ಕ್ಷಿಪ್ರ ಕಾರ್ಯಾಚರಣಾ ಪಡೆ (ಆರ್ಎಎಫ್) ಬಿಗಿ ಭದ್ರತೆಯ ನಡುವೆ ಕಿರಣ್ಬೇಡಿ ಗುರುವಾರ ಬೆಳಿಗ್ಗೆ ನವದೆಹಲಿಗೆ ತೆರಳಿದರು. ರಾಜಭವನದ ಮೂಲಗಳ ಪ್ರಕಾರ, ಫೆಬ್ರುವರಿ 20ರಂದು ಮತ್ತೆ ಪುದುಚೇರಿಗೆ ಹಿಂತಿರುಗಲಿದ್ದಾರೆ. ಸರ್ಕಾರ ಕಳುಹಿಸಿರುವಪ್ರಸ್ತಾವಗಳ ಬಗ್ಗೆ ಫೆ.21ರಂದ ಚರ್ಚೆ ನಡೆಸಲು ಬರುವಂತೆ ಮುಖ್ಯಮಂತ್ರಿ ಅವರಿಗೆ ಸೂಚನೆ ನೀಡಿದ್ದಾರೆ.