<p><strong>ನವದೆಹಲಿ</strong>: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯ ಅಕ್ರಮಗಳ ಕುರಿತ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಒಳಗಾಗಿ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ‘ಮತ ಕಳವು’ ಆರೋಪವನ್ನು ಆಧಾರರಹಿತ, ಅಸಿಂಧು ಎಂದು ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.</p><p>ಇಲ್ಲದೇ ಹೋದರೆ, ನಿರಾಧಾರ ಆರೋಪ ಮಾಡಿದ್ದಕ್ಕಾಗಿ ದೇಶದ ಮುಂದೆ ಕ್ಷಮೆಯಾಚಿಸಬೇಕು ಎಂದೂ ಅದು ಆಗ್ರಹ ಮಾಡಿದೆ.</p><p>ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ‘ರಾಜಕೀಯ ಉದ್ದೇಶಗಳಿಗಾಗಿ ಮತದಾರರನ್ನು ಗುರಿಯಾಗಿಸಲು ಚುನಾವಣಾ ಆಯೋಗವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಆಯೋಗವು ಮತದಾರರೊಂದಿಗೆ ನಿಲ್ಲಲಿದೆ’ ಎಂದು ಭಾನುವಾರ ಹೇಳಿದರು.</p><p>‘ಯಾವುದೇ ಒಂದು ಕ್ಷೇತ್ರದ ಮತದಾರನಲ್ಲದ ವ್ಯಕ್ತಿ ಲಿಖಿತ ಪ್ರಮಾಣಪತ್ರದ ಮೂಲಕ ಮಾತ್ರ ಆಯೋಗಕ್ಕೆ ದೂರು ಸಲ್ಲಿಸಬಹುದು. ರಾಹುಲ್ ಅವರು ಲಿಖಿತ ಪ್ರಮಾಣಪತ್ರ ಸಲ್ಲಿಸದೆಯೇ 1.5 ಲಕ್ಷ ಮತದಾರರಿಗೆ ಆಯೋಗ ನೋಟಿಸ್ ಕಳುಹಿಸಬೇಕೇ’ ಎಂದು ಜ್ಞಾನೇಶ್ ಕುಮಾರ್ ಪ್ರಶ್ನಿಸಿದರು.</p><p>‘ಸೂರ್ಯ ಯಾವತ್ತಿಗೂ ಪೂರ್ವದಲ್ಲೇ ಉದಯಿಸುತ್ತಾನೆ. ಯಾರೋ ಏನೋ ಹೇಳುತ್ತಾರೆ ಎಂದು ಬೇರೆ ದಿಕ್ಕಿನಲ್ಲಿ ಉದಯಿಸುವುದಿಲ್ಲ. ಮತ ಕಳವು ಆರೋಪಗಳಿಗೆ ಆಯೋಗವಾಗಲಿ, ಮತದಾರರಾಗಲಿ ಹೆದರುವುದಿಲ್ಲ’ ಎಂದರು.</p><p>ರಾಹುಲ್ ಗಾಂಧಿ ಅವರು ಜುಲೈ 31ರಂದು ನಡೆಸಿದ ಮಾಧ್ಯಗೋಷ್ಠಿಯಲ್ಲಿ, 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತಗಳ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.</p><p>ತಮ್ಮ ಆರೋಪಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಹಲವು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದರು. ಆದರೆ, ಪ್ರಮಾಣಪತ್ರ ಸಲ್ಲಿಸಲು ರಾಹುಲ್ ನಿರಾಕರಿಸಿದ್ದರು.</p>.SIR ಕುರಿತ ಅಪಪ್ರಚಾರ, ಮತಗಳ್ಳತನ ಆರೋಪಗಳಿಗೆ ಹೆದರಲ್ಲ: CEC ಜ್ಞಾನೇಶ್ ಕುಮಾರ್.ದೇಶದಾದ್ಯಂತ ವಿಧಾನಸಭೆ–ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ: ರಾಹುಲ್.<p><strong>ಆಯೋಗ ಹೇಳಿದ್ದು...