<p><strong>ಶ್ರೀನಗರ</strong>: ಕಾಶ್ಮೀರದ ಗಾಂದರ್ಬಲ್ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ 6.5 ಕಿ.ಮೀ ಉದ್ದದ ಝಡ್-ಮೋಡ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು. </p><p>ಶ್ರೀನಗರ–ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಈ ದ್ವಿಪಥ ಸುರಂಗವು ಶ್ರೀನಗರದಿಂದ ಸೋನ್ಮರ್ಗ್ ನಡುವಿನ ಸಂಪರ್ಕವನ್ನು ಸುಧಾರಿಸಲಿದೆ ಮತ್ತು ಪಾಕಿಸ್ತಾನ, ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಆಯಕಟ್ಟಿನ ಪ್ರದೇಶವಾಗಿರುವ ಲಡಾಖ್ಗೆ ಸರ್ವ ಖತುವಿನಲ್ಲೂ ಸಂಪರ್ಕ ಕಲ್ಪಿಸುತ್ತದೆ.</p><p>ಉದ್ಘಾಟನೆ ಬಳಿಕ ಸುರಂಗದ ಒಳಗೆ ತೆರಳಿ ಕಾರ್ಯಕ್ರಮ ನಿಗದಿಯಾದ ಸ್ಥಳದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.</p><p>ಜಮ್ಮು ಮತ್ತು ಕಾಶ್ಮೀರಕ್ಕೆ ನಾನು ನೀಡಿರುವ ಎಲ್ಲ ವಾಗ್ದಾನಗಳನ್ನೂ ಈಡೇರಿಸುವೆ. ಎಲ್ಲದಕ್ಕೂ ಸರಿಯಾದ ಸಮಯ ಬರಬೇಕು. ಸರಿಯಾದ ಸಮಯಕ್ಕೆ ಎಲ್ಲವೂ ನಡೆಯಲಿವೆ ಎಂದು ಹೇಳಿದರು.</p><p>ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿಸಬೇಕೆಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದಕ್ಕೆ ಪ್ರತಿಯಾಗಿ ಮೋದಿ ಈ ಹೇಳಿಕೆ ನೀಡಿದರು.</p><p>‘ಜಮ್ಮು ಮತ್ತು ಕಾಶ್ಮೀರ ಈ ದೇಶದ ಕಿರೀಟ. ಇದು ಅತ್ಯಂತ ಸುಂದರ ಮತ್ತು ಸಮೃದ್ಧವಾಗಿರಬೇಕು’ ಎಂದು ಬಯಸುತ್ತೇನೆ ಎಂದರು.</p><p>‘ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲಸುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇದರ ಪರಿಣಾಮವನ್ನು ಕಾಣುತ್ತಿದ್ದೇವೆ. ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವೊಂದು ಇಂದು ಆರಂಭವಾಗಿದೆ’ ಎಂದು ಹೇಳಿದರು.</p><p>ಯೋಜನೆಯನ್ನು ನನಸು ಮಾಡಿದ ಎಂಜಿಯರ್ಗಳು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಪ್ರತಿಕೂಲ ಹವಾಮಾನದ ನಡುವೆಯೂ ಸುರಂಗ ನಿರ್ಮಾಣ ಮಾಡಿದ ಅವರ ಶ್ರಮವನ್ನು ಶ್ಲಾಘಿಸಿದರು.</p><p>ಕಾರ್ಯಕ್ರಮದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭಾಗಿಯಾಗಿದ್ದರು.</p><p>ಯುಪಿಎ ಎರಡನೇ ಅವಧಿಯ ಸರ್ಕಾರದಲ್ಲಿಯೇ ಯೋಜನೆಯನ್ನು ರೂಪಿಸಲಾಗಿತ್ತು. ಆಗಿನ ಸಾರಿಗೆ ಸಚಿವ ಸಿ.ಪಿ ಜೋಶಿ ಅವರು 2012ರಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.