<p class="title"><strong>ನವದೆಹಲಿ</strong>: 'ಪೂರ್ವ ಲಡಾಖ್ನಲ್ಲಿ ಚೀನಾ ತೆಗೆದಿರುವ ತಗಾದೆ ಕೇವಲ ಗಡಿ ವಿವಾದವಷ್ಟೇ ಅಲ್ಲ,`56 ಇಂಚಿನ ಶಕ್ತಿವಂತನ' ವರ್ಚಸ್ಸಿನ ಮೇಲೆ ದಾಳಿಗೆ ರೂಪಿಸಿರುವ ತಂತ್ರ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>.<p class="title">ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, `ರಾಹುಲ್ಗಾಂಧಿ ಅವರು ಮತ್ತೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ತಮ್ಮನ್ನು ತಾವು ಬಿಂಬಿಸಿಕೊಳ್ಳುವರದಲ್ಲಿ ಅವರು ಮತ್ತೆ ವಿಫಲರಾಗಿದ್ದಾರೆ' ಎಂದು ಟೀಕಿಸಿದ್ದಾರೆ.</p>.<p class="title">ಇಂಥ ಹೇಳಿಕೆಗಳ ಮೂಲಕ ರಾಹುಲ್ಗಾಂಧಿ ಅವರು ಭಾರತವನ್ನು ದುರ್ಬಲಗೊಳಿಸುವ ಮತ್ತು ಚೀನಾವನ್ನು ಸದೃಢಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.</p>.<p>ಇದಕ್ಕೂ ಮೊದಲು ರಾಹುಲ್ಗಾಂಧಿ, ಚೀನಾದವರು ಪ್ರಧಾನಿ ತಾವು ಬಯಸಿದಂತೆ ಕ್ರಮಕೈಗೊಳ್ಳಲು ಪ್ರೇರೇಪಿಸುತ್ತಿದ್ದಾರೆ. ಅಥವಾ ಅವರ ಶಕ್ತಿವಂತ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿರಬಹುದು. ಗಡಿ ತಗಾದೆಯ ಮೂಲಕ ಚೀನಾ ಪ್ರಧಾನಿ ವರ್ಚಸ್ಸಿನ ಮೇಲೇ ದಾಳಿ ನಡೆಸುತ್ತಿದೆ ಎಂದು ವ್ಯಾಖ್ಯಾನಿಸಿದರು.</p>.<p>ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಜೆ.ಪಿ.ನಡ್ಡಾ ಅವರು, ಇದು ರಾಹುಲ್ಗಾಂಧಿ ಅವರನ್ನು ಬಿಂಬಿಸುವ ಕಾರ್ಯದ ಇನ್ನೊಂದು ಆವೃತ್ತಿ. ಎಂದಿನಂತೆ ಅವರಿಗೆ ವಾಸ್ತವಗಳ ಅರಿವಿಲ್ಲ. ಈ ಮೂಲಕ ತಮ್ಮ ಪಕ್ಷವನ್ನೇ ಇನ್ನಷ್ಟು ನಾಶಗೊಳಿಸುತ್ತಿದ್ದಾರೆ ಎಂದು ಸರಣಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.</p>.<p>ಇತ್ತೀಚಿನ ವರ್ಷಗಳಲ್ಲಿ, ದೋಖ್ಲಾಮ್ನಿಂದ ಇಲ್ಲಿಯವರೆಗೂ ರಾಹುಲ್ಗಾಂಧಿ ಅವರು ಚೀನೀಯರ ಪರವಾಗಿ ವಾದ ಮಂಡಿಸುತ್ತಿದ್ದಾರೆ. ಅವರಿಗೆ ಭಾರತೀಯ ಸೇನೆಯ ಮೇಲೆ ನಂಬಿಕೆ ಇಲ್ಲವೇ? ಭಾರತವನ್ನು ದುರ್ಬಲಗೊಳಿಸುವ ಉದ್ದೇಶವೇನು ಎಂದು ನಡ್ಡಾ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: 'ಪೂರ್ವ ಲಡಾಖ್ನಲ್ಲಿ ಚೀನಾ ತೆಗೆದಿರುವ ತಗಾದೆ ಕೇವಲ ಗಡಿ ವಿವಾದವಷ್ಟೇ ಅಲ್ಲ,`56 ಇಂಚಿನ ಶಕ್ತಿವಂತನ' ವರ್ಚಸ್ಸಿನ ಮೇಲೆ ದಾಳಿಗೆ ರೂಪಿಸಿರುವ ತಂತ್ರ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>.