<p><strong>ಮುಂಬೈ</strong>: ಕಾಂಗ್ರೆಸ್ ನೇತಾರ ರಾಧಾಕೃಷ್ಣ ವಿಖೆ ಪಾಟೀಲ್ ಮಹಾರಾಷ್ಟ್ರದ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.<br />ಪುತ್ರ ಸುಜಯ್ ವಿಖೆ ಪಾಟೀಲ್ ಬಿಜೆಪಿ ಸೇರಿರುವುದಿಂದ ವಿಖೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಂಗಳವಾರ ರಾಹುಲ್ ಗಾಂಧಿಯವರಿಗೆ ರಾಜೀನಾಮೆಪತ್ರ ಸಲ್ಲಿಸಿದ ವಿಖೆ, ಪಕ್ಷದ ಮುಖಂಡರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದಿದ್ದಾರೆ.</p>.<p>ಸುಜಯ್ ಬಿಜೆಪಿಗೆ ಸೇರಿದ್ದಕ್ಕೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೇ ಕಾರಣ ಎಂದು ವಿಖೆ ಆರೋಪಿಸಿದ್ದಾರೆ.</p>.<p>ಅಹ್ಮದಾನಗರ್ನಲ್ಲಿನ ಈಗಿನ ಪರಿಸ್ಥಿತಿಗೆ ನನ್ನ ಮಗನೇ ಕಾರಣ ಎಂದು ಹೇಳುತ್ತಿರುವುದು ತಪ್ಪು.ಶರದ್ ಪವಾರ್ ಅವರಂಥಾ ಹಿರಿಯ ನಾಯಕರು ಹಳೇ ವಿಷಯವನ್ನು ಕೆದಕಿ ತೀರಿ ಹೋದ ನನ್ನ ತಂದೆಯನ್ನು ಈ ವಿಷಯಗಳಿಗೆ ತಳುಕು ಹಾಕುತ್ತಿರುವುದು ಸರಿಯಲ್ಲ.ತಮ್ಮ ತಾತನ ವಿರುದ್ಧ ಈ ರೀತಿಯ ಹೇಳಿಕೆಗಳು ಕೇಳಿ ಬಂದಿದ್ದರಿಂದಲೇ ಸುಜಯ್ ಬಿಜೆಪಿ ಸೇರುವ ನಿರ್ಧಾರ ತೆಗೆದುಕೊಂಡಿರಬಹುದು ಎಂದಿದ್ದಾರೆ ವಿಖೆ.</p>.<p>ಏತನ್ಮಧ್ಯೆ, ತಾನು ಅಹ್ಮದಾನಗರ್ನಲ್ಲಿ ಮಗನ ವಿರುದ್ಧ ಚುನಾವಣಾ ಪ್ರಚಾರ ಮಾಡುವುದಿಲ್ಲ ಎಂದು ವಿಖೆ ಹೇಳಿದ್ದಾರೆ.</p>.<p>ಸುಜಯ್ ವಿಖೆ ಪಾಟೀಲ್ ಮಾರ್ಚ್ 12ರಂದು ಬಿಜೆಪಿ ಸೇರಿದ್ದರು.ಈ ಬಗ್ಗೆ ವಿಖೆ ಅವರ ನಿಲುವು ಏನು ಎಂದು ಸ್ಪಷ್ಟ ಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಬಾಳಾ ಸಾಹೇಬ್ ಥೋರಟ್ ವಿಖೆ ಅವರಲ್ಲಿ ಒತ್ತಾಯಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಕಾಂಗ್ರೆಸ್ ನೇತಾರ ರಾಧಾಕೃಷ್ಣ ವಿಖೆ ಪಾಟೀಲ್ ಮಹಾರಾಷ್ಟ್ರದ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.<br />ಪುತ್ರ ಸುಜಯ್ ವಿಖೆ ಪಾಟೀಲ್ ಬಿಜೆಪಿ ಸೇರಿರುವುದಿಂದ ವಿಖೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಂಗಳವಾರ ರಾಹುಲ್ ಗಾಂಧಿಯವರಿಗೆ ರಾಜೀನಾಮೆಪತ್ರ ಸಲ್ಲಿಸಿದ ವಿಖೆ, ಪಕ್ಷದ ಮುಖಂಡರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದಿದ್ದಾರೆ.</p>.<p>ಸುಜಯ್ ಬಿಜೆಪಿಗೆ ಸೇರಿದ್ದಕ್ಕೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೇ ಕಾರಣ ಎಂದು ವಿಖೆ ಆರೋಪಿಸಿದ್ದಾರೆ.</p>.<p>ಅಹ್ಮದಾನಗರ್ನಲ್ಲಿನ ಈಗಿನ ಪರಿಸ್ಥಿತಿಗೆ ನನ್ನ ಮಗನೇ ಕಾರಣ ಎಂದು ಹೇಳುತ್ತಿರುವುದು ತಪ್ಪು.ಶರದ್ ಪವಾರ್ ಅವರಂಥಾ ಹಿರಿಯ ನಾಯಕರು ಹಳೇ ವಿಷಯವನ್ನು ಕೆದಕಿ ತೀರಿ ಹೋದ ನನ್ನ ತಂದೆಯನ್ನು ಈ ವಿಷಯಗಳಿಗೆ ತಳುಕು ಹಾಕುತ್ತಿರುವುದು ಸರಿಯಲ್ಲ.ತಮ್ಮ ತಾತನ ವಿರುದ್ಧ ಈ ರೀತಿಯ ಹೇಳಿಕೆಗಳು ಕೇಳಿ ಬಂದಿದ್ದರಿಂದಲೇ ಸುಜಯ್ ಬಿಜೆಪಿ ಸೇರುವ ನಿರ್ಧಾರ ತೆಗೆದುಕೊಂಡಿರಬಹುದು ಎಂದಿದ್ದಾರೆ ವಿಖೆ.</p>.<p>ಏತನ್ಮಧ್ಯೆ, ತಾನು ಅಹ್ಮದಾನಗರ್ನಲ್ಲಿ ಮಗನ ವಿರುದ್ಧ ಚುನಾವಣಾ ಪ್ರಚಾರ ಮಾಡುವುದಿಲ್ಲ ಎಂದು ವಿಖೆ ಹೇಳಿದ್ದಾರೆ.</p>.<p>ಸುಜಯ್ ವಿಖೆ ಪಾಟೀಲ್ ಮಾರ್ಚ್ 12ರಂದು ಬಿಜೆಪಿ ಸೇರಿದ್ದರು.ಈ ಬಗ್ಗೆ ವಿಖೆ ಅವರ ನಿಲುವು ಏನು ಎಂದು ಸ್ಪಷ್ಟ ಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಬಾಳಾ ಸಾಹೇಬ್ ಥೋರಟ್ ವಿಖೆ ಅವರಲ್ಲಿ ಒತ್ತಾಯಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>