</strong></p><ul><li><p>ಆಯೋಗಕ್ಕೆ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ ಎಂಬ ಯಾವುದೇ ಭೇದ ಇಲ್ಲ</p></li><li><p>‘ವೋಟ್ ಚೋರಿ’ (ಮತ ಕಳವು) ತರಹದ ಅಸಮರ್ಪಕ ಪದ ಬಳಕೆ ಮೂಲಕ ರಾಹುಲ್ ಗಾಂಧಿ ಅವರಿಂದ ಸಂವಿಧಾನಕ್ಕೆ ಅಪಮಾನ</p></li><li><p>ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ರಾಜಕೀಯ ಪಕ್ಷಗಳೇ ಮನವಿ ಮಾಡಿದ್ದವು</p></li><li><p>ಕರಡು ಮತದಾರರ ಪಟ್ಟಿಯಲ್ಲಿನ ದೋಷಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ಇರುತ್ತದೆ. ಆಯೋಗದ ಬಾಗಿಲು ಪ್ರತಿಯೊಬ್ಬರಿಗೂ ಸಮಾನವಾಗಿ ಸದಾ ತೆರೆದಿರುತ್ತದೆ</p></li><li><p>ಸಾಂವಿಧಾನಿಕ ಹೊಣೆಗಾರಿಕೆಗಳಿಂದ ಆಯೋಗವು ಹಿಂದೆ ಸರಿಯುವುದಿಲ್ಲ</p></li><li><p>ಒಂದು ಕೋಟಿ ಅಧಿಕಾರಿಗಳು ಎರಡು ಕೋಟಿ ಚುನಾವಣಾ ಏಜೆಂಟ್ಗಳು ಮತ್ತು 10 ಲಕ್ಷ ಬೂತ್ ಮಟ್ಟದ ಏಜೆಂಟ್ಗಳು ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇಂಥ ಪಾರದರ್ಶಕ ವ್ಯವಸ್ಥೆ ನಡುವೆಯೂ ಮತ ಕಳವು ಹೇಗೆ ಸಾಧ್ಯ?</p></li></ul>.<p><strong>ಆಯೋಗದ ಅದಕ್ಷತೆ, ಪಕ್ಷಪಾತಿ ನಿಲುವು ಬಯಲು: ಕಾಂಗ್ರೆಸ್</strong></p><p>ಚುನಾವಣಾ ಆಯೋಗದ ಹೇಳಿಕೆಯು ಅದರ ಅದಕ್ಷತೆ ಮಾತ್ರವಲ್ಲ ಪಕ್ಷಪಾತಿ ನಿಲುವನ್ನೂ ಬಯಲಿಗೆ ಎಳೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.</p><p>ಚುನಾವಣಾ ಆಯೋಗದ ತಾರತಮ್ಯಕ್ಕೆ ಹಲವು ಪುರಾವೆಗಳಿರುವಾಗ ‘ಆಯೋಗಕ್ಕೆ ಆಡಳಿತ ಪಕ್ಷ ಅಥವಾ ವಿಪಕ್ಷಗಳೆಂಬ ಭೇದ ಇಲ್ಲ’ ಎಂದು ಅದು ಹೇಳಿರುವುದು ‘ಹಾಸ್ಯಾಸ್ಪದ’ ಎಂದು ಹೇಳಿದೆ.</p><p>ಚುನಾವಣಾ ಆಯೋಗದ ಮಾಧ್ಯಮಗೋಷ್ಠಿಯ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ‘ಸುಪ್ರೀಂ ಕೋರ್ಟ್ ಆಗಸ್ಟ್ 14ರಂದು ನೀಡಿರುವ ಆದೇಶವನ್ನು ಆಯೋಗವು ಅನುಷ್ಠಾನಗೊಳಿಸುವುದೇ’ ಎಂದು ಪ್ರಶ್ನಿಸಿದ್ದಾರೆ.</p><p>‘ರಾಹುಲ್ ಗಾಂಧಿ ಅವರ ಯಾವುದೇ ಪ್ರಶ್ನೆಗೂ ಚುನಾವಣಾ ಆಯೋಗ ಸಮರ್ಪಕ ಉತ್ತರ ನೀಡಿಲ್ಲ’ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.</p>.<div><blockquote>ಮತ ಕಳವು ಆರೋಪದ ಬಗ್ಗೆ ಲಿಖಿತ ಪ್ರಮಾಣ ಸಲ್ಲಿಸುವಂತೆ ಆಯೋಗವು ನನ್ನನ್ನು ಮಾತ್ರ ಕೇಳಿದೆ. ಬಿಜೆಪಿ ನಾಯಕರು ತಕರಾರು ಎತ್ತಿದ್ದಾಗ ಆಯೋಗ ಅವರನ್ನು ಪ್ರಶ್ನಿಸಿರಲಿಲ್ಲ.</blockquote><span class="attribution">– ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ</span></div>.ಪ್ರಧಾನಿ ಮೋದಿ ಬಿಹಾರದ ಜನರನ್ನು ವಂಚಿಸಲು ಬಿಡುವುದಿಲ್ಲ: ತೇಜಸ್ವಿ ಯಾದವ್.