ಶುಕ್ರವಾರ ಅದಾನಿ ಒಡೆತನದ ಖಾಸಗಿ ವಾಹಿನಿಯೊಂದಕ್ಕೆ ಶರದ್ ಪವಾರ್ ಸಂದರ್ಶನ ನೀಡಿದ್ದರು. ಈ ವೇಳೆ ಹಿಂಡೆನ್ಬರ್ಗ್ ವರದಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಶರದ್ ಪವಾರ್,‘ಇಂತಹ ಆಪಾದನೆಯನ್ನು ಹಿಂದೆಯೂ ಮಾಡಲಾಗಿತ್ತು. ಈ ಭಾರಿಯ ಆರೋಪ ಸಂಸತ್ತಿನಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಈ ಹೇಳಿಕೆ ನೀಡಿದವರು ಯಾರು? ಅವರ ಹಿನ್ನೆಲೆಯೇನು? ನಾವು ಎಂದಿಗೂ ಈ ವ್ಯಕ್ತಿಗಳ ಬಗ್ಗೆ ಕೇಳಿಯೇ ಇಲ್ಲ. ಈ ವರದಿ ಹೊರಬಂದ ಮೇಲೆ ದೇಶದಾದ್ಯಂತ ಕೋಲಾಹಲ ಎದ್ದಿದ್ದು, ಇದು ದೇಶದ ಆರ್ಥಿಕತೆಯ ಮೇಲೆ ಬಹಳ ಪರಿಣಾಮ ಬೀರಿದೆ. ಮೇಲ್ನೋಟಕ್ಕೆ ಒಬ್ಬ ವ್ಯಕ್ತಿಯನ್ನು ಗುರಿ ಮಾಡಿಕೊಂಡು ಸೃಷ್ಟಿಸಿದ ವರದಿಯಂತೆ ಕಾಣಿಸುತ್ತಿದೆ‘ ಎಂದು ಹೇಳಿದ್ದರು.