<p><strong>ಮುಂಬೈ</strong>: ‘ದೇಶದ ಬೆಳವಣಿಗೆ’ಯು ಮುಂದಿನ ದಶಕದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಮೊದಲ ಆದ್ಯತೆ ಆಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಹೇಳಿದರು.</p>.<p>ಆರ್ಬಿಐ 90 ವರ್ಷಗಳನ್ನು ಪೂರೈಸಿದ್ದರ ಸ್ಮರಣಾರ್ಥವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇನ್ನು 10 ವರ್ಷಗಳಲ್ಲಿ ಆರ್ಬಿಐ ಶತಮಾನೋತ್ಸವ ಆಚರಿಸಲಿದೆ. ಈ ವೇಳೆ ಅದು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿಯೆಡೆಗೆ ಕೆಲಸ ಮಾಡಬೇಕು. ಜೊತೆಗೆ, ವಿಶ್ವಾಸ ಹಾಗೂ ಸ್ಥಿರತೆ ಕಾಯ್ದುಕೊಳ್ಳುವ ಕಡೆಗೂ ಮಹತ್ವ ನೀಡಬೇಕು’ ಎಂದರು.</p>.<p>2016ರಿಂದ ಈಚೆಗೆ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಆರ್ಬಿಐನ ಪ್ರಮುಖ ಗುರಿಯಾಗಿದೆ. ದರ ಕಡಿತದಂಥ ಕ್ರಮಗಳ ಮೂಲಕ ಬೆಳವಣಿಗೆ ಕಡೆಗೆ ಹೆಚ್ಚಿನ ಗಮನ ನೀಡುವಂಥ ಸಲಹೆಗಳೂ ಆಗಾಗ ಬಂದಿವೆ ಎಂದು ಅವರು ಹೇಳಿದರು.</p>.<p>ಹೊಸ ಆರ್ಥಿಕ ವರ್ಷದ ಪ್ರಥಮ ಹಣಕಾಸು ನೀತಿ ಪರಿಶೀಲನೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಮೋದಿ ಅವರು ಈ ಮಾತುಗಳನ್ನಾಡಿದ್ದಾರೆ.</p>.<p>ಈ ಮೊದಲು ಆರ್ಥಿಕ ನೀತಿಗಳಲ್ಲಿ ಎರಡಂಕಿ ಹಣದುಬ್ಬರ ದರ ಪ್ರತಿಬಿಂಬಿತವಾಗುತ್ತಿರಲಿಲ್ಲ. ಹಣದುಬ್ಬರವನ್ನು ನಿಗ್ರಹಿಸಿದ ಹೆಗ್ಗಳಿಕೆಯನ್ನು ಆರ್ಬಿಐಗೇ ನೀಡಬೇಕು. ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ವರ್ಷದಿಂದ ವರ್ಷಕ್ಕೆ ತನ್ನ //ಆಧ್ಯಾದೇಶಕ್ಕೆ/// ಸಂಬಂಧಿಸಿದಂತೆ ಗುರುತರ ಕೆಲಸ ಮಾಡಿದೆ. ಹಣಕಾಸು ಕ್ರೋಡೀಕರಣ ಮತ್ತು ಕ್ರಿಯಾತ್ಮಕ ದರ ಪರಿವೀಕ್ಷಣೆಯಂಥ ಕ್ರಮ ತೆಗೆದುಕೊಳ್ಳುವುದೂ ಸೇರಿದಂತೆ ಸರ್ಕಾರ ಕೈಗೊಂಡ ಪ್ರಯತ್ನಗಳು ಹಣದುಬ್ಬರ ತಗ್ಗಲು ಸಹಾಯವಾಯಿತು ಎಂದು ಅವರು ಅಭಿಪ್ರಾಯಪಟ್ಟರು. </p>.<p>ಕೋವಿಡ್–19 ಅಂತಹ ಸಾಂಕ್ರಾಮಿಕ ಮತ್ತು ಹಲವು ದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳು ಸವಾಲುಗಳನ್ನು ಒಡ್ಡಿದರೂ ದೇಶದಲ್ಲಿ ಹಣದುಬ್ಬರವು ಮಂದಗಾಮಿಯಾಗಿಯೇ ಇದೆ. ಕೋವಿಡ್ ಹೊಡೆತದಿಂದ ಸುಧಾರಿಸಿಕೊಳ್ಳಲು ಹಲವು ದೇಶಗಳು ಪ್ರಾಯಾಸಪಡುತ್ತಿರುವ ನಡುವೆಯೇ ಭಾರತ ಆರ್ಥಿಕತೆಯು ಹೊಸ ದಾಖಲೆಗಳನ್ನು ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ‘ದೇಶದ ಬೆಳವಣಿಗೆ’ಯು ಮುಂದಿನ ದಶಕದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಮೊದಲ ಆದ್ಯತೆ ಆಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಹೇಳಿದರು.