<p><strong>ಕಾನ್ಪುರ</strong>: ‘ದಲಿತ ವ್ಯಕ್ತಿ ಹರಿಓಂ ವಾಲ್ಮೀಕಿ ಅವರ ಕ್ರೂರ ಹತ್ಯೆಯು ದೇಶದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದರು.</p><p>ಫತೇಪುರ ಜಿಲ್ಲೆಯಲ್ಲಿರುವ ಸಂತ್ರಸ್ತನ ಕುಟುಂಬವನ್ನು ಭೇಟಿಯಾದ ರಾಹುಲ್, ‘ವಾಲ್ಮೀಕಿ ಅವರ ಕುಟುಂಬವನ್ನು ಬೆದರಿಸಲು ಬಿಜೆಪಿ ನೇತೃತ್ವದ ಆಡಳಿತವು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.</p><p>‘ಈ ದೇಶದಲ್ಲಿ ದಲಿತನಾಗುವುದು ಮಾರಣಾಂತಿಕ ಅಪರಾಧವೇ? ಎಂಬ ಪ್ರಶ್ನೆಯು ಹರಿಓಂ ಕುಟುಂಬದವರ ಕಣ್ಣುಗಳಲ್ಲಿತ್ತು’ ಎಂದು ರಾಹುಲ್ ‘ಎಕ್ಸ್’ ಪೋಸ್ಟ್ನಲ್ಲಿ ತಿಳಿಸಿದ್ದಾರೆ.</p><p>‘ಸಂತ್ರಸ್ತನ ಕುಟುಂಬವನ್ನು ಭೇಟಿಯಾಗದಂತೆ ತಡೆಯಲು ಆಡಳಿತ ಯತ್ನಿಸಿತು. ಇದು ವ್ಯವಸ್ಥೆಯ ವೈಫಲ್ಯ. ಪ್ರತಿ ಬಾರಿಯೂ ಅಪರಾಧಿಗಳನ್ನು ರಕ್ಷಿಸಿ, ಸಂತ್ರಸ್ತನನ್ನೇ ಕಟಕಟೆಯಲ್ಲಿ ನಿಲ್ಲಿಸುತ್ತದೆ’ ಎಂದು ಉಲ್ಲೇಖಿಸಿದ್ದಾರೆ.</p><p>‘ನ್ಯಾಯವನ್ನು ಗೃಹ ಬಂಧನಕ್ಕೆ ಒಳಪಡಿಸಲಾಗುವುದಿಲ್ಲ’ ಎಂದಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ, ‘ಬಿಜೆಪಿ ನೇತೃತ್ವದ ಸರ್ಕಾರವು ಸಂತ್ರಸ್ತನ ಕುಟುಂಬದ ಮೇಲಿನ ಒತ್ತಡವನ್ನು ನಿವಾರಿಸಬೇಕು. ಜೊತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದನ್ನು ಖಚಿತಪಡಿಸಬೇಕು’ ಎಂದಿದ್ದಾರೆ.</p>.ರಾಯ್ಬರೇಲಿ | ಕಳ್ಳನೆಂದು ಭಾವಿಸಿ ದಲಿತ ವ್ಯಕ್ತಿ ಹತ್ಯೆ: ಐವರ ಬಂಧನ.<p>‘ನಾನು ಹರಿಓಂ ಕುಟುಂಬವೂ ಸೇರಿದಂತೆ ದೇಶದ ಪ್ರತಿ ಶೋಷಿತ, ವಂಚಿತ ಹಾಗೂ ಅಸಹಾಯಕ ನಾಗರಿಕರೊಂದಿಗೆ ದೃಢವಾಗಿ ನಿಲ್ಲುತ್ತೇನೆ. ನನ್ನ ಹೋರಾಟ ಹರಿಓಂಗಾಗಿ ಮಾತ್ರವಲ್ಲ. ಅನ್ಯಾಯಕ್ಕೆ ತಲೆಬಾಗಲು ನಿರಾಕರಿಸುವ ಪ್ರತಿ ಧ್ವನಿಗಾಗಿ’ ಎಂದು ರಾಹುಲ್ ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.</p><p>ರಾಹುಲ್ ಗಾಂಧಿ ಅವರು ಹರಿಓಂ ಕುಟುಂಬದ ಸದಸ್ಯರೊಂದಿಗೆ 25 ನಿಮಿಷವಿದ್ದರು.</p><p><strong>ದೌರ್ಜನ್ಯ ಉತ್ತುಂಗದಲ್ಲಿ</strong></p><p>‘ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ದಲಿತರ ಮೇಲಿನ ದಬ್ಬಾಳಿಕೆ ಉತ್ತುಂಗದಲ್ಲಿದೆ’ ಎಂದು ರಾಹುಲ್ ಗಾಂಧಿ ಆರೋಪಿಸಿದರು.