ ಯೋಚನೆಯಿಲ್ಲ’ ಎಂದುಹಿರಿಯ ರಾಜಕಾರಣಿ, ಡೆಮಾಕ್ರಟಿಕ್ ಆಜಾದ್ ಪಕ್ಷದ (ಡಿಎಪಿ) ಅಧ್ಯಕ್ಷ ಗುಲಾಮ್ ನಬಿ ಆಜಾದ್ ಶುಕ್ರವಾರ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರು ಕಾಂಗ್ರೆಸ್ ತೊರೆದಿದ್ದರು.
ಕಾಂಗ್ರೆಸ್ನಯಾವ ನಾಯಕರೂ ನನ್ನನ್ನು ಕರೆದಿಲ್ಲ. ಈ ರೀತಿಯ ಕತೆಗಳು ಮಾಧ್ಯಮಗಳಲ್ಲಿ ಹೇಗೆ ಹುಟ್ಟಿಕೊಂಡಿತು ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ನಾಯಕರು ಈ ರೀತಿಯ ಊಹಾಪೋಹಗಳನ್ನು ಹಬ್ಬಿಸಿದ್ದಾರೆ. ’ಏನೇ ಬರಲಿ ನಾವು ಇನ್ನೂ ಬಲಿಷ್ಠರಾಗುತ್ತೇವೆ’ ಎಂದು ಅವರು ಹೇಳಿದ್ದಾರೆ.