ನವದೆಹಲಿ: ದೆಹಲಿ ಮತ್ತು ಇತರೆಡೆಗಳಲ್ಲಿ ಪಟಾಕಿ ನಿಷೇಧ ತೆರವುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಗುರುವಾರ ನಿರಾಕರಿಸಿರುವ ಸುಪ್ರೀಂ ಕೋರ್ಟ್, ‘ದಯವಿಟ್ಟು ಜನರು ಶುದ್ಧ ಗಾಳಿ ಉಸಿರಾಡಲು ಬಿಡಿ. ಹಬ್ಬ ಆಚರಣೆಗೆ ಹಲವಾರು ದಾರಿಗಳಿವೆ. ನೀವು ಸಿಹಿತಿಂಡಿ ಖರೀದಿಸಲು ಹಣ ಖರ್ಚು ಮಾಡಿ’ ಎಂದು ಹೇಳಿದೆ.