‘ಚೀನಾ ವಿಸ್ತರಣಾವಾದವನ್ನು ಅನುಸರಿಸುತ್ತಿದೆ. ಆದರೆ ವಿಸ್ತರಣಾ ಮನೋಭಾವ ಹೊಂದಿರುವವರನ್ನು ತಡೆಯುವುದು ನಮ್ಮ ನೀತಿಯಾಗಿದೆ’ ಎಂದು ಆರ್ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಹೇಳಿದರು.
ಕಾಶ್ಮೀರವಿಲ್ಲದೆ ದೇಶ ಅಪೂರ್ಣ ಎಂದು ಪಾಕಿಸ್ತಾನದ ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಕರಾಚಿ, ನನಕಾನ ಸಾಹಿಬ ಮತ್ತು ಶಾರದ ಪೀಠಗಳಿಲ್ಲದೆ ಭಾರತವೂ ಅಪೂರ್ಣ ಎಂದು ಭಾರತದ ಸಾಮಾನ್ಯ ಜನರು ಅಭಿಪ್ರಾಯಪಟ್ಟಿದ್ದಾರೆ ಎಂದು ಇಂದ್ರೇಶ್ ತಿಳಿಸಿದರು.