<p><strong>ನವದೆಹಲಿ:</strong> ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ನಿನ್ನ ಕೈವಾಡವಿದೆ ಎಂದು 32 ವರ್ಷದ ವ್ಯಕ್ತಿಯೊಬ್ಬರಿಗೆ ಬೆದರಿಸಿ ₹10 ಲಕ್ಷ ವಂಚನೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. </p><p>ಆರೋಪಿಗಳು ಭಯೋತ್ಪಾದನಾ ನಿಗ್ರಹ ದಳದವರು(ಎಟಿಎಸ್) ಎಂದು ಸಂತ್ರಸ್ತನ ಎದುರು ಬಿಂಬಿಸಿಕೊಂಡು, ವಂಚನೆ ಎಸಗಿದ್ದಾರೆ. </p><p>ದೆಹಲಿಯ ಕರೋಲ್ ಬಾಗ್ ನಿವಾಸಿಯೊಬ್ಬರು ಅಕ್ಟೋಬರ್ 14ರಂದು ದೂರು ನೀಡಿದ್ದು, ‘ಆಗಸ್ಟ್ 13 ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ನಿನ್ನ ಕೈವಾಡವಿದೆ. ಕಾಶ್ಮೀರದಲ್ಲಿ ನಿನ್ನ ಹೆಸರಿನ ಬ್ಯಾಂಕ್ ಖಾತೆಗೆ ₹ 50 ಲಕ್ಷ ಹಣವನ್ನು ಜಮಾವಣೆ ಮಾಡಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದರು’ ಎಂದು ಎಫ್ಐಆರ್ನಲ್ಲಿ ದಾಖಲಿಸಿದ್ದಾರೆ.</p><p>ಮೂರು ಬೇರೆ ಬೇರೆ ಅಪರಿಚಿತ ನಂಬರ್ಗಳಿಂದ ಕರೆ ಮಾಡಿದ ಆರೋಪಿಗಳು, ವಿಚಾರಣೆ ಮಾಡುವ ನಾಟಕವಾಡಿ ಬ್ಯಾಂಕ್ ಖಾತೆಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಈ ಸುದ್ದಿಯನ್ನು ಗೌಪ್ಯವಾಗಿಡಿ. ಕುಟುಂಬ ಸದಸ್ಯರಿಗೂ ಕೂಡ ತಿಳಿಸಬೇಡ. ಇದರಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಕೈವಾಡವಿದೆ ಎಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. </p><p>ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿದ ಅಕ್ರಮ ಹಣವನ್ನು ಸಕ್ರಮವಾಗಿಸುತ್ತೇವೆ ಎಂದು ಒತ್ತಡ ಹೇರಿದ್ದಾರೆ. ಸಂತ್ರಸ್ತನು ಬ್ಯಾಂಕ್ ಮೂಲಕ ₹8.9 ಲಕ್ಷ ಹಾಗೂ ಯುಪಿಐ ಮೂಲಕ ₹77 ಸಾವಿರ ಹಣವನ್ನು ಆರೋಪಿಗಳಿಗೆ ವರ್ಗಾಹಿಸಿದ್ದಾರೆ ಎಂದು ತಿಳಿಸಿದ್ದಾರೆ. </p><p>ಆರೋಪಿಗಳು ಮೊತ್ತ ಸ್ವೀಕರಿಸಲಾಗಿದೆ ಎಂದು ನಕಲಿ ಬಿಲ್ ಕಳಿಸಿ, ಪ್ರಕರಣದಿಂದ ಬಿಡುಗಡೆಗೊಳಿಸಲು ₹4 ಲಕ್ಷ ಹಣವನ್ನು ಹಾಕಲು ಒತ್ತಾಯಿಸಿದ್ದಾರೆ. ಸಂತ್ರಸ್ತನು ಅದನ್ನು ನಿರಾಕರಿಸಿದ ತಕ್ಷಣವೇ ಅವರು ಪೋನ್ ಅನ್ನು