ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಬಿಜೆಪಿ ನೇತೃತ್ವದ ಸರ್ಕಾರವು ಗ್ರಾಮಗಳ ಪರಿಸ್ಥಿತಿಯನ್ನು ಸಾಕಷ್ಟು ಬದಲಿಸಿತು. ಪಂಚಾಯತಿಗಳಿಗೆ ಸಾಕಷ್ಟು ಅನುದಾನ ನೀಡಿತು. ಜನತೆ, ಶಾಲೆಗಳು, ರಸ್ತೆಗಳು, ವಿದ್ಯುತ್, ಶೇಖರಣಾ ವ್ಯವಸ್ಥೆ, ಗ್ರಾಮಗಳ ಆರ್ಥಿಕತೆಯಂಥ ವಿಚಾರಗಳು ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಆದ್ಯತಾ ಪಟ್ಟಿಯಲ್ಲಿ ಕಡೇ ಸ್ಥಾನಗಳನ್ನು ಹೊಂದಿದ್ದವು. ಗ್ರಾಮಗಳು ಮತ ಬ್ಯಾಂಕ್ ಆಗಿಲ್ಲದ ಕಾರಣ ಗ್ರಾಮಗಳಿಗೆ ಹಣ ವ್ಯಯಿಸುವುದನ್ನು ಕಾಂಗ್ರೆಸ್ ಸರ್ಕಾರಗಳು ಕಡೆಗಣಿಸಿದ್ದವು’ ಎಂದು ಹೇಳಿದರು.