ಖರ್ಗೆ,ಲಾಲುಗೆ ಕುಡಿಯಲು ನೀರು ಕೊಟ್ಟ ರಾಹುಲ್: ಸಜ್ಜನಿಕೆಯ ವರ್ತನೆ ಎಂದ ನೆಟ್ಟಿಗರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯ ಅಕ್ರಮಗಳ ಕುರಿತ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಒಳಗಾಗಿ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ‘ಮತ ಕಳವು’ ಆರೋಪವನ್ನು ಆಧಾರರಹಿತ, ಅಸಿಂಧು ಎಂದು ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.</p><p>ಇಲ್ಲದೇ ಹೋದರೆ, ನಿರಾಧಾರ ಆರೋಪ ಮಾಡಿದ್ದಕ್ಕಾಗಿ ದೇಶದ ಮುಂದೆ ಕ್ಷಮೆಯಾಚಿಸಬೇಕು ಎಂದೂ ಅದು ಆಗ್ರಹ ಮಾಡಿದೆ.</p><p>ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ‘ರಾಜಕೀಯ ಉದ್ದೇಶಗಳಿಗಾಗಿ ಮತದಾರರನ್ನು ಗುರಿಯಾಗಿಸಲು ಚುನಾವಣಾ ಆಯೋಗವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಆಯೋಗವು ಮತದಾರರೊಂದಿಗೆ ನಿಲ್ಲಲಿದೆ’ ಎಂದು ಭಾನುವಾರ ಹೇಳಿದರು.</p><p>‘ಯಾವುದೇ ಒಂದು ಕ್ಷೇತ್ರದ ಮತದಾರನಲ್ಲದ ವ್ಯಕ್ತಿ ಲಿಖಿತ ಪ್ರಮಾಣಪತ್ರದ ಮೂಲಕ ಮಾತ್ರ ಆಯೋಗಕ್ಕೆ ದೂರು ಸಲ್ಲಿಸಬಹುದು. ರಾಹುಲ್ ಅವರು ಲಿಖಿತ ಪ್ರಮಾಣಪತ್ರ ಸಲ್ಲಿಸದೆಯೇ 1.5 ಲಕ್ಷ ಮತದಾರರಿಗೆ ಆಯೋಗ ನೋಟಿಸ್ ಕಳುಹಿಸಬೇಕೇ’ ಎಂದು ಜ್ಞಾನೇಶ್ ಕುಮಾರ್ ಪ್ರಶ್ನಿಸಿದರು.</p><p>‘ಸೂರ್ಯ ಯಾವತ್ತಿಗೂ ಪೂರ್ವದಲ್ಲೇ ಉದಯಿಸುತ್ತಾನೆ. ಯಾರೋ ಏನೋ ಹೇಳುತ್ತಾರೆ ಎಂದು ಬೇರೆ ದಿಕ್ಕಿನಲ್ಲಿ ಉದಯಿಸುವುದಿಲ್ಲ. ಮತ ಕಳವು ಆರೋಪಗಳಿಗೆ ಆಯೋಗವಾಗಲಿ, ಮತದಾರರಾಗಲಿ ಹೆದರುವುದಿಲ್ಲ’ ಎಂದರು.</p><p>ರಾಹುಲ್ ಗಾಂಧಿ ಅವರು ಜುಲೈ 31ರಂದು ನಡೆಸಿದ ಮಾಧ್ಯಗೋಷ್ಠಿಯಲ್ಲಿ, 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತಗಳ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.</p><p>ತಮ್ಮ ಆರೋಪಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಹಲವು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದರು. ಆದರೆ, ಪ್ರಮಾಣಪತ್ರ ಸಲ್ಲಿಸಲು ರಾಹುಲ್ ನಿರಾಕರಿಸಿದ್ದರು.</p>.SIR ಕುರಿತ ಅಪಪ್ರಚಾರ, ಮತಗಳ್ಳತನ ಆರೋಪಗಳಿಗೆ ಹೆದರಲ್ಲ: CEC ಜ್ಞಾನೇಶ್ ಕುಮಾರ್.ದೇಶದಾದ್ಯಂತ ವಿಧಾನಸಭೆ–ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ: ರಾಹುಲ್.<p><strong>ಆಯೋಗ ಹೇಳಿದ್ದು...