</p>.<p>ಆರ್ಬಿಐ 90 ವರ್ಷಗಳನ್ನು ಪೂರೈಸಿದ್ದರ ಸ್ಮರಣಾರ್ಥವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇನ್ನು 10 ವರ್ಷಗಳಲ್ಲಿ ಆರ್ಬಿಐ ಶತಮಾನೋತ್ಸವ ಆಚರಿಸಲಿದೆ. ಈ ವೇಳೆ ಅದು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿಯೆಡೆಗೆ ಕೆಲಸ ಮಾಡಬೇಕು. ಜೊತೆಗೆ, ವಿಶ್ವಾಸ ಹಾಗೂ ಸ್ಥಿರತೆ ಕಾಯ್ದುಕೊಳ್ಳುವ ಕಡೆಗೂ ಮಹತ್ವ ನೀಡಬೇಕು’ ಎಂದರು.</p>.<p>2016ರಿಂದ ಈಚೆಗೆ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಆರ್ಬಿಐನ ಪ್ರಮುಖ ಗುರಿಯಾಗಿದೆ. ದರ ಕಡಿತದಂಥ ಕ್ರಮಗಳ ಮೂಲಕ ಬೆಳವಣಿಗೆ ಕಡೆಗೆ ಹೆಚ್ಚಿನ ಗಮನ ನೀಡುವಂಥ ಸಲಹೆಗಳೂ ಆಗಾಗ ಬಂದಿವೆ ಎಂದು ಅವರು ಹೇಳಿದರು.</p>.<p>ಹೊಸ ಆರ್ಥಿಕ ವರ್ಷದ ಪ್ರಥಮ ಹಣಕಾಸು ನೀತಿ ಪರಿಶೀಲನೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಮೋದಿ ಅವರು ಈ ಮಾತುಗಳನ್ನಾಡಿದ್ದಾರೆ.</p>.<p>ಈ ಮೊದಲು ಆರ್ಥಿಕ ನೀತಿಗಳಲ್ಲಿ ಎರಡಂಕಿ ಹಣದುಬ್ಬರ ದರ ಪ್ರತಿಬಿಂಬಿತವಾಗುತ್ತಿರಲಿಲ್ಲ. ಹಣದುಬ್ಬರವನ್ನು ನಿಗ್ರಹಿಸಿದ ಹೆಗ್ಗಳಿಕೆಯನ್ನು ಆರ್ಬಿಐಗೇ ನೀಡಬೇಕು. ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ವರ್ಷದಿಂದ ವರ್ಷಕ್ಕೆ ತನ್ನ //ಆಧ್ಯಾದೇಶಕ್ಕೆ/// ಸಂಬಂಧಿಸಿದಂತೆ ಗುರುತರ ಕೆಲಸ ಮಾಡಿದೆ. ಹಣಕಾಸು ಕ್ರೋಡೀಕರಣ ಮತ್ತು ಕ್ರಿಯಾತ್ಮಕ ದರ ಪರಿವೀಕ್ಷಣೆಯಂಥ ಕ್ರಮ ತೆಗೆದುಕೊಳ್ಳುವುದೂ ಸೇರಿದಂತೆ ಸರ್ಕಾರ ಕೈಗೊಂಡ ಪ್ರಯತ್ನಗಳು ಹಣದುಬ್ಬರ ತಗ್ಗಲು ಸಹಾಯವಾಯಿತು ಎಂದು ಅವರು ಅಭಿಪ್ರಾಯಪಟ್ಟರು. </p>.<p>ಕೋವಿಡ್–19 ಅಂತಹ ಸಾಂಕ್ರಾಮಿಕ ಮತ್ತು ಹಲವು ದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳು ಸವಾಲುಗಳನ್ನು ಒಡ್ಡಿದರೂ ದೇಶದಲ್ಲಿ ಹಣದುಬ್ಬರವು ಮಂದಗಾಮಿಯಾಗಿಯೇ ಇದೆ. ಕೋವಿಡ್ ಹೊಡೆತದಿಂದ ಸುಧಾರಿಸಿಕೊಳ್ಳಲು ಹಲವು ದೇಶಗಳು ಪ್ರಾಯಾಸಪಡುತ್ತಿರುವ ನಡುವೆಯೇ ಭಾರತ ಆರ್ಥಿಕತೆಯು ಹೊಸ ದಾಖಲೆಗಳನ್ನು ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>