ಪ್ರಧಾನಿ ನರೇಂದ್ರ ಮೋದಿ ಅವರು ಈಗ ತಮ್ಮ ‘ವಿಲಾಸಿ ವಿದೇಶ ಪ್ರವಾಸ’ಕ್ಕೆ ತೆರಳಿದ್ದಾರೆ (ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಅವರು ಶನಿವಾರ ಬ್ರೆಜಿಲ್ಗೆ ತೆರಳಿದರು). ವಿದೇಶದಲ್ಲಿ ನಿಂತು ಅವರು ಭಾರತದ ರಾಜಕಾರಣ ಮಾತನಾಡುತ್ತಾ, ವೈಯಕ್ತಿಕ ಲಾಭ ಪಡೆದುಕೊಳ್ಳಲು ಹವಣಿಸುತ್ತಾರೆ ಹೊರತು ಒಬ್ಬ ಜವಾಬ್ದಾರಿಯುತ ರಾಜಕಾರಣ ರೀತಿಯಲ್ಲಿ ವರ್ತಿಸುವುದಿಲ್ಲ. ಇದೇನೇ ಇದ್ದರೂ, ನರೇಂದ್ರ ಮೋದಿ ಅವರು ಸಂಘರ್ಷ ಪೀಡಿತ ಮಣಿಪುರಕ್ಕೆ ಭೇಟಿ ನೀಡುವುದೇ ಇಲ್ಲ ಎಂದು ಯಾಕಾಗಿ ಇಷ್ಟೊಂದು ದೃಢವಾಗಿ ನಿರ್ಧರಿಸಿದ್ದಾರೆ
ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪಟ್ಟಭದ್ರ ಹಿತಾಸಕ್ತಿಗಳು ರಾಜ್ಯದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾವೆ. ಹಮರ್ ಹಾಗೂ ಮೈತೇಯಿ ಸಮುದಾಯದವರ ಹತ್ಯೆ ಪ್ರಕರಣಗಳು ಆಘಾತ ಉಂಟು ಮಾಡಿದೆ. ಇದನ್ನು ಖಂಡಿಸಲಾಗುತ್ತದೆ. ಅಕ್ರಮಗಳಲ್ಲಿ ತೊಡಗಿರುವ ಅಮಾನುಷ ಅಪರಾಧಗಳನ್ನು ನಡೆಸುತ್ತಿರುವ ಸಂಘನೆಗಳನ್ನು ‘ಕಾನೂನುಬಾಹಿರ ಸಂಘಟನೆಗಳು’ ಎಂಬುದಾಗಿ ಘೋಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಸಲ್ಲಿಸಲು ಸಂಪುಟವು ಶಿಫಾರಸು ಮಾಡಿದೆ