</strong></p><ul><li><p>ಆಯೋಗಕ್ಕೆ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ ಎಂಬ ಯಾವುದೇ ಭೇದ ಇಲ್ಲ</p></li><li><p>‘ವೋಟ್ ಚೋರಿ’ (ಮತ ಕಳವು) ತರಹದ ಅಸಮರ್ಪಕ ಪದ ಬಳಕೆ ಮೂಲಕ ರಾಹುಲ್ ಗಾಂಧಿ ಅವರಿಂದ ಸಂವಿಧಾನಕ್ಕೆ ಅಪಮಾನ</p></li><li><p>ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ರಾಜಕೀಯ ಪಕ್ಷಗಳೇ ಮನವಿ ಮಾಡಿದ್ದವು</p></li><li><p>ಕರಡು ಮತದಾರರ ಪಟ್ಟಿಯಲ್ಲಿನ ದೋಷಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ಇರುತ್ತದೆ. ಆಯೋಗದ ಬಾಗಿಲು ಪ್ರತಿಯೊಬ್ಬರಿಗೂ ಸಮಾನವಾಗಿ ಸದಾ ತೆರೆದಿರುತ್ತದೆ</p></li><li><p>ಸಾಂವಿಧಾನಿಕ ಹೊಣೆಗಾರಿಕೆಗಳಿಂದ ಆಯೋಗವು ಹಿಂದೆ ಸರಿಯುವುದಿಲ್ಲ</p></li><li><p>ಒಂದು ಕೋಟಿ ಅಧಿಕಾರಿಗಳು ಎರಡು ಕೋಟಿ ಚುನಾವಣಾ ಏಜೆಂಟ್ಗಳು ಮತ್ತು 10 ಲಕ್ಷ ಬೂತ್ ಮಟ್ಟದ ಏಜೆಂಟ್ಗಳು ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇಂಥ ಪಾರದರ್ಶಕ ವ್ಯವಸ್ಥೆ ನಡುವೆಯೂ ಮತ ಕಳವು ಹೇಗೆ ಸಾಧ್ಯ?</p></li></ul>.<p><strong>ಆಯೋಗದ ಅದಕ್ಷತೆ, ಪಕ್ಷಪಾತಿ ನಿಲುವು ಬಯಲು: ಕಾಂಗ್ರೆಸ್</strong></p><p>ಚುನಾವಣಾ ಆಯೋಗದ ಹೇಳಿಕೆಯು ಅದರ ಅದಕ್ಷತೆ ಮಾತ್ರವಲ್ಲ ಪಕ್ಷಪಾತಿ ನಿಲುವನ್ನೂ ಬಯಲಿಗೆ ಎಳೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.</p><p>ಚುನಾವಣಾ ಆಯೋಗದ ತಾರತಮ್ಯಕ್ಕೆ ಹಲವು ಪುರಾವೆಗಳಿರುವಾಗ ‘ಆಯೋಗಕ್ಕೆ ಆಡಳಿತ ಪಕ್ಷ ಅಥವಾ ವಿಪಕ್ಷಗಳೆಂಬ ಭೇದ ಇಲ್ಲ’ ಎಂದು ಅದು ಹೇಳಿರುವುದು ‘ಹಾಸ್ಯಾಸ್ಪದ’ ಎಂದು ಹೇಳಿದೆ.</p><p>ಚುನಾವಣಾ ಆಯೋಗದ ಮಾಧ್ಯಮಗೋಷ್ಠಿಯ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ‘ಸುಪ್ರೀಂ ಕೋರ್ಟ್ ಆಗಸ್ಟ್ 14ರಂದು ನೀಡಿರುವ ಆದೇಶವನ್ನು ಆಯೋಗವು ಅನುಷ್ಠಾನಗೊಳಿಸುವುದೇ’ ಎಂದು ಪ್ರಶ್ನಿಸಿದ್ದಾರೆ.</p><p>‘ರಾಹುಲ್ ಗಾಂಧಿ ಅವರ ಯಾವುದೇ ಪ್ರಶ್ನೆಗೂ ಚುನಾವಣಾ ಆಯೋಗ ಸಮರ್ಪಕ ಉತ್ತರ ನೀಡಿಲ್ಲ’ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.</p>.<div><blockquote>ಮತ ಕಳವು ಆರೋಪದ ಬಗ್ಗೆ ಲಿಖಿತ ಪ್ರಮಾಣ ಸಲ್ಲಿಸುವಂತೆ ಆಯೋಗವು ನನ್ನನ್ನು ಮಾತ್ರ ಕೇಳಿದೆ. ಬಿಜೆಪಿ ನಾಯಕರು ತಕರಾರು ಎತ್ತಿದ್ದಾಗ ಆಯೋಗ ಅವರನ್ನು ಪ್ರಶ್ನಿಸಿರಲಿಲ್ಲ.</blockquote><span class="attribution">– ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ</span></div>.ಪ್ರಧಾನಿ ಮೋದಿ ಬಿಹಾರದ ಜನರನ್ನು ವಂಚಿಸಲು ಬಿಡುವುದಿಲ್ಲ: ತೇಜಸ್ವಿ ಯಾದವ್.ಖರ್ಗೆ,ಲಾಲುಗೆ ಕುಡಿಯಲು ನೀರು ಕೊಟ್ಟ ರಾಹುಲ್: ಸಜ್ಜನಿಕೆಯ ವರ್ತನೆ ಎಂದ ನೆಟ್ಟಿಗರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>