</p><p>ಸುರಂಗ ಮಾರ್ಗದ ಕಾಮಗಾರಿಯು 2015ರಲ್ಲಿ ಆರಂಭವಾಗಿತ್ತು. ಹಣಕಾಸಿನ ಸಮಸ್ಯೆಯಿಂದಾಗಿ 2018ರಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. 2019ರಲ್ಲಿ ಮತ್ತೆ ಟೆಂಡರ್ ಕರೆಯಲಾಗಿತ್ತು. 2020 ಜನವರಿಯಲ್ಲಿ ಎಪಿಸಿಒ ಇನ್ಫ್ರಾಟೆಕ್ ಸಂಸ್ಥೆ ನಿರ್ಮಾಣದ ಹೊಣೆ ವಹಿಸಿಕೊಂಡಿತ್ತು.</p> .<ul><li><p>ಸುರಂಗ ನಿರ್ಮಾಣಕ್ಕೂ ಮೊದಲು ಈ ರಸ್ತೆಯು ಝಡ್ ಆಕಾರದಲ್ಲಿ ಇದ್ದ ಕಾರಣ ಇದಕ್ಕೆ ಝಡ್-ಮೋಡ್ ಸುರಂಗ ಎಂದು ಹೆಸರಿಡಲಾಗಿದೆ. ಹಿಂದಿಯಲ್ಲಿ ಝಡ್-ಮೋಡ್ ಎಂದರೆ ಝಡ್ –ತಿರುವು ಎಂದರ್ಥ. </p></li><li><p>ಅಕ್ಟೋಬರ್ 2024ರಲ್ಲಿ ಝಡ್-ಮೋಡ್ ಸುರಂಗ ಸಮೀಪ ಉಗ್ರರು ದಾಳಿ ನಡೆಸಿದ್ದರು. ಪರಿಣಾಮವಾಗಿ ಏಳು ಮಂದಿ ಕಾರ್ಮಿಕರು ಮೃತಪಟ್ಟಿದ್ದರು. </p></li><li><p>6.5 ಕಿ.ಮೀ - ಸುರಂಗ ಮಾರ್ಗದ ಉದ್ದ </p></li><li><p>₹2,400 ಕೋಟಿ - ಸುರಂಗ ನಿರ್ಮಾಣಕ್ಕೆ ಮಾಡಲಾದ ವೆಚ್ಚ </p></li><li><p>7.5 ಮೀ - ದ್ವಿಪಥ ಸುರಂಗ ಮಾರ್ಗದ ರಸ್ತೆಯಲ್ಲಿ ತುರ್ತು ಸನ್ನಿವೇಶದಲ್ಲಿ ಪಾರಾಗಲು ನಿರ್ಮಿಸಿರುವ ಮಾರ್ಗದ ಅಗಲ</p></li><li><p>8,650 ಅಡಿ - ಸಮುದ್ರ ಮಟ್ಟದಿಂದ ಸುರಂಗ ಮಾರ್ಗವಿರುವ ಎತ್ತರ </p></li></ul>.<h2><strong>ರಕ್ಷಣಾತ್ಮಕ ಮಹತ್ವ</strong></h2><ul><li><p>ಸರ್ವ ಋತುವಿನಲ್ಲೂ ಲಡಾಖ್ಗೆ ಸಂಪರ್ಕ </p></li><li><p>ರಕ್ಷಣಾ ಸರಕುಗಳ ಸಾಗಾಟಕ್ಕೆ ನೆರವು </p></li><li><p>ಸದ್ಯ ಸೇನೆಯು ಲಡಾಖ್ನ ಮುಂಚೂಣಿ ಸ್ಥಳಗಳಿಗೆ ಸಿಬ್ಬಂದಿ ನಿಯೋಜಿಸಲು ವಾಯುಮಾರ್ಗವನ್ನೇ ನೆಚ್ಚಿಕೊಂಡಿದೆ ಪ್ರವಾಸೋದ್ಯಮ ಮಹತ್ವ </p></li><li><p>ಸೋನಾಮಾರ್ಗ್ ಮತ್ತಿತರ ರಮಣೀಯ ತಾಣಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ </p></li><li><p>ಜಮ್ಮು-ಕಾಶ್ಮೀರ ಮತ್ತು ಲಡಾಖ್ನಲ್ಲಿ ಆರ್ಥಿಕ ಅಭಿವೃದ್ಧಿ ಸಾಮಾಜಿಕ-ಸಾಂಸ್ಕೃತಿಕ ಸಮನ್ವಯಕ್ಕೆ ಪ್ರೋತ್ಸಾಹ ಸಿಗಲಿದೆ </p></li><li><p>ಬೇಸಿಗೆಯಲ್ಲಿ ಪ್ರವಾಸಿಗಳು ಸ್ಥಳೀಯರಿಂದ ತುಂಬಿ ತುಳುಕುವ ಈ ಪ್ರದೇಶವು ಚಳಿಗಾಲದಲ್ಲಿ ಹಿಮಪಾತದಿಂದ ಕೂಡಿರುತ್ತಿತ್ತು. </p></li><li><p>ಜೋಜಿಲಾ ಸುರಂಗವು 2028ರಲ್ಲಿ ಪೂರ್ಣಗೊಂಡ ನಂತರ ಝಡ್-ಮೋಡ್ ಸುರಂಗವು ಕಾಶ್ಮೀರ ಕಣಿವೆ ಮತ್ತು ಲಡಾಖ್ ನಡುವಿನ ಅಂತರವನ್ನು 49 ಕಿ.ಮೀ ನಿಂದ 43 ಕಿ.