<p><strong>ಅಮರಾವತಿ</strong>: ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಪರವಾಗಿ ಮಾತನಾಡುವುದು ಸ್ವೀಕಾರಾರ್ಹವಲ್ಲ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p><p>ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು ಇಂತಹ ಹಿಂಸಾಚಾರಗಳನ್ನು ಸಮರ್ಥಿಸಿಕೊಳ್ಳುವ ಕೆಲವು ನಾಯಕರು ಭಾರತವನ್ನು ತೊರೆದು ಪಾಕಿಸ್ತಾನದಲ್ಲಿ ನೆಲಸಬೇಕೆಂದು ಪವನ್ ಹೇಳಿದ್ದಾರೆ.</p><p>'ಕಾಶ್ಮೀರ ನಮ್ಮದು. ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯ ಬಗ್ಗೆ ಮಾತನಾಡುವುದು ನಾಚಿಕೆಗೇಡಿನ ಸಂಗತಿ. ಕೋಮು ಹಿಂಸಾಚಾರವನ್ನು ತೊಲಗಿಸಲು ರಾಷ್ಟ್ರೀಯ ಏಕತೆ ಹಾಗೂ ಕಠಿಣ ಕ್ರಮಗಳು ಅತ್ಯಗತ್ಯ' ಎಂದು ಕಲ್ಯಾಣ್ ಯಾವುದೇ ನಾಯಕರ ಹೆಸರನ್ನು ಉಲ್ಲೇಖಿಸದೆ ಕಿಡಿಕಾರಿದ್ದಾರೆ.</p>.ಉಗ್ರರನ್ನು ಹಿಮ್ಮೆಟಿಸಲು ಐಕ್ಯತೆ ಅಗತ್ಯ: ದೇವೇಗೌಡ.ಬಿಎಸ್ಎಫ್ ಯೋಧನ ಸುರಕ್ಷಿತ ವಾಪಸಾತಿಗೆ ಕ್ರಮವೇನು?: ಕೇಂದ್ರಕ್ಕೆ ಕಾಂಗ್ರೆಸ್. <p>ದೇಶ ವಿರೋಧಿಸುವ ಅಥವಾ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವ ವ್ಯಕ್ತಿಗಳನ್ನು ರಾಷ್ಟ್ರ ಸಹಿಸುವುದಿಲ್ಲ. ಪಹಲ್ಗಾಮ್ ದಾಳಿಯಿಂದಾಗಿ ದೇಶ ನೋವಿನಲ್ಲಿದೆ. ಇಂತಹ ಸಂದರ್ಭದಲ್ಲಿ ಈ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ಪವನ್ ಹೇಳಿದ್ದಾರೆ.</p><p>ಈ ದಾಳಿಯಲ್ಲಿ ಆಂಧ್ರಪ್ರದೇಶದ ಜೆ.ಎಸ್. ಚಂದ್ರ ಮೌಳಿ ಅವರ ತಲೆಗೆ 30ರಿಂದ 40 ಗುಂಡುಗಳನ್ನು ಹಾರಿಸಿ, ಕೊಲ್ಲಲಾಗಿದೆ. ಹಿಂದೂಗಳಿಗೆ ಇರುವುದು ಒಂದೇ ದೇಶ ಭಾರತ. ಹಿಂದೂಗಳು ಮತ್ತೆಲ್ಲಿಗೆ ಹೋಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.</p><p>ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.</p>.ಕೆನಡಾ ಚುನಾವಣೆ: ಲಿಬರಲ್ ಪಕ್ಷದ ಮಾರ್ಕ್ ಕಾರ್ನೇಗೆ ಗೆಲುವು; PM ಮೋದಿ ಅಭಿನಂದನೆ.ಭಾರತದ ತಾಯಿ, ಪಾಕ್ ತಂದೆಗೆ ಜನಿಸಿದ ಮಕ್ಕಳ ಗಡೀಪಾರು: ಅಧಿಕಾರಿಗಳಿಗೆ ತಲೆಬಿಸಿ.