</p><p>ಹರಿಓಂ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಟುಂಬದ ವಿರುದ್ಧ ಅಪರಾಧ ನಡೆದಿದ್ದರೂ ಅವರನ್ನೇ ಆರೋಪಿಗಳು ಎಂದು ಭಾವಿಸುವಂತೆ ಮಾಡಲಾಗಿದೆ. ನ್ಯಾಯವನ್ನಷ್ಟೇ ಬಯಸುತ್ತಿರುವ ಅವರೆಲ್ಲರನ್ನೂ ಮನೆಯೊಳಗೆ ಇರುವಂತೆ ಮಾಡಿ, ಬೆದರಿಸಲಾಗುತ್ತಿದೆ’ ಎಂದು ದೂರಿದರು.</p><p>‘ಕೆಲವು ದಿನಗಳ ಹಿಂದೆ ದಲಿತ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ಅಲ್ಲಿಗೂ ಹೋಗಿದ್ದೆ. ಇಂದು ಇಲ್ಲಿಗೆ ಭೇಟಿ ನೀಡಿದ್ದೇನೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ವೈ. ಪೂರನ್ ಕುಮಾರ್ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಿದರು.</p><p>‘ರಾಹುಲ್ ಗಾಂಧಿ ಅವರು ನಮ್ಮ ಕುಟುಂಬದ ಭೇಟಿಯನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು. ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಮಗೆ ತೃಪ್ತಿಯಿದೆ. ಇಲ್ಲಿ ರಾಜಕೀಯದ ಅಗತ್ಯವಿಲ್ಲ’ ಎಂದು ರಾಹುಲ್ ಭೇಟಿಗೂ ಮುನ್ನ ಸಂತ್ರಸ್ತನ ಸಹೋದರ ಶಿವಂ ಅವರು ವಿಡಿಯೊವೊಂದರಲ್ಲಿ ಹೇಳಿದ್ದಾರೆ.</p><p>ಬಿಜೆಪಿಯು ಒತ್ತಡ ಹೇರಿ ಈ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾನ್ಪುರ</strong>: ‘ದಲಿತ ವ್ಯಕ್ತಿ ಹರಿಓಂ ವಾಲ್ಮೀಕಿ ಅವರ ಕ್ರೂರ ಹತ್ಯೆಯು ದೇಶದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದರು.</p><p>ಫತೇಪುರ ಜಿಲ್ಲೆಯಲ್ಲಿರುವ ಸಂತ್ರಸ್ತನ ಕುಟುಂಬವನ್ನು ಭೇಟಿಯಾದ ರಾಹುಲ್, ‘ವಾಲ್ಮೀಕಿ ಅವರ ಕುಟುಂಬವನ್ನು ಬೆದರಿಸಲು ಬಿಜೆಪಿ ನೇತೃತ್ವದ ಆಡಳಿತವು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.</p><p>‘ಈ ದೇಶದಲ್ಲಿ ದಲಿತನಾಗುವುದು ಮಾರಣಾಂತಿಕ ಅಪರಾಧವೇ? ಎಂಬ ಪ್ರಶ್ನೆಯು ಹರಿಓಂ ಕುಟುಂಬದವರ ಕಣ್ಣುಗಳಲ್ಲಿತ್ತು’ ಎಂದು ರಾಹುಲ್ ‘ಎಕ್ಸ್’ ಪೋಸ್ಟ್ನಲ್ಲಿ ತಿಳಿಸಿದ್ದಾರೆ.</p><p>‘ಸಂತ್ರಸ್ತನ ಕುಟುಂಬವನ್ನು ಭೇಟಿಯಾಗದಂತೆ ತಡೆಯಲು ಆಡಳಿತ ಯತ್ನಿಸಿತು. ಇದು ವ್ಯವಸ್ಥೆಯ ವೈಫಲ್ಯ. ಪ್ರತಿ ಬಾರಿಯೂ ಅಪರಾಧಿಗಳನ್ನು ರಕ್ಷಿಸಿ, ಸಂತ್ರಸ್ತನನ್ನೇ ಕಟಕಟೆಯಲ್ಲಿ ನಿಲ್ಲಿಸುತ್ತದೆ’ ಎಂದು ಉಲ್ಲೇಖಿಸಿದ್ದಾರೆ.