ಮೀ ತಗ್ಗಿಸುತ್ತದೆ. </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಕಾಶ್ಮೀರದ ಗಾಂದರ್ಬಲ್ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ 6.5 ಕಿ.ಮೀ ಉದ್ದದ ಝಡ್-ಮೋಡ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು. </p><p>ಶ್ರೀನಗರ–ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಈ ದ್ವಿಪಥ ಸುರಂಗವು ಶ್ರೀನಗರದಿಂದ ಸೋನ್ಮರ್ಗ್ ನಡುವಿನ ಸಂಪರ್ಕವನ್ನು ಸುಧಾರಿಸಲಿದೆ ಮತ್ತು ಪಾಕಿಸ್ತಾನ, ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಆಯಕಟ್ಟಿನ ಪ್ರದೇಶವಾಗಿರುವ ಲಡಾಖ್ಗೆ ಸರ್ವ ಖತುವಿನಲ್ಲೂ ಸಂಪರ್ಕ ಕಲ್ಪಿಸುತ್ತದೆ.</p><p>ಉದ್ಘಾಟನೆ ಬಳಿಕ ಸುರಂಗದ ಒಳಗೆ ತೆರಳಿ ಕಾರ್ಯಕ್ರಮ ನಿಗದಿಯಾದ ಸ್ಥಳದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.</p><p>ಜಮ್ಮು ಮತ್ತು ಕಾಶ್ಮೀರಕ್ಕೆ ನಾನು ನೀಡಿರುವ ಎಲ್ಲ ವಾಗ್ದಾನಗಳನ್ನೂ ಈಡೇರಿಸುವೆ. ಎಲ್ಲದಕ್ಕೂ ಸರಿಯಾದ ಸಮಯ ಬರಬೇಕು. ಸರಿಯಾದ ಸಮಯಕ್ಕೆ ಎಲ್ಲವೂ ನಡೆಯಲಿವೆ ಎಂದು ಹೇಳಿದರು.</p><p>ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿಸಬೇಕೆಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದಕ್ಕೆ ಪ್ರತಿಯಾಗಿ ಮೋದಿ ಈ ಹೇಳಿಕೆ ನೀಡಿದರು.</p><p>‘ಜಮ್ಮು ಮತ್ತು ಕಾಶ್ಮೀರ ಈ ದೇಶದ ಕಿರೀಟ. ಇದು ಅತ್ಯಂತ ಸುಂದರ ಮತ್ತು ಸಮೃದ್ಧವಾಗಿರಬೇಕು’ ಎಂದು ಬಯಸುತ್ತೇನೆ ಎಂದರು.</p><p>‘ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲಸುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇದರ ಪರಿಣಾಮವನ್ನು ಕಾಣುತ್ತಿದ್ದೇವೆ. ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವೊಂದು ಇಂದು ಆರಂಭವಾಗಿದೆ’ ಎಂದು ಹೇಳಿದರು.</p><p>ಯೋಜನೆಯನ್ನು ನನಸು ಮಾಡಿದ ಎಂಜಿಯರ್ಗಳು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಪ್ರತಿಕೂಲ ಹವಾಮಾನದ ನಡುವೆಯೂ ಸುರಂಗ ನಿರ್ಮಾಣ ಮಾಡಿದ ಅವರ ಶ್ರಮವನ್ನು ಶ್ಲಾಘಿಸಿದರು.</p><p>ಕಾರ್ಯಕ್ರಮದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭಾಗಿಯಾಗಿದ್ದರು.</p><p>ಯುಪಿಎ ಎರಡನೇ ಅವಧಿಯ ಸರ್ಕಾರದಲ್ಲಿಯೇ ಯೋಜನೆಯನ್ನು ರೂಪಿಸಲಾಗಿತ್ತು. ಆಗಿನ ಸಾರಿಗೆ ಸಚಿವ ಸಿ.ಪಿ ಜೋಶಿ ಅವರು 2012ರಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.