<p><strong>ನವದೆಹಲಿ:</strong> ಫೆಬ್ರುವರಿ 24ರಂದು ಉತ್ತರ ಪ್ರದೇಶದ ಮುರಾದಾಬಾದ್ ಮೂಲಕ ಕಾಂಗ್ರೆಸ್ನ ಭಾರತ ಜೋಡೊ ನ್ಯಾಯಯಾತ್ರೆ ಸಾಗಲಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.</p>.<p>ಪಶ್ಚಿಮ ಉತ್ತರ ಪ್ರದೇಶದುದ್ದಕ್ಕೂ ನಡೆಯುವ ಯಾತ್ರೆಯಲ್ಲಿ ಪ್ರಿಯಾಂಕಾ ಅವರು ಪಾಲ್ಗೊಳ್ಳಲಿದ್ದಾರೆ. ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೂ ಆಮಂತ್ರಣ ನೀಡಲಾಗಿದೆ. ಸೀಟು ಹಂಚಿಕೆ ಪ್ರಕ್ರಿಯೆಯು ಅಂತಿಮವಾಗಿರುವುದರಿಂದ ಅವರೂ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.</p>.<p>ಯಾತ್ರೆಯನ್ನು ಶನಿವಾರ ಬೆಳಿಗ್ಗೆ ಮುರಾದಾಬಾದ್ನಿಂದ ಮತ್ತೆ ಆರಂಭಿಸಲಾಗುವುದು. ಬಳಿಕ ಅದು ಸಂಭಾಲ್, ಅಲಿಗಢ, ಹಾಥರಸ್ ಮತ್ತು ಆಗ್ರ ಜಿಲ್ಲೆಗಳ ಮೂಲಕ ಸಾಗಿ ರಾಜಸ್ಥಾನದ ಢೋಲ್ಪುರದಲ್ಲಿ ಭಾನುವಾರ ಕೊನೆಗೊಳ್ಳಲಿದೆ. ಬಳಿಕ, ಫೆ.26ರಿಂದ ಮಾರ್ಚ್ 1ರ ವರೆಗೆ ಯಾತ್ರೆಗೆ ವಿರಾಮ ಇರಲಿದೆ. </p>.<p>ಪ್ರಿಯಾಂಕಾ ಅವರು ಈ ಹಿಂದೆಯೇ ಯಾತ್ರೆಯಲ್ಲಿ ಭಾಗಿಯಾಗಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಭಾಗಿಯಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಫೆಬ್ರುವರಿ 24ರಂದು ಉತ್ತರ ಪ್ರದೇಶದ ಮುರಾದಾಬಾದ್ ಮೂಲಕ ಕಾಂಗ್ರೆಸ್ನ ಭಾರತ ಜೋಡೊ ನ್ಯಾಯಯಾತ್ರೆ ಸಾಗಲಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.</p>.<p>ಪಶ್ಚಿಮ ಉತ್ತರ ಪ್ರದೇಶದುದ್ದಕ್ಕೂ ನಡೆಯುವ ಯಾತ್ರೆಯಲ್ಲಿ ಪ್ರಿಯಾಂಕಾ ಅವರು ಪಾಲ್ಗೊಳ್ಳಲಿದ್ದಾರೆ. ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೂ ಆಮಂತ್ರಣ ನೀಡಲಾಗಿದೆ. ಸೀಟು ಹಂಚಿಕೆ ಪ್ರಕ್ರಿಯೆಯು ಅಂತಿಮವಾಗಿರುವುದರಿಂದ ಅವರೂ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.</p>.<p>ಯಾತ್ರೆಯನ್ನು ಶನಿವಾರ ಬೆಳಿಗ್ಗೆ ಮುರಾದಾಬಾದ್ನಿಂದ ಮತ್ತೆ ಆರಂಭಿಸಲಾಗುವುದು. ಬಳಿಕ ಅದು ಸಂಭಾಲ್, ಅಲಿಗಢ, ಹಾಥರಸ್ ಮತ್ತು ಆಗ್ರ ಜಿಲ್ಲೆಗಳ ಮೂಲಕ ಸಾಗಿ ರಾಜಸ್ಥಾನದ ಢೋಲ್ಪುರದಲ್ಲಿ ಭಾನುವಾರ ಕೊನೆಗೊಳ್ಳಲಿದೆ. ಬಳಿಕ, ಫೆ.26ರಿಂದ ಮಾರ್ಚ್ 1ರ ವರೆಗೆ ಯಾತ್ರೆಗೆ ವಿರಾಮ ಇರಲಿದೆ. </p>.<p>ಪ್ರಿಯಾಂಕಾ ಅವರು ಈ ಹಿಂದೆಯೇ ಯಾತ್ರೆಯಲ್ಲಿ ಭಾಗಿಯಾಗಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಭಾಗಿಯಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>