<p><strong>ನವದೆಹಲಿ</strong>: ‘ಪೈಲಟ್ಗಳದ್ದೇ ತಪ್ಪು ಎನ್ನುವ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಭಾರತೀಯ ಏರ್ಲೈನ್ಸ್ ಪೈಟಲ್ಗಳ ಸಂಘ (ಎಎಲ್ಪಿಎ ಇಂಡಿಯಾ) ಹೇಳಿದೆ.</p><p>ಮಾನವ ದೋಷದ ಕಾರಣದಿಂದಲೇ ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ವಿಮಾನವು ಪತನಗೊಂಡಿದೆ ಎಂಬ ಆರೋಪವನ್ನು ಸಂಘ ತಳ್ಳಿಹಾಕಿದೆ.</p><p>ಇಂಧನ ಪೂರೈಕೆ ಮಾಡುವ ‘ಇಂಧನ ಸ್ವಿಚ್’ ಅನ್ನು ಆಫ್ ಮಾಡಿದ್ದರಿಂದ ವಿಮಾನ ಪತನಗೊಂಡಿತು ಎಂದು ವಿಮಾನ ಅಪಘಾತ ತನಿಖಾ ಬ್ಯುರೊದ ಪ್ರಾಥಮಿಕ ವರದಿಯು ಬಹಿರಂಗಗೊಂಡ ಬಳಿಕ ಮೃತ ಪೈಟಲ್ಗಳನ್ನು ಗುರಿಯಾಗಿಸಲಾಗುತ್ತಿದೆ.</p><p>‘ತನಿಖಾ ಸಂಸ್ಥೆಯು ತನಿಖೆಯ ಕುರಿತು ‘ರಹಸ್ಯ’ ಮಾಡುತ್ತಿದೆ. ತನಿಖೆಯಲ್ಲಿ ಸೂಕ್ತವಾದ ತಜ್ಞ ವ್ಯಕ್ತಿಗಳು ಭಾಗಿಯಾಗಿಲ್ಲ. ಪಾರದರ್ಶಕತೆ ತರುವ ದೃಷ್ಟಿಯಿಂದ ತನಿಖೆಯಲ್ಲಿ ವೀಕ್ಷಕರನ್ನು ಭಾಗಿ ಮಾಡಿಕೊಳ್ಳಬೇಕು’ ಎಂದು ವಿಮಾನ ಅಪಘಾತ ತನಿಖಾ ಬ್ಯುರೊಗೆ (ಎಎಐಬಿ) ಸಂಘ ಮನವಿ ಮಾಡಿದೆ.</p><p>‘ಪೈಲಟ್ಗಳೇ ವಿಮಾನ ಪತನಗೊಳ್ಳುವಂತೆ ಮಾಡಿದ್ದಾರೆ (ಪೈಲಟ್ ಸೂಸೈಡ್) ಎಂಬಂಥ ವಾದವನ್ನು ಮುಂದಿಡಲಾಗುತ್ತದೆ. ಇಂಥ ಕಲ್ಪಿತ ವಾದಸರಣಿಯಿಂದ ತೀವ್ರ ನೋವಾಗಿದೆ. ಈ ಹಂತದಲ್ಲಿ ಇಂಥ ಅಭಿಪ್ರಾಯಗಳನ್ನು ನೀಡುವುದಕ್ಕೆ ಯಾವುದೇ ಆಧಾರ ಇಲ್ಲ. ಇದು ಪೈಲಟ್ಗಳ ವೃತ್ತಿ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತವೆ’ ಎಂದು ಭಾರತೀಯ ವಾಣಿಜ್ಯ ಪೈಟಲ್ಗಳ ಸಂಘ (ಐಸಿಪಿಎ) ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಪೈಲಟ್ಗಳದ್ದೇ ತಪ್ಪು ಎನ್ನುವ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಭಾರತೀಯ ಏರ್ಲೈನ್ಸ್ ಪೈಟಲ್ಗಳ ಸಂಘ (ಎಎಲ್ಪಿಎ ಇಂಡಿಯಾ) ಹೇಳಿದೆ.</p><p>ಮಾನವ ದೋಷದ ಕಾರಣದಿಂದಲೇ ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ವಿಮಾನವು ಪತನಗೊಂಡಿದೆ ಎಂಬ ಆರೋಪವನ್ನು ಸಂಘ ತಳ್ಳಿಹಾಕಿದೆ.</p><p>ಇಂಧನ ಪೂರೈಕೆ ಮಾಡುವ ‘ಇಂಧನ ಸ್ವಿಚ್’ ಅನ್ನು ಆಫ್ ಮಾಡಿದ್ದರಿಂದ ವಿಮಾನ ಪತನಗೊಂಡಿತು ಎಂದು ವಿಮಾನ ಅಪಘಾತ ತನಿಖಾ ಬ್ಯುರೊದ ಪ್ರಾಥಮಿಕ ವರದಿಯು ಬಹಿರಂಗಗೊಂಡ ಬಳಿಕ ಮೃತ ಪೈಟಲ್ಗಳನ್ನು ಗುರಿಯಾಗಿಸಲಾಗುತ್ತಿದೆ.</p><p>‘ತನಿಖಾ ಸಂಸ್ಥೆಯು ತನಿಖೆಯ ಕುರಿತು ‘ರಹಸ್ಯ’ ಮಾಡುತ್ತಿದೆ. ತನಿಖೆಯಲ್ಲಿ ಸೂಕ್ತವಾದ ತಜ್ಞ ವ್ಯಕ್ತಿಗಳು ಭಾಗಿಯಾಗಿಲ್ಲ. ಪಾರದರ್ಶಕತೆ ತರುವ ದೃಷ್ಟಿಯಿಂದ ತನಿಖೆಯಲ್ಲಿ ವೀಕ್ಷಕರನ್ನು ಭಾಗಿ ಮಾಡಿಕೊಳ್ಳಬೇಕು’ ಎಂದು ವಿಮಾನ ಅಪಘಾತ ತನಿಖಾ ಬ್ಯುರೊಗೆ (ಎಎಐಬಿ) ಸಂಘ ಮನವಿ ಮಾಡಿದೆ.</p><p>‘ಪೈಲಟ್ಗಳೇ ವಿಮಾನ ಪತನಗೊಳ್ಳುವಂತೆ ಮಾಡಿದ್ದಾರೆ (ಪೈಲಟ್ ಸೂಸೈಡ್) ಎಂಬಂಥ ವಾದವನ್ನು ಮುಂದಿಡಲಾಗುತ್ತದೆ. ಇಂಥ ಕಲ್ಪಿತ ವಾದಸರಣಿಯಿಂದ ತೀವ್ರ ನೋವಾಗಿದೆ. ಈ ಹಂತದಲ್ಲಿ ಇಂಥ ಅಭಿಪ್ರಾಯಗಳನ್ನು ನೀಡುವುದಕ್ಕೆ ಯಾವುದೇ ಆಧಾರ ಇಲ್ಲ. ಇದು ಪೈಲಟ್ಗಳ ವೃತ್ತಿ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತವೆ’ ಎಂದು ಭಾರತೀಯ ವಾಣಿಜ್ಯ ಪೈಟಲ್ಗಳ ಸಂಘ (ಐಸಿಪಿಎ) ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>