</p><p>ಸುರಂಗ ಮಾರ್ಗದ ಕಾಮಗಾರಿಯು 2015ರಲ್ಲಿ ಆರಂಭವಾಗಿತ್ತು. ಹಣಕಾಸಿನ ಸಮಸ್ಯೆಯಿಂದಾಗಿ 2018ರಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. 2019ರಲ್ಲಿ ಮತ್ತೆ ಟೆಂಡರ್ ಕರೆಯಲಾಗಿತ್ತು. 2020 ಜನವರಿಯಲ್ಲಿ ಎಪಿಸಿಒ ಇನ್ಫ್ರಾಟೆಕ್ ಸಂಸ್ಥೆ ನಿರ್ಮಾಣದ ಹೊಣೆ ವಹಿಸಿಕೊಂಡಿತ್ತು.</p> .<ul><li><p>ಸುರಂಗ ನಿರ್ಮಾಣಕ್ಕೂ ಮೊದಲು ಈ ರಸ್ತೆಯು ಝಡ್ ಆಕಾರದಲ್ಲಿ ಇದ್ದ ಕಾರಣ ಇದಕ್ಕೆ ಝಡ್-ಮೋಡ್ ಸುರಂಗ ಎಂದು ಹೆಸರಿಡಲಾಗಿದೆ. ಹಿಂದಿಯಲ್ಲಿ ಝಡ್-ಮೋಡ್ ಎಂದರೆ ಝಡ್ –ತಿರುವು ಎಂದರ್ಥ. </p></li><li><p>ಅಕ್ಟೋಬರ್ 2024ರಲ್ಲಿ ಝಡ್-ಮೋಡ್ ಸುರಂಗ ಸಮೀಪ ಉಗ್ರರು ದಾಳಿ ನಡೆಸಿದ್ದರು. ಪರಿಣಾಮವಾಗಿ ಏಳು ಮಂದಿ ಕಾರ್ಮಿಕರು ಮೃತಪಟ್ಟಿದ್ದರು. </p></li><li><p>6.5 ಕಿ.ಮೀ - ಸುರಂಗ ಮಾರ್ಗದ ಉದ್ದ </p></li><li><p>₹2,400 ಕೋಟಿ - ಸುರಂಗ ನಿರ್ಮಾಣಕ್ಕೆ ಮಾಡಲಾದ ವೆಚ್ಚ </p></li><li><p>7.5 ಮೀ - ದ್ವಿಪಥ ಸುರಂಗ ಮಾರ್ಗದ ರಸ್ತೆಯಲ್ಲಿ ತುರ್ತು ಸನ್ನಿವೇಶದಲ್ಲಿ ಪಾರಾಗಲು ನಿರ್ಮಿಸಿರುವ ಮಾರ್ಗದ ಅಗಲ</p></li><li><p>8,650 ಅಡಿ - ಸಮುದ್ರ ಮಟ್ಟದಿಂದ ಸುರಂಗ ಮಾರ್ಗವಿರುವ ಎತ್ತರ </p></li></ul>.<h2><strong>ರಕ್ಷಣಾತ್ಮಕ ಮಹತ್ವ</strong></h2><ul><li><p>ಸರ್ವ ಋತುವಿನಲ್ಲೂ ಲಡಾಖ್ಗೆ ಸಂಪರ್ಕ </p></li><li><p>ರಕ್ಷಣಾ ಸರಕುಗಳ ಸಾಗಾಟಕ್ಕೆ ನೆರವು </p></li><li><p>ಸದ್ಯ ಸೇನೆಯು ಲಡಾಖ್ನ ಮುಂಚೂಣಿ ಸ್ಥಳಗಳಿಗೆ ಸಿಬ್ಬಂದಿ ನಿಯೋಜಿಸಲು ವಾಯುಮಾರ್ಗವನ್ನೇ ನೆಚ್ಚಿಕೊಂಡಿದೆ ಪ್ರವಾಸೋದ್ಯಮ ಮಹತ್ವ </p></li><li><p>ಸೋನಾಮಾರ್ಗ್ ಮತ್ತಿತರ ರಮಣೀಯ ತಾಣಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ </p></li><li><p>ಜಮ್ಮು-ಕಾಶ್ಮೀರ ಮತ್ತು ಲಡಾಖ್ನಲ್ಲಿ ಆರ್ಥಿಕ ಅಭಿವೃದ್ಧಿ ಸಾಮಾಜಿಕ-ಸಾಂಸ್ಕೃತಿಕ ಸಮನ್ವಯಕ್ಕೆ ಪ್ರೋತ್ಸಾಹ ಸಿಗಲಿದೆ </p></li><li><p>ಬೇಸಿಗೆಯಲ್ಲಿ ಪ್ರವಾಸಿಗಳು ಸ್ಥಳೀಯರಿಂದ ತುಂಬಿ ತುಳುಕುವ ಈ ಪ್ರದೇಶವು ಚಳಿಗಾಲದಲ್ಲಿ ಹಿಮಪಾತದಿಂದ ಕೂಡಿರುತ್ತಿತ್ತು. </p></li><li><p>ಜೋಜಿಲಾ ಸುರಂಗವು 2028ರಲ್ಲಿ ಪೂರ್ಣಗೊಂಡ ನಂತರ ಝಡ್-ಮೋಡ್ ಸುರಂಗವು ಕಾಶ್ಮೀರ ಕಣಿವೆ ಮತ್ತು ಲಡಾಖ್ ನಡುವಿನ ಅಂತರವನ್ನು 49 ಕಿ.ಮೀ ನಿಂದ 43 ಕಿ.ಮೀ ತಗ್ಗಿಸುತ್ತದೆ. </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>