<p class="title">ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, `ರಾಹುಲ್ಗಾಂಧಿ ಅವರು ಮತ್ತೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ತಮ್ಮನ್ನು ತಾವು ಬಿಂಬಿಸಿಕೊಳ್ಳುವರದಲ್ಲಿ ಅವರು ಮತ್ತೆ ವಿಫಲರಾಗಿದ್ದಾರೆ' ಎಂದು ಟೀಕಿಸಿದ್ದಾರೆ.</p>.<p class="title">ಇಂಥ ಹೇಳಿಕೆಗಳ ಮೂಲಕ ರಾಹುಲ್ಗಾಂಧಿ ಅವರು ಭಾರತವನ್ನು ದುರ್ಬಲಗೊಳಿಸುವ ಮತ್ತು ಚೀನಾವನ್ನು ಸದೃಢಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.</p>.<p>ಇದಕ್ಕೂ ಮೊದಲು ರಾಹುಲ್ಗಾಂಧಿ, ಚೀನಾದವರು ಪ್ರಧಾನಿ ತಾವು ಬಯಸಿದಂತೆ ಕ್ರಮಕೈಗೊಳ್ಳಲು ಪ್ರೇರೇಪಿಸುತ್ತಿದ್ದಾರೆ. ಅಥವಾ ಅವರ ಶಕ್ತಿವಂತ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿರಬಹುದು. ಗಡಿ ತಗಾದೆಯ ಮೂಲಕ ಚೀನಾ ಪ್ರಧಾನಿ ವರ್ಚಸ್ಸಿನ ಮೇಲೇ ದಾಳಿ ನಡೆಸುತ್ತಿದೆ ಎಂದು ವ್ಯಾಖ್ಯಾನಿಸಿದರು.</p>.<p>ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಜೆ.ಪಿ.ನಡ್ಡಾ ಅವರು, ಇದು ರಾಹುಲ್ಗಾಂಧಿ ಅವರನ್ನು ಬಿಂಬಿಸುವ ಕಾರ್ಯದ ಇನ್ನೊಂದು ಆವೃತ್ತಿ. ಎಂದಿನಂತೆ ಅವರಿಗೆ ವಾಸ್ತವಗಳ ಅರಿವಿಲ್ಲ. ಈ ಮೂಲಕ ತಮ್ಮ ಪಕ್ಷವನ್ನೇ ಇನ್ನಷ್ಟು ನಾಶಗೊಳಿಸುತ್ತಿದ್ದಾರೆ ಎಂದು ಸರಣಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.</p>.<p>ಇತ್ತೀಚಿನ ವರ್ಷಗಳಲ್ಲಿ, ದೋಖ್ಲಾಮ್ನಿಂದ ಇಲ್ಲಿಯವರೆಗೂ ರಾಹುಲ್ಗಾಂಧಿ ಅವರು ಚೀನೀಯರ ಪರವಾಗಿ ವಾದ ಮಂಡಿಸುತ್ತಿದ್ದಾರೆ. ಅವರಿಗೆ ಭಾರತೀಯ ಸೇನೆಯ ಮೇಲೆ ನಂಬಿಕೆ ಇಲ್ಲವೇ? ಭಾರತವನ್ನು ದುರ್ಬಲಗೊಳಿಸುವ ಉದ್ದೇಶವೇನು ಎಂದು ನಡ್ಡಾ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>