ಸ್ವಿಚ್ಆಫ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ನಿನ್ನ ಕೈವಾಡವಿದೆ ಎಂದು 32 ವರ್ಷದ ವ್ಯಕ್ತಿಯೊಬ್ಬರಿಗೆ ಬೆದರಿಸಿ ₹10 ಲಕ್ಷ ವಂಚನೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. </p><p>ಆರೋಪಿಗಳು ಭಯೋತ್ಪಾದನಾ ನಿಗ್ರಹ ದಳದವರು(ಎಟಿಎಸ್) ಎಂದು ಸಂತ್ರಸ್ತನ ಎದುರು ಬಿಂಬಿಸಿಕೊಂಡು, ವಂಚನೆ ಎಸಗಿದ್ದಾರೆ. </p><p>ದೆಹಲಿಯ ಕರೋಲ್ ಬಾಗ್ ನಿವಾಸಿಯೊಬ್ಬರು ಅಕ್ಟೋಬರ್ 14ರಂದು ದೂರು ನೀಡಿದ್ದು, ‘ಆಗಸ್ಟ್ 13 ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ನಿನ್ನ ಕೈವಾಡವಿದೆ. ಕಾಶ್ಮೀರದಲ್ಲಿ ನಿನ್ನ ಹೆಸರಿನ ಬ್ಯಾಂಕ್ ಖಾತೆಗೆ ₹ 50 ಲಕ್ಷ ಹಣವನ್ನು ಜಮಾವಣೆ ಮಾಡಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದರು’ ಎಂದು ಎಫ್ಐಆರ್ನಲ್ಲಿ ದಾಖಲಿಸಿದ್ದಾರೆ.</p><p>ಮೂರು ಬೇರೆ ಬೇರೆ ಅಪರಿಚಿತ ನಂಬರ್ಗಳಿಂದ ಕರೆ ಮಾಡಿದ ಆರೋಪಿಗಳು, ವಿಚಾರಣೆ ಮಾಡುವ ನಾಟಕವಾಡಿ ಬ್ಯಾಂಕ್ ಖಾತೆಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಈ ಸುದ್ದಿಯನ್ನು ಗೌಪ್ಯವಾಗಿಡಿ. ಕುಟುಂಬ ಸದಸ್ಯರಿಗೂ ಕೂಡ ತಿಳಿಸಬೇಡ. ಇದರಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಕೈವಾಡವಿದೆ ಎಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. </p><p>ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿದ ಅಕ್ರಮ ಹಣವನ್ನು ಸಕ್ರಮವಾಗಿಸುತ್ತೇವೆ ಎಂದು ಒತ್ತಡ ಹೇರಿದ್ದಾರೆ. ಸಂತ್ರಸ್ತನು ಬ್ಯಾಂಕ್ ಮೂಲಕ ₹8.9 ಲಕ್ಷ ಹಾಗೂ ಯುಪಿಐ ಮೂಲಕ ₹77 ಸಾವಿರ ಹಣವನ್ನು ಆರೋಪಿಗಳಿಗೆ ವರ್ಗಾಹಿಸಿದ್ದಾರೆ ಎಂದು ತಿಳಿಸಿದ್ದಾರೆ. </p><p>ಆರೋಪಿಗಳು ಮೊತ್ತ ಸ್ವೀಕರಿಸಲಾಗಿದೆ ಎಂದು ನಕಲಿ ಬಿಲ್ ಕಳಿಸಿ, ಪ್ರಕರಣದಿಂದ ಬಿಡುಗಡೆಗೊಳಿಸಲು ₹4 ಲಕ್ಷ ಹಣವನ್ನು ಹಾಕಲು ಒತ್ತಾಯಿಸಿದ್ದಾರೆ. ಸಂತ್ರಸ್ತನು ಅದನ್ನು ನಿರಾಕರಿಸಿದ ತಕ್ಷಣವೇ ಅವರು ಪೋನ್ ಅನ್ನು ಸ್ವಿಚ್ಆಫ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>