<p><strong>ಹೈದರಾಬಾದ್:</strong> ಮುಂಬರುವ ಚುನಾವಣೆಯಲ್ಲಿ ಲೋಕಸಭೆಗೆ ಸ್ಪರ್ಧಿಸಬೇಕೋ, ವಿಧಾನಸಭೆಗೆ ಸ್ಪರ್ಧಿಸಬೇಕೋ ಎಂಬ ಬಗ್ಗೆ ನಟ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಗೊಂದಲದಲ್ಲಿ ಇದ್ದಾರೆ.</p>.<p>ಪೀಠಾಪುರಂ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಪಕ್ಷದ ಕಾರ್ಯಕ್ರಮದಲ್ಲಿ ಗುರುವಾರ ಹೇಳಿದ್ದರಾದರೂ, ಲೋಕಸಭೆಗೇ ಸ್ಪರ್ಧಿಸಬೇಕು ಎಂಬ ಸಲಹೆಗಳೂ ಇವೆ. ಹೀಗಾಗಿ, ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ ಎಂದಿದ್ದಾರೆ.</p>.<p>ಜನಸೇನಾಗೆ ನಿಗದಿಯಾದ ಕ್ಷೇತ್ರಗಳ ಪೈಕಿ ಒಂದರಿಂದ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಮುಖಂಡರು ಪವನ್ ಕಲ್ಯಾಣ್ ಅವರಿಗೆ ಸಲಹೆ ನೀಡಿದ್ದಾರೆ. ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗುವ ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.</p>.<p>ಸೀಟು ಹಂಚಿಕೆ ಸೂತ್ರದಂತೆ, ಜನಸೇನಾ ಪಕ್ಷಕ್ಕೆ ಕಾಕಿನಾಡ, ಮಚಿಲಿಪಟ್ನಂ ಲೋಕಸಭೆ ಕ್ಷೇತ್ರಗಳು ನಿಗದಿಯಾಗಿವೆ. ಮಚಿಲಿಪಟ್ನಂ ಕ್ಷೇತ್ರಕ್ಕೆ ವಲ್ಲಭನೇನಿ ಬಾಲಶೌರಿ ಅವರನ್ನು ಅಭ್ಯರ್ಥಿಯಾಗಿ ಈಗಾಗಲೇ ಜನಸೇನಾ ಆಯ್ಕೆ ಮಾಡಿದೆ. ಉಳಿದಂತೆ ಕಾಕಿನಾಡ ಲೋಕಸಭೆ ಕ್ಷೇತ್ರದಿಂದ ಪವನ್ ಕಲ್ಯಾಣ್ ಸ್ಪರ್ಧಿಸಬೇಕು ಎಂದು ಬಿಜೆಪಿ ಬಯಸಿದೆ.</p>.<p>2019ರಲ್ಲಿ ಪವನ್ ಕಲ್ಯಾಣ್ ಅವರು ಗಜುವಾಕಾ ಮತ್ತು ಭೀಮಾವರಂ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಎರಡೂ ಕಡೆ ಸೋತಿದ್ದರು. ಈಗ ಕಾಕಿನಾಡ ಜಿಲ್ಲೆಯ ಪಿಠಾಪುರಂ ಕ್ಷೇತ್ರ ಸುರಕ್ಷಿತ ಎಂದು ಭಾವಿಸಿದ್ದಾರೆ ಎನ್ನಲಾಗಿದೆ.</p>.<p>ಪಿಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ಸೇರಿದ ಕಾಪು ಸಮಾಜದ ಅಂದಾಜು 90 ಸಾವಿರ, ಹಿಂದುಳಿದ ವರ್ಗದ 80 ಸಾವಿರ ಮತಗಳಿವೆ. ಹಿಂದಿನ ಚುನಾವಣೆಗಳಲ್ಲಿ ಬಹುತೇಕ ಕಾಪು ಸಮುದಾಯದವರೇ ಗೆದ್ದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಮುಂಬರುವ ಚುನಾವಣೆಯಲ್ಲಿ ಲೋಕಸಭೆಗೆ ಸ್ಪರ್ಧಿಸಬೇಕೋ, ವಿಧಾನಸಭೆಗೆ ಸ್ಪರ್ಧಿಸಬೇಕೋ ಎಂಬ ಬಗ್ಗೆ ನಟ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಗೊಂದಲದಲ್ಲಿ ಇದ್ದಾರೆ.