ಅನಂತನಾಗ ಜಿಲ್ಲೆಯಲ್ಲಿ ಮಂಗಳವಾರ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಘಟನೆಯಲ್ಲಿ ಜೈಷ್ ಎ ಮೊಹಮದ್ ಸಂಘಟನೆಯ ಇಬ್ಬರು ಉಗ್ರರನ್ನು ಸೇನೆ ಹೊಡೆದುರಿಳಿಸಿದೆ. ಇಬ್ಬರ ಪೈಕಿ ಒಬ್ಬಾತನನ್ನು ಸಜದ್ ಭಟ್ ಎಂದು ಗುರತಿಸಲಾಗಿದ್ದು, ಈತ ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದಿದ್ದ ಬಾಂಬ್ ದಾಳಿಗೆ ಬಳಿಸಿದ ಮಾರುತಿ ಇಕೋ ಕಾರಿನ ಮಾಲೀಕ. ಮತ್ತೊಬ್ಬನನ್ನು ತೌಸೀಫ್ ಅಹ್ಮದ್ ಭಟ್ ಎಂದು ಗುರುತು ಮಾಡಲಾಗಿದೆ.