ಕರ್ನಾಟಕ ಬಿಜೆಪಿಯು ಟ್ವೀಟ್ ಮಾಡಿದ್ದ ಯಡಿಯೂರಪ್ಪ ಅವರ ಭಾಷಣವನ್ನು ಮರು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ‘ಬಿಜೆಪಿಯ ಒಬ್ಬ ಕಾರ್ಯಕರ್ತನಾಗಿ ನನಗೆ ಈ ಭಾಷಣವು ಸ್ಪೂರ್ತಿದಾಯಕ ಎನಿಸಿದೆ. ಇದು ನಮ್ಮ ಪಕ್ಷದ ನೈತಿಕತೆಯನ್ನು ಬಿಂಬಿಸಿದೆ. ಜೊತೆಗೆ, ಈ ಭಾಷಣವು ಬೇರೆ ಪಕ್ಷದ ಕಾರ್ಯಕರ್ತರಿಗೂ ಸ್ಪೂರ್ತಿದಾಯಕವಾಗಿದೆ’ ಎಂದಿದ್ದಾರೆ.