<p><strong>ಹೈದರಾಬಾದ್:</strong> ‘ವಕ್ಫ್ ತಿದ್ದುಪಡಿ ಮಸೂದೆಗೆ ನೀಡಿರುವ ಬೆಂಬಲವನ್ನು ಮಗನ ಭವಿಷ್ಯಕ್ಕಾಗಿ ವಾಪಸ್ ಪಡೆಯಿರಿ’ ಎಂದು ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ಧೀನ್ ಓವೈಸಿ ಅವರು ಭಾನುವಾರ ರಾತ್ರಿ ಆಗ್ರಹಿಸಿದರು.</p>.<p>ಕರ್ನೂಲ್ನಲ್ಲಿ ಜಮಾಯಿಸಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಮಸೂದೆಗೆ ಬೆಂಬಲ ನೀಡುವುದರ ಮೂಲಕ ನಿಮ್ಮ ಮಗನನ್ನು ಗಂಡಾಂತರಕ್ಕೆ ಗುರಿ ಮಾಡುತ್ತಿದ್ದೀರಿ’ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಎಚ್ಚರಿಸಿದರು.</p>.<p>‘ವಕ್ಫ್ ತಿದ್ದುಪಡಿ ಮಸೂದೆಯಿಂದ ಆಗುವ ಪ್ರಯೋಜನಗಳನ್ನು ಸಾರ್ವಜನಿಕರಿಗೆ ವಿವರಿಸಿ’ ಎಂದು ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.</p>.<p>‘ಅಮರಾವತಿಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ನೀಡುತ್ತಿರುವ ಬೆಂಬಲಕ್ಕೆ ಪರ್ಯಾಯವಾಗಿ, ದೇಶದ ಸಂವಿಧಾನವನ್ನು ದುರ್ಬಲಗೊಳಿಸಲು ಬೆಂಬಲ ನೀಡುತ್ತಿದ್ದೀರಿ’ ಎಂದು ಟೀಕಿಸಿದರು.</p>.<p>‘ಟಿಡಿಪಿಯು ತನ್ನ ಬೆಂಬಲವನ್ನು ವಾಪಸ್ ಪಡೆದರೆ ಮಸೂದೆಯು ಕಾನೂನು ಆಗುವುದಿಲ್ಲ. ಆದರೆ ಮಸೂದೆಯನ್ನು ಬೆಂಬಲಿಸುವ ಮೂಲಕ ನೀವು ನಿಮ್ಮ ಪಕ್ಷಕ್ಕಷ್ಟೇ ಅಪಾಯವನ್ನುಂಟು ಮಾಡುತ್ತಿಲ್ಲ. ನಿಮ್ಮ ಮಗನ ಭವಿಷ್ಯಕ್ಕೂ ತೊಂದರೆ ಮಾಡುತ್ತಿದ್ದೀರಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ‘ವಕ್ಫ್ ತಿದ್ದುಪಡಿ ಮಸೂದೆಗೆ ನೀಡಿರುವ ಬೆಂಬಲವನ್ನು ಮಗನ ಭವಿಷ್ಯಕ್ಕಾಗಿ ವಾಪಸ್ ಪಡೆಯಿರಿ’ ಎಂದು ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ಧೀನ್ ಓವೈಸಿ ಅವರು ಭಾನುವಾರ ರಾತ್ರಿ ಆಗ್ರಹಿಸಿದರು.</p>.<p>ಕರ್ನೂಲ್ನಲ್ಲಿ ಜಮಾಯಿಸಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಮಸೂದೆಗೆ ಬೆಂಬಲ ನೀಡುವುದರ ಮೂಲಕ ನಿಮ್ಮ ಮಗನನ್ನು ಗಂಡಾಂತರಕ್ಕೆ ಗುರಿ ಮಾಡುತ್ತಿದ್ದೀರಿ’ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಎಚ್ಚರಿಸಿದರು.</p>.<p>‘ವಕ್ಫ್ ತಿದ್ದುಪಡಿ ಮಸೂದೆಯಿಂದ ಆಗುವ ಪ್ರಯೋಜನಗಳನ್ನು ಸಾರ್ವಜನಿಕರಿಗೆ ವಿವರಿಸಿ’ ಎಂದು ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.</p>.<p>‘ಅಮರಾವತಿಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ನೀಡುತ್ತಿರುವ ಬೆಂಬಲಕ್ಕೆ ಪರ್ಯಾಯವಾಗಿ, ದೇಶದ ಸಂವಿಧಾನವನ್ನು ದುರ್ಬಲಗೊಳಿಸಲು ಬೆಂಬಲ ನೀಡುತ್ತಿದ್ದೀರಿ’ ಎಂದು ಟೀಕಿಸಿದರು.</p>.<p>‘ಟಿಡಿಪಿಯು ತನ್ನ ಬೆಂಬಲವನ್ನು ವಾಪಸ್ ಪಡೆದರೆ ಮಸೂದೆಯು ಕಾನೂನು ಆಗುವುದಿಲ್ಲ. ಆದರೆ ಮಸೂದೆಯನ್ನು ಬೆಂಬಲಿಸುವ ಮೂಲಕ ನೀವು ನಿಮ್ಮ ಪಕ್ಷಕ್ಕಷ್ಟೇ ಅಪಾಯವನ್ನುಂಟು ಮಾಡುತ್ತಿಲ್ಲ. ನಿಮ್ಮ ಮಗನ ಭವಿಷ್ಯಕ್ಕೂ ತೊಂದರೆ ಮಾಡುತ್ತಿದ್ದೀರಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>