ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಆಯ್ತು, ದೆಹಲಿಯಲ್ಲೂ ಅಧಿಕಾರ ಸ್ಥಾಪಿಸ್ತೀವಿ: ಶಿವಸೇನಾದ ರಾವುತ್ ವಿಶ್ವಾಸ

ಇದು ಸೂರ್ಯಯಾನ, ಮುಂಬೈಯಲ್ಲಿ ಸೇಫ್ ಆಗಿ 'ಲ್ಯಾಂಡ್' ಆಗಿದೆ ಎಂದ ಸಂಜಯ್
Last Updated 27 ನವೆಂಬರ್ 2019, 9:27 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪಟ್ಟವೇರಲು ಸಕಲ ಸಿದ್ಧತೆ ನಡೆಯುತ್ತಿರುವಂತೆಯೇ, ಶಿವಸೇನಾವುದೆಹಲಿ ಗದ್ದುಗೆಯನ್ನೇರಿದರೂಅಚ್ಚರಿ ಪಡಬೇಡಿ ಎಂದು ಪಕ್ಷದ ವಕ್ತಾರ ಸಂಜಯ್ ರಾವುತ್ ಬುಧವಾರ ಹೇಳಿದ್ದಾರೆ.

ಇದನ್ನೂ ಓದಿ:
"ಮೊದಲ ದಿನದಿಂದಲೇ ನಾವೇ ಸರಕಾರ ರಚಿಸುತ್ತೇವೆ ಅಂತ ನಾನು ಹೇಳುತ್ತಲೇ ಬಂದಿದ್ದೆ. ನಮ್ಮ 'ಸೂರ್ಯಯಾನ'ವು ಮಹಾರಾಷ್ಟ್ರದ ಮಂತ್ರಾಲಯದ 6ನೇ ಮಹಡಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತದೆ ಎಂದಿದ್ದೆ ನಾನು. ಅಂದು ಎಲ್ಲರೂ ನಗುತ್ತಿದ್ದರು. ಆದರೆ ನಮ್ಮ ಸೂರ್ಯಯಾನದ ಸೇಫ್ ಲ್ಯಾಂಡಿಂಗ್ ಆಗಿಬಿಟ್ಟಿದೆ" ಎಂದು ರಾವುತ್ ಹೇಳಿದ್ದಾರೆ.

ಇದನ್ನೂ ಓದಿ:
ಮುಂದಿನ ದಿನಗಳಲ್ಲಿ ಈ ಸೂರ್ಯಯಾನವು ದೆಹಲಿಯಲ್ಲಿ ಲ್ಯಾಂಡ್ ಆದರೂ ಅಚ್ಚರಿಪಡಬೇಕಿಲ್ಲ ಎಂದು ರಾವುತ್ ಹೇಳಿದ್ದಾರೆ. ಸೂರ್ಯಯಾನ ಎಂದು ಅವರು ಸಂಬೋಧಿಸಿರುವುದು ಶಿವಸೇನಾದ ನಾಯಕನೊಬ್ಬನನ್ನು.

ಇದನ್ನೂ ಓದಿ:
ಬಿಜೆಪಿ ಜತೆ ಸೇರಿಕೊಂಡು, ಉಪಮುಖ್ಯಮಂತ್ರಿಯಾಗಿ ಮೂರು ದಿನಗಳ ಬಳಿಕ ರಾಜೀನಾಮೆ ನೀಡಿದ ಶಿವಸೇನಾ ಮುಖಂಡ ಅಜಿತ್ ಪವಾರ್ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು, "ಅಜಿತ್ ವಾಪಸ್ ಬಂದೇ ಬರುತ್ತಾರೆ ಅಂತ ನಾನು ಹೇಳಿದ್ದೆ. ಅಷ್ಟೇ ಅಲ್ಲ, ಅಜಿತ್ ಪವಾರ್‌ರನ್ನು ಅರ್ಥ ಮಾಡಿಕೊಳ್ಳಲು 100 ವರ್ಷಗಳೇ ಬೇಕಾಗಬಹುದು ಎಂದೂ ಹೇಳಿದ್ದೆ" ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಇದನ್ನೂ ಓದಿ:
ದೇವೇಂದ್ರ ಫಡಣವೀಸ್ ಹಾಗೂ ಅಜಿತ್ ಪವಾರ್ ಮಂಗಳವಾರದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡುವ ಮೂಲಕ, ಶಿವಸೇನಾ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟವು ಅಧಿಕಾರಕ್ಕೇರಲು ಅನುವುಮಾಡಿಕೊಟ್ಟಿದ್ದರು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT