<p class="title"><strong>ನವದೆಹಲಿ:</strong>‘ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ಕಡತಗಳು ರಕ್ಷಣಾ ಸಚಿವಾಲಯದ ಕಚೇರಿಯಿಂದ ಕಳವಾಗಿಲ್ಲ’ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿದ್ದಾರೆ.</p>.<p class="title">‘ಸಚಿವಾಲಯದ ಕಚೇರಿಯಿಂದ ಕಡತಗಳು ಕಳವಾಗಿವೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದು ಸಂಪೂರ್ಣ ತಪ್ಪು. ರಹಸ್ಯ ಕಡತಗಳ ‘ಜೆರಾಕ್ಸ್’ ಪ್ರತಿಯನ್ನು ಅರ್ಜಿದಾರರು ಬಳಸುತ್ತಿದ್ದಾರೆ ಎಂಬರ್ಥದಲ್ಲಿ ನಾನು ಆ ಮಾತು ಹೇಳಿದ್ದೆ’ ಎಂದು ವೇಣುಗೋಪಾಲ್ ಹೇಳಿದ್ದಾರೆ.</p>.<p class="title">ರಫೇಲ್ ಕಡತಗಳು ಕಳವಾಗಿವೆ. ಆ ಕಡತಗಳನ್ನು ಆಧರಿಸಿ ವರದಿ ಪ್ರಕಟಿಸುತ್ತಿರುವ ದ ಹಿಂದೂ ಪತ್ರಿಕೆ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಸುಪ್ರೀಂ ಕೋರ್ಟ್ನಲ್ಲಿ ಅವರು ಬುಧವಾರ ಹೇಳಿದ್ದರು.</p>.<p class="title">ಈ ಹೇಳಿಕೆಯನ್ನು ಆಧರಿಸಿ ವಿರೋಧ ಪಕ್ಷಗಳು ಸರ್ಕಾರದ ಮೇಲೆ ತಿರುಗಿಬಿದ್ದಿವೆ. ದ ಹಿಂದೂ ಪತ್ರಿಕೆ ಪ್ರಕಟಿಸಿದ ವರದಿ ನಿಜವಲ್ಲವೇ ಎಂದು ವಿರೋಧ ಪಕ್ಷಗಳು ಪ್ರಶ್ನಿಸತೊಡಗಿವೆ. ಕಡತಗಳನ್ನು ಕಾಪಾಡಿಕೊಳ್ಳದವರು ದೇಶವನ್ನು ಹೇಗೆ ಕಾಪಾಡುತ್ತಾರೆ ಎಂದೂ ಲೇವಡಿ ಮಾಡುತ್ತಿವೆ.</p>.<p class="title">ಅಟಾರ್ನಿ ಜನರಲ್ ಅವರು ಸುಪ್ರೀಂ ಕೋರ್ಟ್ನಲ್ಲಿ ‘ಕಳವಾಗಿವೆ’ ಎಂಬ ಪದವನ್ನು ಬಳಸಬಾರದಿತ್ತು. ಇದರಿಂದ ಸರ್ಕಾರಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಜತೆಗೆ ಸರ್ಕಾರಕ್ಕೆ ಮುಜುಗರವೂ ಆಗುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.</p>.<p class="title">***</p>.<p class="title">ಗೋವಾದಲ್ಲಿ ಸರ್ಕಾರವೇ ಮಾಯವಾಗಿರುವಂತೆ, ರಫೇಲ್ ಕಡತಗಳೂ ಮಾಯವಾಗಿವೆ. ರಫೇಲ್ ಕಡತಗಳು ನನ್ನ ಬಳಿ ಇವೆ ಎಂದು ಮನೋಹರ್ ಪರ್ರೀಕರ್ ಹೇಳಿದ್ದರು. ಕಡತ ಕಳವಿನ ತನಿಖೆ ನಡೆಸುವುದಾದರೆ ಅದನ್ನು ಪರ್ರೀಕರ್ ಅವರಿಂದಲೇ ಆರಂಭಿಸಿ</p>.