ಜಗತ್ತಿನ ಮೊದಲ ಡಿಜಿಟಲ್ ದೇವತೆ ಮಲೇಷ್ಯಾದಲ್ಲಿ! ಎಐ ಮೂಲಕ ಭಕ್ತರೊಂದಿಗೆ ಮಾತು.Pahalgam Attack|ಭಾರತ ನನ್ನ ಮನೆ, ಪಾಕಿಸ್ತಾನಕ್ಕೆ ವಾಪಸ್ ಹೋಗಲ್ಲ; ಮಹಿಳೆ ಅಳಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರಾವತಿ</strong>: ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಪರವಾಗಿ ಮಾತನಾಡುವುದು ಸ್ವೀಕಾರಾರ್ಹವಲ್ಲ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p><p>ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು ಇಂತಹ ಹಿಂಸಾಚಾರಗಳನ್ನು ಸಮರ್ಥಿಸಿಕೊಳ್ಳುವ ಕೆಲವು ನಾಯಕರು ಭಾರತವನ್ನು ತೊರೆದು ಪಾಕಿಸ್ತಾನದಲ್ಲಿ ನೆಲಸಬೇಕೆಂದು ಪವನ್ ಹೇಳಿದ್ದಾರೆ.</p><p>'ಕಾಶ್ಮೀರ ನಮ್ಮದು. ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯ ಬಗ್ಗೆ ಮಾತನಾಡುವುದು ನಾಚಿಕೆಗೇಡಿನ ಸಂಗತಿ. ಕೋಮು ಹಿಂಸಾಚಾರವನ್ನು ತೊಲಗಿಸಲು ರಾಷ್ಟ್ರೀಯ ಏಕತೆ ಹಾಗೂ ಕಠಿಣ ಕ್ರಮಗಳು ಅತ್ಯಗತ್ಯ' ಎಂದು ಕಲ್ಯಾಣ್ ಯಾವುದೇ ನಾಯಕರ ಹೆಸರನ್ನು ಉಲ್ಲೇಖಿಸದೆ ಕಿಡಿಕಾರಿದ್ದಾರೆ.</p>.ಉಗ್ರರನ್ನು ಹಿಮ್ಮೆಟಿಸಲು ಐಕ್ಯತೆ ಅಗತ್ಯ: ದೇವೇಗೌಡ.ಬಿಎಸ್ಎಫ್ ಯೋಧನ ಸುರಕ್ಷಿತ ವಾಪಸಾತಿಗೆ ಕ್ರಮವೇನು?: ಕೇಂದ್ರಕ್ಕೆ ಕಾಂಗ್ರೆಸ್. <p>ದೇಶ ವಿರೋಧಿಸುವ ಅಥವಾ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವ ವ್ಯಕ್ತಿಗಳನ್ನು ರಾಷ್ಟ್ರ ಸಹಿಸುವುದಿಲ್ಲ. ಪಹಲ್ಗಾಮ್ ದಾಳಿಯಿಂದಾಗಿ ದೇಶ ನೋವಿನಲ್ಲಿದೆ. ಇಂತಹ ಸಂದರ್ಭದಲ್ಲಿ ಈ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ಪವನ್ ಹೇಳಿದ್ದಾರೆ.</p><p>ಈ ದಾಳಿಯಲ್ಲಿ ಆಂಧ್ರಪ್ರದೇಶದ ಜೆ.ಎಸ್. ಚಂದ್ರ ಮೌಳಿ ಅವರ ತಲೆಗೆ 30ರಿಂದ 40 ಗುಂಡುಗಳನ್ನು ಹಾರಿಸಿ, ಕೊಲ್ಲಲಾಗಿದೆ. ಹಿಂದೂಗಳಿಗೆ ಇರುವುದು ಒಂದೇ ದೇಶ ಭಾರತ. ಹಿಂದೂಗಳು ಮತ್ತೆಲ್ಲಿಗೆ ಹೋಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.</p><p>ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.</p>.ಕೆನಡಾ ಚುನಾವಣೆ: ಲಿಬರಲ್ ಪಕ್ಷದ ಮಾರ್ಕ್ ಕಾರ್ನೇಗೆ ಗೆಲುವು; PM ಮೋದಿ ಅಭಿನಂದನೆ.ಭಾರತದ ತಾಯಿ, ಪಾಕ್ ತಂದೆಗೆ ಜನಿಸಿದ ಮಕ್ಕಳ ಗಡೀಪಾರು: ಅಧಿಕಾರಿಗಳಿಗೆ ತಲೆಬಿಸಿ.ಜಗತ್ತಿನ ಮೊದಲ ಡಿಜಿಟಲ್ ದೇವತೆ ಮಲೇಷ್ಯಾದಲ್ಲಿ! ಎಐ ಮೂಲಕ ಭಕ್ತರೊಂದಿಗೆ ಮಾತು.Pahalgam Attack|ಭಾರತ ನನ್ನ ಮನೆ, ಪಾಕಿಸ್ತಾನಕ್ಕೆ ವಾಪಸ್ ಹೋಗಲ್ಲ; ಮಹಿಳೆ ಅಳಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>