<p><strong>ನವದೆಹಲಿ:</strong> ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಯೋಜನೆಯಿಂದ ಹಿಡಿದು ಗಂಗಾನದಿ ಸ್ವಚ್ಚಗೊಳಿಸಲು ರೂಪಿಸಿರುವ ‘ನಮಾಮಿ ಗಂಗಾ ಯೋಜನೆ‘ವರೆಗೆ ಸಾರ್ವಜನಿಕ ಕಾರ್ಯಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಉಳಿತಾಯ ಮತ್ತು ತಮಗೆ ದೊರೆತ ಉಡುಗೊರೆಗಳ ಹರಾಜಿನಿಂದ ಬಂದ ₹103 ಕೋಟಿಗೂ ಹೆಚ್ಚು ಹಣವನ್ನುದೇಣಿಗೆಯಾಗಿ ನೀಡಿದ್ದಾರೆ!</p>.<p>ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ‘ತುರ್ತು ಸಂದರ್ಭಗಳಿಗೆ’ ನೆರವಾಗುವುದಕ್ಕಾಗಿ ಮಾರ್ಚ್ನಲ್ಲಿ ಆರಂಭವಾದ ‘ಪಿಎಂ ಕೇರ್ಸ್’ ನಿಧಿಗೆ ಆರಂಭಿಕ ಹಣವಾಗಿ ಪ್ರಧಾನಿಯವರು ₹2.5 ಲಕ್ಷ ದೇಣಿಗೆ ನೀಡಿದ್ದಾರೆ. ಇದು ಅವರು ಇತ್ತೀಚೆಗೆ ನೀಡಿರುವ ದೇಣಿಗೆಯಾಗಿದೆ ಎಂದುಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.</p>.<p>2019ರಲ್ಲಿ ಕುಂಭಮೇಳದಲ್ಲಿ ಸ್ವಚ್ಛತೆಯಲ್ಲಿ ತೊಡಗಿದ್ದ ಕಾರ್ಮಿಕರ ಕಲ್ಯಾಣಕ್ಕಾಗಿ ಮೋದಿಯವರು ತಮ್ಮ ಉಳಿತಾಯದ ಹಣದಿಂದ ₹21 ಲಕ್ಷ ನೀಡಿದ್ದರು. ಇದೇ ವರ್ಷದಲ್ಲಿ ದಕ್ಷಿಣ ಕೋರಿಯಾ ಸರ್ಕಾರ ‘ಸಿಯೋಲ್ ಪ್ರೈಜ್‘ ಪುರಸ್ಕಾರದ ಜತೆಗೆ ₹1.30 ಕೋಟಿ ನಗದನ್ನು ಪ್ರಧಾನಿ ಅವರಿಗೆ ನೀಡಿತ್ತು. ‘ಈ ಪುರಸ್ಕಾರದ ಪೂರ್ಣ ಹಣವನ್ನು ನಮಾಮಿ ಗಂಗಾ ಯೋಜನೆಗೆ ನೀಡುತ್ತಿದ್ದೇನೆ‘ ಎಂದು ಪ್ರಧಾನಿಯವರು ಘೋಷಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಯೋಜನೆಯಿಂದ ಹಿಡಿದು ಗಂಗಾನದಿ ಸ್ವಚ್ಚಗೊಳಿಸಲು ರೂಪಿಸಿರುವ ‘ನಮಾಮಿ ಗಂಗಾ ಯೋಜನೆ‘ವರೆಗೆ ಸಾರ್ವಜನಿಕ ಕಾರ್ಯಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಉಳಿತಾಯ ಮತ್ತು ತಮಗೆ ದೊರೆತ ಉಡುಗೊರೆಗಳ ಹರಾಜಿನಿಂದ ಬಂದ ₹103 ಕೋಟಿಗೂ ಹೆಚ್ಚು ಹಣವನ್ನುದೇಣಿಗೆಯಾಗಿ ನೀಡಿದ್ದಾರೆ!</p>.<p>ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ‘ತುರ್ತು ಸಂದರ್ಭಗಳಿಗೆ’ ನೆರವಾಗುವುದಕ್ಕಾಗಿ ಮಾರ್ಚ್ನಲ್ಲಿ ಆರಂಭವಾದ ‘ಪಿಎಂ ಕೇರ್ಸ್’ ನಿಧಿಗೆ ಆರಂಭಿಕ ಹಣವಾಗಿ ಪ್ರಧಾನಿಯವರು ₹2.5 ಲಕ್ಷ ದೇಣಿಗೆ ನೀಡಿದ್ದಾರೆ. ಇದು ಅವರು ಇತ್ತೀಚೆಗೆ ನೀಡಿರುವ ದೇಣಿಗೆಯಾಗಿದೆ ಎಂದುಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.</p>.<p>2019ರಲ್ಲಿ ಕುಂಭಮೇಳದಲ್ಲಿ ಸ್ವಚ್ಛತೆಯಲ್ಲಿ ತೊಡಗಿದ್ದ ಕಾರ್ಮಿಕರ ಕಲ್ಯಾಣಕ್ಕಾಗಿ ಮೋದಿಯವರು ತಮ್ಮ ಉಳಿತಾಯದ ಹಣದಿಂದ ₹21 ಲಕ್ಷ ನೀಡಿದ್ದರು. ಇದೇ ವರ್ಷದಲ್ಲಿ ದಕ್ಷಿಣ ಕೋರಿಯಾ ಸರ್ಕಾರ ‘ಸಿಯೋಲ್ ಪ್ರೈಜ್‘ ಪುರಸ್ಕಾರದ ಜತೆಗೆ ₹1.30 ಕೋಟಿ ನಗದನ್ನು ಪ್ರಧಾನಿ ಅವರಿಗೆ ನೀಡಿತ್ತು. ‘ಈ ಪುರಸ್ಕಾರದ ಪೂರ್ಣ ಹಣವನ್ನು ನಮಾಮಿ ಗಂಗಾ ಯೋಜನೆಗೆ ನೀಡುತ್ತಿದ್ದೇನೆ‘ ಎಂದು ಪ್ರಧಾನಿಯವರು ಘೋಷಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>