ಸೀಟು ಹಂಚಿಕೆ ಸೂತ್ರದಂತೆ, ಜನಸೇನಾ ಪಕ್ಷಕ್ಕೆ ಕಾಕಿನಾಡ, ಮಚಿಲಿಪಟ್ನಂ ಲೋಕಸಭೆ ಕ್ಷೇತ್ರಗಳು ನಿಗದಿಯಾಗಿವೆ. ಮಚಿಲಿಪಟ್ನಂ ಕ್ಷೇತ್ರಕ್ಕೆ ವಲ್ಲಭನೇನಿ ಬಾಲಶೌರಿ ಅವರನ್ನು ಅಭ್ಯರ್ಥಿಯಾಗಿ ಈಗಾಗಲೇ ಜನಸೇನಾ ಆಯ್ಕೆ ಮಾಡಿದೆ. ಉಳಿದಂತೆ ಕಾಕಿನಾಡ ಲೋಕಸಭೆ ಕ್ಷೇತ್ರದಿಂದ ಪವನ್ ಕಲ್ಯಾಣ್ ಸ್ಪರ್ಧಿಸಬೇಕು ಎಂದು ಬಿಜೆಪಿ ಬಯಸಿದೆ.