<p><strong>ಜಮ್ಮು</strong>: ಜಮ್ಮು ಮತ್ತು ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಯೋಧರ ಪರ ಕಂಬನಿ ಮಿಡಿದಿರುವ ಸ್ಥಳೀಯರು, ಉಗ್ರರ ಅಟ್ಟಹಾಸವನ್ನು ಖಂಡಿಸಿ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಸರ್ಕಾರದ ಪ್ರತಿಕ್ರಿಯೆಗೆ ಆಗ್ರಹಿಸಿ ‘ಆಪರೇಷನ್ ಆಲ್ ಔಟ್’ ಎನ್ನುವ ಅಭಿಯಾನವನ್ನು ಆರಂಭಿಸಿದ್ದಾರೆ. </p><p>ರಾಷ್ಟ್ರೀಯ ಬಜರಂಗದಳದ ಮುಖ್ಯಸ್ಥ ರಾಕೇಶ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಯೋಧರ ಹತ್ಯೆ ಮತ್ತು ಪಾಕಿಸ್ತಾನಕ್ಕೆ ನೀಡುತ್ತಿರುವ ಬೆಂಬಲದ ವಿರುದ್ಧ ಕಿಡಿಕಾರಿದರು. ಪ್ರತಿಕೃತಿಗಳನ್ನು ಸುಟ್ಟು, ಪಾಕಿಸ್ತಾನವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.</p><p>‘ಈ ರೀತಿಯ ಹೇಡಿಗಳ ಕೃತ್ಯವನ್ನು ನಾವು ಖಂಡಿಸುತ್ತೇವೆ. ದೇಶದ ಸೇನೆ ಮತ್ತು ನಾಗರಿಕರನ್ನು ಗುರಿಯಾಗಿಸುತ್ತಿರುವ ವಿದೇಶಿ ಕೂಲಿಕಾರ್ಮಿಕರನ್ನು ಹೊರಹಾಕಬೇಕು. ಸರ್ಕಾರ ‘ಆಪರೇಷನ್ ಆಲ್ ಔಟ್’ ಕಾರ್ಯಾಚರಣೆಯನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.</p><p>ಡೋಡಾ ಜಿಲ್ಲೆಯ ದೇಸಾ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್ ಬ್ರಿಜೇಶ್ ಥಾಪಾ, ಒಬ್ಬ ಪೊಲೀಸ್ ಸೇರಿದಂತೆ ನಾಲ್ವರು ಸೇನೆಯ ಸಿಬ್ಬಂದಿ ಹುತಾತ್ಮರಾಗಿದ್ದರು.</p><p>ಸಿಪಾಯಿಗಳಾದ ಬಿಜೇಂದ್ರ, ಅಜಯಕುಮಾರ್ ಸಿಂಗ್ ಮತ್ತು ದೊಕ್ಕರಿ ರಾಜೇಶ್ ಹುತಾತ್ಮರಾದ ಯೋಧರು. ‘10 ರಾಷ್ಟ್ರೀಯ ರೈಫಲ್ಸ್’ನ ಮೇಜರ್ ಥಾಪಾ, ಇತ್ತೀಚೆಗಷ್ಟೆ ಬಡ್ತಿ ಹೊಂದಿದ್ದರು.</p>.ಸಂಪಾದಕೀಯ | ಮತ್ತೆ ಹೆಚ್ಚಿದ ಉಗ್ರರ ಪಿಡುಗು: ನಿವಾರಣೆಗೆ ಬೇಕು ಹಲವು ಉಪಕ್ರಮ.ಆಳ–ಅಗಲ | ‘ಉಗ್ರ’ ತಂತ್ರ ಬದಲು: ಜಮ್ಮುವಿನಲ್ಲಿ ಹೆಚ್ಚಾದ ಭಯೋತ್ಪಾದನಾ ಚಟುವಟಿಕೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು</strong>: ಜಮ್ಮು ಮತ್ತು ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಯೋಧರ ಪರ ಕಂಬನಿ ಮಿಡಿದಿರುವ ಸ್ಥಳೀಯರು, ಉಗ್ರರ ಅಟ್ಟಹಾಸವನ್ನು ಖಂಡಿಸಿ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಸರ್ಕಾರದ ಪ್ರತಿಕ್ರಿಯೆಗೆ ಆಗ್ರಹಿಸಿ ‘ಆಪರೇಷನ್ ಆಲ್ ಔಟ್’ ಎನ್ನುವ ಅಭಿಯಾನವನ್ನು ಆರಂಭಿಸಿದ್ದಾರೆ. </p><p>ರಾಷ್ಟ್ರೀಯ ಬಜರಂಗದಳದ ಮುಖ್ಯಸ್ಥ ರಾಕೇಶ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಯೋಧರ ಹತ್ಯೆ ಮತ್ತು ಪಾಕಿಸ್ತಾನಕ್ಕೆ ನೀಡುತ್ತಿರುವ ಬೆಂಬಲದ ವಿರುದ್ಧ ಕಿಡಿಕಾರಿದರು. ಪ್ರತಿಕೃತಿಗಳನ್ನು ಸುಟ್ಟು, ಪಾಕಿಸ್ತಾನವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.</p><p>‘ಈ ರೀತಿಯ ಹೇಡಿಗಳ ಕೃತ್ಯವನ್ನು ನಾವು ಖಂಡಿಸುತ್ತೇವೆ. ದೇಶದ ಸೇನೆ ಮತ್ತು ನಾಗರಿಕರನ್ನು ಗುರಿಯಾಗಿಸುತ್ತಿರುವ ವಿದೇಶಿ ಕೂಲಿಕಾರ್ಮಿಕರನ್ನು ಹೊರಹಾಕಬೇಕು. ಸರ್ಕಾರ ‘ಆಪರೇಷನ್ ಆಲ್ ಔಟ್’ ಕಾರ್ಯಾಚರಣೆಯನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.</p><p>ಡೋಡಾ ಜಿಲ್ಲೆಯ ದೇಸಾ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್ ಬ್ರಿಜೇಶ್ ಥಾಪಾ, ಒಬ್ಬ ಪೊಲೀಸ್ ಸೇರಿದಂತೆ ನಾಲ್ವರು ಸೇನೆಯ ಸಿಬ್ಬಂದಿ ಹುತಾತ್ಮರಾಗಿದ್ದರು.</p><p>ಸಿಪಾಯಿಗಳಾದ ಬಿಜೇಂದ್ರ, ಅಜಯಕುಮಾರ್ ಸಿಂಗ್ ಮತ್ತು ದೊಕ್ಕರಿ ರಾಜೇಶ್ ಹುತಾತ್ಮರಾದ ಯೋಧರು. ‘10 ರಾಷ್ಟ್ರೀಯ ರೈಫಲ್ಸ್’ನ ಮೇಜರ್ ಥಾಪಾ, ಇತ್ತೀಚೆಗಷ್ಟೆ ಬಡ್ತಿ ಹೊಂದಿದ್ದರು.</p>.ಸಂಪಾದಕೀಯ | ಮತ್ತೆ ಹೆಚ್ಚಿದ ಉಗ್ರರ ಪಿಡುಗು: ನಿವಾರಣೆಗೆ ಬೇಕು ಹಲವು ಉಪಕ್ರಮ.ಆಳ–ಅಗಲ | ‘ಉಗ್ರ’ ತಂತ್ರ ಬದಲು: ಜಮ್ಮುವಿನಲ್ಲಿ ಹೆಚ್ಚಾದ ಭಯೋತ್ಪಾದನಾ ಚಟುವಟಿಕೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>