‘ದೇಶದ ಮಾಜಿ ರಾಷ್ಟ್ರಪತಿಯೇ ಈ ಸಮಿತಿಯ ನೇತೃತ್ವ ವಹಿಸಿದ್ದಾರೆ. ಆದರೆ, ಸಮಿತಿ ನಡೆಸುವ ಸಮಾಲೋಚನೆಯು ತೋರಿಕೆಯದ್ದು ಮಾತ್ರ ಎಂದು ಸಾಮಾನ್ಯ ಮತದಾರರಿಗೆ ಕೂಡ ಅನಿಸುತ್ತಿರುವುದು ನೋವು ತರುವಂಥದ್ದು. ಪ್ರಸ್ತಾವದ ಪರವಾಗಿ ಪ್ರಬಲವಾಗಿ ಅನಿಸಿಕೆಗಳನ್ನು ಈಗಾಗಲೇ ಸಾರ್ವಜನಿಕವಾಗಿ ಹೇಳಿಯಾಗಿದೆ. ಪ್ರಸ್ತಾವದ ಸಾಧಕ, ಬಾಧಕಗಳ ಬಗ್ಗೆ ರಾಗದ್ವೇಷಗಳು ಇಲ್ಲದೆ ವಿಶ್ಲೇಷಣೆ ನಡೆಸುವ ಗಂಭೀರ ಹಾಗೂ ವ್ಯವಸ್ಥಿತ ಯತ್ನವು ಆಗುತ್ತಿಲ್ಲ’ ಎಂದು ಖರ್ಗೆ ಅವರು ಪತ್ರದಲ್ಲಿ ಬರೆದಿದ್ದಾರೆ.