<p><strong>ತಿರುವನಂತಪುರ</strong>: ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲು ಮೂರು ಆಸ್ಪತ್ರೆಗಳು ನಿರಾಕರಿಸಿವೆ ಎಂಬ ಮಾಧ್ಯಮ ವರದಿಯನ್ನು ಆಧರಿಸಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತ ಪ್ರಕರಣದಾಖಲಿಸಿದೆ.</p>.<p>‘ಕೊಲ್ಲಂ ಜಿಲ್ಲೆಯ ಕಲ್ಲುವತ್ತುಕಲ್ ಗ್ರಾಮದ ನಿವಾಸಿಯಾಗಿರುವ 8 ತಿಂಗಳ ಗರ್ಭಿಣಿ ಮೀರಾ ಅವರಲ್ಲಿ ತಳಮಳ ಉಂಟಾಗಿತ್ತು. ಅವರು ತಮ್ಮ ಮನೆಯ ಹತ್ತಿರದ ಎರಡು ಆಸ್ಪತ್ರೆ ಮತ್ತು ಅವಿಟ್ಟಂ ತಿರುನಾಲ್ ಆಸ್ಪತ್ರೆ ಮೊರೆ ಹೋಗಿದ್ದರು. ಆದರೆ, ಈ ಮೂರು ಆಸ್ಪತ್ರೆಗಳು ಮೀರಾ ಅವರನ್ನು ದಾಖಲಿಸಲು ನಿರಾಕರಿಸಿದ್ದವು’ ಎಂದು ಮಾಧ್ಯಮಗಳು ವರದಿ ಮಾಡಿವೆ.</p>.<p>‘ಈ ಬಳಿಕ ಕೊಲ್ಲಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೀರಾ ಅವರನ್ನು ದಾಖಲಿಸಿ, ಹೆರಿಗೆ ಮಾಡಿಸಲಾಯಿತು. ಆದರೆ, ಮಗು ಆರು ದಿನಗಳ ಹಿಂದೆಯೇಗರ್ಭದಲ್ಲಿ ಮೃತಪಟ್ಟಿತ್ತು’ ಎಂದು ಆಯೋಗವು ತಿಳಿಸಿದೆ.</p>.<p>ಈ ಬಗ್ಗೆ ತನಿಖೆ ನಡೆಸುವಂತೆ ಕೊಲ್ಲಂ ಜಿಲ್ಲಾ ವೈದ್ಯಾಧಿಕಾರಿಗೆ ಆಯೋಗದ ಸದಸ್ಯೆ ವಿ.ಕೆ ಬೀನಾ ಕುಮಾರಿ ಅವರು ಸೂಚಿಸಿದ್ದಾರೆ.</p>.<p>ಈ ಸಂಬಂಧ ಮೂರು ವಾರಗಳೊಳಗೆ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ ಎಂದು ಆಯೋಗ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲು ಮೂರು ಆಸ್ಪತ್ರೆಗಳು ನಿರಾಕರಿಸಿವೆ ಎಂಬ ಮಾಧ್ಯಮ ವರದಿಯನ್ನು ಆಧರಿಸಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತ ಪ್ರಕರಣದಾಖಲಿಸಿದೆ.</p>.<p>‘ಕೊಲ್ಲಂ ಜಿಲ್ಲೆಯ ಕಲ್ಲುವತ್ತುಕಲ್ ಗ್ರಾಮದ ನಿವಾಸಿಯಾಗಿರುವ 8 ತಿಂಗಳ ಗರ್ಭಿಣಿ ಮೀರಾ ಅವರಲ್ಲಿ ತಳಮಳ ಉಂಟಾಗಿತ್ತು. ಅವರು ತಮ್ಮ ಮನೆಯ ಹತ್ತಿರದ ಎರಡು ಆಸ್ಪತ್ರೆ ಮತ್ತು ಅವಿಟ್ಟಂ ತಿರುನಾಲ್ ಆಸ್ಪತ್ರೆ ಮೊರೆ ಹೋಗಿದ್ದರು. ಆದರೆ, ಈ ಮೂರು ಆಸ್ಪತ್ರೆಗಳು ಮೀರಾ ಅವರನ್ನು ದಾಖಲಿಸಲು ನಿರಾಕರಿಸಿದ್ದವು’ ಎಂದು ಮಾಧ್ಯಮಗಳು ವರದಿ ಮಾಡಿವೆ.</p>.<p>‘ಈ ಬಳಿಕ ಕೊಲ್ಲಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೀರಾ ಅವರನ್ನು ದಾಖಲಿಸಿ, ಹೆರಿಗೆ ಮಾಡಿಸಲಾಯಿತು. ಆದರೆ, ಮಗು ಆರು ದಿನಗಳ ಹಿಂದೆಯೇಗರ್ಭದಲ್ಲಿ ಮೃತಪಟ್ಟಿತ್ತು’ ಎಂದು ಆಯೋಗವು ತಿಳಿಸಿದೆ.</p>.<p>ಈ ಬಗ್ಗೆ ತನಿಖೆ ನಡೆಸುವಂತೆ ಕೊಲ್ಲಂ ಜಿಲ್ಲಾ ವೈದ್ಯಾಧಿಕಾರಿಗೆ ಆಯೋಗದ ಸದಸ್ಯೆ ವಿ.ಕೆ ಬೀನಾ ಕುಮಾರಿ ಅವರು ಸೂಚಿಸಿದ್ದಾರೆ.</p>.<p>ಈ ಸಂಬಂಧ ಮೂರು ವಾರಗಳೊಳಗೆ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ ಎಂದು ಆಯೋಗ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>