<p class="title"><strong>-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong>‘ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ಕಡತಗಳು ರಕ್ಷಣಾ ಸಚಿವಾಲಯದ ಕಚೇರಿಯಿಂದ ಕಳವಾಗಿಲ್ಲ’ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿದ್ದಾರೆ.</p>.<p class="title">‘ಸಚಿವಾಲಯದ ಕಚೇರಿಯಿಂದ ಕಡತಗಳು ಕಳವಾಗಿವೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದು ಸಂಪೂರ್ಣ ತಪ್ಪು. ರಹಸ್ಯ ಕಡತಗಳ ‘ಜೆರಾಕ್ಸ್’ ಪ್ರತಿಯನ್ನು ಅರ್ಜಿದಾರರು ಬಳಸುತ್ತಿದ್ದಾರೆ ಎಂಬರ್ಥದಲ್ಲಿ ನಾನು ಆ ಮಾತು ಹೇಳಿದ್ದೆ’ ಎಂದು ವೇಣುಗೋಪಾಲ್ ಹೇಳಿದ್ದಾರೆ.</p>.<p class="title">ರಫೇಲ್ ಕಡತಗಳು ಕಳವಾಗಿವೆ. ಆ ಕಡತಗಳನ್ನು ಆಧರಿಸಿ ವರದಿ ಪ್ರಕಟಿಸುತ್ತಿರುವ ದ ಹಿಂದೂ ಪತ್ರಿಕೆ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಸುಪ್ರೀಂ ಕೋರ್ಟ್ನಲ್ಲಿ ಅವರು ಬುಧವಾರ ಹೇಳಿದ್ದರು.</p>.<p class="title">ಈ ಹೇಳಿಕೆಯನ್ನು ಆಧರಿಸಿ ವಿರೋಧ ಪಕ್ಷಗಳು ಸರ್ಕಾರದ ಮೇಲೆ ತಿರುಗಿಬಿದ್ದಿವೆ. ದ ಹಿಂದೂ ಪತ್ರಿಕೆ ಪ್ರಕಟಿಸಿದ ವರದಿ ನಿಜವಲ್ಲವೇ ಎಂದು ವಿರೋಧ ಪಕ್ಷಗಳು ಪ್ರಶ್ನಿಸತೊಡಗಿವೆ. ಕಡತಗಳನ್ನು ಕಾಪಾಡಿಕೊಳ್ಳದವರು ದೇಶವನ್ನು ಹೇಗೆ ಕಾಪಾಡುತ್ತಾರೆ ಎಂದೂ ಲೇವಡಿ ಮಾಡುತ್ತಿವೆ.</p>.<p class="title">ಅಟಾರ್ನಿ ಜನರಲ್ ಅವರು ಸುಪ್ರೀಂ ಕೋರ್ಟ್ನಲ್ಲಿ ‘ಕಳವಾಗಿವೆ’ ಎಂಬ ಪದವನ್ನು ಬಳಸಬಾರದಿತ್ತು. ಇದರಿಂದ ಸರ್ಕಾರಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಜತೆಗೆ ಸರ್ಕಾರಕ್ಕೆ ಮುಜುಗರವೂ ಆಗುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.</p>.<p class="title">***</p>.<p class="title">ಗೋವಾದಲ್ಲಿ ಸರ್ಕಾರವೇ ಮಾಯವಾಗಿರುವಂತೆ, ರಫೇಲ್ ಕಡತಗಳೂ ಮಾಯವಾಗಿವೆ. ರಫೇಲ್ ಕಡತಗಳು ನನ್ನ ಬಳಿ ಇವೆ ಎಂದು ಮನೋಹರ್ ಪರ್ರೀಕರ್ ಹೇಳಿದ್ದರು. ಕಡತ ಕಳವಿನ ತನಿಖೆ ನಡೆಸುವುದಾದರೆ ಅದನ್ನು ಪರ್ರೀಕರ್ ಅವರಿಂದಲೇ ಆರಂಭಿಸಿ</p>.<p class="title"><strong>-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>