</p><p>‘ನ್ಯಾಯವನ್ನು ಗೃಹ ಬಂಧನಕ್ಕೆ ಒಳಪಡಿಸಲಾಗುವುದಿಲ್ಲ’ ಎಂದಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ, ‘ಬಿಜೆಪಿ ನೇತೃತ್ವದ ಸರ್ಕಾರವು ಸಂತ್ರಸ್ತನ ಕುಟುಂಬದ ಮೇಲಿನ ಒತ್ತಡವನ್ನು ನಿವಾರಿಸಬೇಕು. ಜೊತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದನ್ನು ಖಚಿತಪಡಿಸಬೇಕು’ ಎಂದಿದ್ದಾರೆ.</p>.ರಾಯ್ಬರೇಲಿ | ಕಳ್ಳನೆಂದು ಭಾವಿಸಿ ದಲಿತ ವ್ಯಕ್ತಿ ಹತ್ಯೆ: ಐವರ ಬಂಧನ.<p>‘ನಾನು ಹರಿಓಂ ಕುಟುಂಬವೂ ಸೇರಿದಂತೆ ದೇಶದ ಪ್ರತಿ ಶೋಷಿತ, ವಂಚಿತ ಹಾಗೂ ಅಸಹಾಯಕ ನಾಗರಿಕರೊಂದಿಗೆ ದೃಢವಾಗಿ ನಿಲ್ಲುತ್ತೇನೆ. ನನ್ನ ಹೋರಾಟ ಹರಿಓಂಗಾಗಿ ಮಾತ್ರವಲ್ಲ. ಅನ್ಯಾಯಕ್ಕೆ ತಲೆಬಾಗಲು ನಿರಾಕರಿಸುವ ಪ್ರತಿ ಧ್ವನಿಗಾಗಿ’ ಎಂದು ರಾಹುಲ್ ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.</p><p>ರಾಹುಲ್ ಗಾಂಧಿ ಅವರು ಹರಿಓಂ ಕುಟುಂಬದ ಸದಸ್ಯರೊಂದಿಗೆ 25 ನಿಮಿಷವಿದ್ದರು.</p><p><strong>ದೌರ್ಜನ್ಯ ಉತ್ತುಂಗದಲ್ಲಿ</strong></p><p>‘ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ದಲಿತರ ಮೇಲಿನ ದಬ್ಬಾಳಿಕೆ ಉತ್ತುಂಗದಲ್ಲಿದೆ’ ಎಂದು ರಾಹುಲ್ ಗಾಂಧಿ ಆರೋಪಿಸಿದರು.</p><p>ಹರಿಓಂ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಟುಂಬದ ವಿರುದ್ಧ ಅಪರಾಧ ನಡೆದಿದ್ದರೂ ಅವರನ್ನೇ ಆರೋಪಿಗಳು ಎಂದು ಭಾವಿಸುವಂತೆ ಮಾಡಲಾಗಿದೆ. ನ್ಯಾಯವನ್ನಷ್ಟೇ ಬಯಸುತ್ತಿರುವ ಅವರೆಲ್ಲರನ್ನೂ ಮನೆಯೊಳಗೆ ಇರುವಂತೆ ಮಾಡಿ, ಬೆದರಿಸಲಾಗುತ್ತಿದೆ’ ಎಂದು ದೂರಿದರು.</p><p>‘ಕೆಲವು ದಿನಗಳ ಹಿಂದೆ ದಲಿತ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ಅಲ್ಲಿಗೂ ಹೋಗಿದ್ದೆ. ಇಂದು ಇಲ್ಲಿಗೆ ಭೇಟಿ ನೀಡಿದ್ದೇನೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ವೈ. ಪೂರನ್ ಕುಮಾರ್ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಿದರು.</p><p>‘ರಾಹುಲ್ ಗಾಂಧಿ ಅವರು ನಮ್ಮ ಕುಟುಂಬದ ಭೇಟಿಯನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು. ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಮಗೆ ತೃಪ್ತಿಯಿದೆ. ಇಲ್ಲಿ ರಾಜಕೀಯದ ಅಗತ್ಯವಿಲ್ಲ’ ಎಂದು ರಾಹುಲ್ ಭೇಟಿಗೂ ಮುನ್ನ ಸಂತ್ರಸ್ತನ ಸಹೋದರ ಶಿವಂ ಅವರು ವಿಡಿಯೊವೊಂದರಲ್ಲಿ ಹೇಳಿದ್ದಾರೆ.</p><p>ಬಿಜೆಪಿಯು ಒತ್ತಡ ಹೇರಿ ಈ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>