‘1965ರ ಯುದ್ಧದ ವೇಳೆ ಸೇನಾಪಡೆಗಳು ಕಾಶ್ಮೀರದಲ್ಲಿ ಮಾತ್ರ ಕಾದಾಡುತ್ತವೆ ಎಂದು ಪಾಕಿಸ್ತಾನ ಭಾವಿಸಿತ್ತು. ಆದರೆ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ, ಲಾಹೋರ್ನಲ್ಲಿನ ಗಡಿ ನಿಯಂತ್ರಣ ರೇಖೆಯ ಮುಂಚೂಣಿ ಪ್ರದೇಶಕ್ಕೆ ಸೇನೆಯನ್ನು ಕಳುಹಿಸಿದರು. ಇದನ್ನು ನಿರೀಕ್ಷಿಸದ ಪಾಕ್ಗೆ ಆಶ್ಚರ್ಯವಾಯಿತು. ಕಾರ್ಗಿಲ್ ಯುದ್ಧದ ವೇಳೆಯೂ ಬೊಫೋರ್ಸ್ ಬಂದೂಕುಗಳ ಸಹಿತ ಸೇನೆಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಅವರಿಗೆ ಮತ್ತೊಮ್ಮೆ ಆಶ್ಚರ್ಯವಾಗಿತ್ತು’ ಎಂದು ಅವರು ವಿವರಿಸಿದ್ದಾರೆ.