</p>.<p>ಪೀಠಾಪುರಂ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಪಕ್ಷದ ಕಾರ್ಯಕ್ರಮದಲ್ಲಿ ಗುರುವಾರ ಹೇಳಿದ್ದರಾದರೂ, ಲೋಕಸಭೆಗೇ ಸ್ಪರ್ಧಿಸಬೇಕು ಎಂಬ ಸಲಹೆಗಳೂ ಇವೆ. ಹೀಗಾಗಿ, ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ ಎಂದಿದ್ದಾರೆ.</p>.<p>ಜನಸೇನಾಗೆ ನಿಗದಿಯಾದ ಕ್ಷೇತ್ರಗಳ ಪೈಕಿ ಒಂದರಿಂದ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಮುಖಂಡರು ಪವನ್ ಕಲ್ಯಾಣ್ ಅವರಿಗೆ ಸಲಹೆ ನೀಡಿದ್ದಾರೆ. ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗುವ ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.</p>.<p>ಸೀಟು ಹಂಚಿಕೆ ಸೂತ್ರದಂತೆ, ಜನಸೇನಾ ಪಕ್ಷಕ್ಕೆ ಕಾಕಿನಾಡ, ಮಚಿಲಿಪಟ್ನಂ ಲೋಕಸಭೆ ಕ್ಷೇತ್ರಗಳು ನಿಗದಿಯಾಗಿವೆ. ಮಚಿಲಿಪಟ್ನಂ ಕ್ಷೇತ್ರಕ್ಕೆ ವಲ್ಲಭನೇನಿ ಬಾಲಶೌರಿ ಅವರನ್ನು ಅಭ್ಯರ್ಥಿಯಾಗಿ ಈಗಾಗಲೇ ಜನಸೇನಾ ಆಯ್ಕೆ ಮಾಡಿದೆ. ಉಳಿದಂತೆ ಕಾಕಿನಾಡ ಲೋಕಸಭೆ ಕ್ಷೇತ್ರದಿಂದ ಪವನ್ ಕಲ್ಯಾಣ್ ಸ್ಪರ್ಧಿಸಬೇಕು ಎಂದು ಬಿಜೆಪಿ ಬಯಸಿದೆ.</p>.<p>2019ರಲ್ಲಿ ಪವನ್ ಕಲ್ಯಾಣ್ ಅವರು ಗಜುವಾಕಾ ಮತ್ತು ಭೀಮಾವರಂ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಎರಡೂ ಕಡೆ ಸೋತಿದ್ದರು. ಈಗ ಕಾಕಿನಾಡ ಜಿಲ್ಲೆಯ ಪಿಠಾಪುರಂ ಕ್ಷೇತ್ರ ಸುರಕ್ಷಿತ ಎಂದು ಭಾವಿಸಿದ್ದಾರೆ ಎನ್ನಲಾಗಿದೆ.</p>.<p>ಪಿಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ಸೇರಿದ ಕಾಪು ಸಮಾಜದ ಅಂದಾಜು 90 ಸಾವಿರ, ಹಿಂದುಳಿದ ವರ್ಗದ 80 ಸಾವಿರ ಮತಗಳಿವೆ. ಹಿಂದಿನ ಚುನಾವಣೆಗಳಲ್ಲಿ ಬಹುತೇಕ ಕಾಪು ಸಮುದಾಯದವರೇ ಗೆದ್ದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>