‘ಆರೋಪಿತ ವ್ಯಕ್ತಿಯು ಇದೇ ರೀತಿಯ ಅಪರಾಧಗಳನ್ನು ಮತ್ತೆ ಎಸಗುವ ಸಾಧ್ಯತೆಗಳು ಹೆಚ್ಚು ಹಾಗೂ ಇದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯ ತಪ್ಪಿದ್ದಲ್ಲ. ಅದರಲ್ಲೂ, ಮಹಿಳೆಯರಲ್ಲಿ ಭಯ ಮತ್ತು ಅಸುರಕ್ಷತೆ ಭಾವನೆ ಮೂಡುತ್ತದೆ’ ಎಂದು ಬಂಡಿ ನಾರಾಯಣ ವಿರುದ್ಧ ಗುಂಟೂರು ಜಿಲ್ಲಾಧಿಕಾರಿ ಕಳೆದ ವರ್ಷ ಜೂನ್ 30ರಂದು ಹೊರಡಿಸಿದ್ದ ರಕ್ಷಣಾತ್ಮಕ ಬಂಧನ ಕುರಿತ ಆದೇಶದಲ್ಲಿ ತಿಳಿಸಿದ್ದರು.