<p class="title">ಖೇಡಾ, ಗುಜರಾತ್ : ದೊಡ್ಡಮಟ್ಟದ ಭಯೋತ್ಪಾದಕ ಕೃತ್ಯಗಳ ಕುರಿತು ಮೌನವಹಿಸುವ ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳಿಂದ ಗುಜರಾತ್ ಮತ್ತು ದೇಶವನ್ನು ರಕ್ಷಿಸುವುದು ಬಹಳ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ಹೇಳಿದರು.</p>.<p class="bodytext">ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳು ಭಯೋತ್ಪಾದನೆಯನ್ನು ಯಶಸ್ಸಿಗೆ ಅಡ್ಡದಾರಿ ಎಂದು ಭಾವಿಸುತ್ತವೆ. ಸಣ್ಣ ಪಕ್ಷಗಳ ಅಧಿಕಾರ ದಾಹ ಇನ್ನೂ ತೀವ್ರವಾಗಿರುತ್ತದೆ. ದೊಡ್ಡಮಟ್ಟದ ಭಯೋತ್ಪಾದಕ ಕೃತ್ಯಗಳು ನಡೆದಾಗ ಈ ಪಕ್ಷಗಳು ಬಾಯಿ ಬಿಡುವುದೇ ಇಲ್ಲ ಎಂದರು. 26/11 ಮುಂಬೈ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.</p>.<p class="bodytext">‘ಭಯೋತ್ಪಾದನೆ ಇನ್ನೂ ಅಂತ್ಯಕಂಡಿಲ್ಲ. ಅದರಂತೆ ಕಾಂಗ್ರೆಸ್ ರಾಜಕೀಯವೂ ಬದಲಾಗಿಲ್ಲ. ಓಲೈಕೆ ರಾಜಕಾರಣ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ. ಭಯೋತ್ಪಾದಕರನ್ನುರಕ್ಷಿಸಲು ನ್ಯಾಯಾಲಯದ ಮೆಟ್ಟಿಲನ್ನೂ ಅವರು ಏರುತ್ತಾರೆ. ಬಾಟ್ಲಾ ಹೌಸ್ ಎನ್ಕೌಂಟರ್ ನಡೆದ ವೇಳೆ ಕಾಂಗ್ರೆಸ್ ನಾಯಕರು ಉಗ್ರನಿಗಾಗಿ ಕಣ್ಣೀರು ಸುರಿಸಿದ್ದರು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title">ಖೇಡಾ, ಗುಜರಾತ್ : ದೊಡ್ಡಮಟ್ಟದ ಭಯೋತ್ಪಾದಕ ಕೃತ್ಯಗಳ ಕುರಿತು ಮೌನವಹಿಸುವ ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳಿಂದ ಗುಜರಾತ್ ಮತ್ತು ದೇಶವನ್ನು ರಕ್ಷಿಸುವುದು ಬಹಳ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ಹೇಳಿದರು.</p>.<p class="bodytext">ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳು ಭಯೋತ್ಪಾದನೆಯನ್ನು ಯಶಸ್ಸಿಗೆ ಅಡ್ಡದಾರಿ ಎಂದು ಭಾವಿಸುತ್ತವೆ. ಸಣ್ಣ ಪಕ್ಷಗಳ ಅಧಿಕಾರ ದಾಹ ಇನ್ನೂ ತೀವ್ರವಾಗಿರುತ್ತದೆ. ದೊಡ್ಡಮಟ್ಟದ ಭಯೋತ್ಪಾದಕ ಕೃತ್ಯಗಳು ನಡೆದಾಗ ಈ ಪಕ್ಷಗಳು ಬಾಯಿ ಬಿಡುವುದೇ ಇಲ್ಲ ಎಂದರು. 26/11 ಮುಂಬೈ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.</p>.<p class="bodytext">‘ಭಯೋತ್ಪಾದನೆ ಇನ್ನೂ ಅಂತ್ಯಕಂಡಿಲ್ಲ. ಅದರಂತೆ ಕಾಂಗ್ರೆಸ್ ರಾಜಕೀಯವೂ ಬದಲಾಗಿಲ್ಲ. ಓಲೈಕೆ ರಾಜಕಾರಣ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ. ಭಯೋತ್ಪಾದಕರನ್ನುರಕ್ಷಿಸಲು ನ್ಯಾಯಾಲಯದ ಮೆಟ್ಟಿಲನ್ನೂ ಅವರು ಏರುತ್ತಾರೆ. ಬಾಟ್ಲಾ ಹೌಸ್ ಎನ್ಕೌಂಟರ್ ನಡೆದ ವೇಳೆ ಕಾಂಗ್ರೆಸ್ ನಾಯಕರು ಉಗ್ರನಿಗಾಗಿ ಕಣ್ಣೀರು ಸುರಿಸಿದ್ದರು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>