<p><strong>ಪರಬಣಿ</strong>: ‘ಸೋಮನಾಥ ಸೂರ್ಯವಂಶಿ ದಲಿತ. ಇವರು ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದರು. ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟವರು ಇವರನ್ನು ಹತ್ಯೆ ಮಾಡಿದ್ದಾರೆ. ಇದೊಂದು ಸರ್ಕಾರಿ ಪ್ರಾಯೋಜಿತ ಹತ್ಯೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಆರೋಪಿಸಿದರು.</p><p>ಮಹಾರಾಷ್ಟ್ರದ ಪರಬಣಿ ಎಂಬ ಊರಿನ ರೈಲು ನಿಲ್ದಾಣದ ಮುಂದೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ಇರಿಸಲಾಗಿದೆ. ಪುತ್ಥಳಿ ಇರುವ ಜಾಗದಿಂದ ಕೆಲವು ಅಡಿ ದೂರದಲ್ಲಿ ಗಾಜಿನಿಂದ ರೂಪಿಸಿದ ಸಂವಿಧಾನ ಪ್ರತಿಯ ಪ್ರತಿಕೃತಿಯನ್ನು ಇರಿಸಲಾಗಿದೆ. ಈ ಪ್ರತಿಕೃತಿಯನ್ನು ಡಿ.10ರಂದು ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಈ ಬಳಿಕ ಈ ಊರಿನಲ್ಲಿ ಹಿಂಸಾಚಾರ ನಡೆದಿತ್ತು.</p><p>ಹಿಂಸಾಚಾರ ಪ್ರಕರಣ ಸಂಬಂಧ ಪೊಲೀಸರು ಸುಮಾರು 50 ಮಂದಿಯನ್ನು ಬಂಧಿಸಿದ್ದರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಪೈಕಿ ಪರಬಣಿಯ ಶಂಕರ ನಗರದ ನಿವಾಸಿ ಸೋಮನಾಥ ಸೂರ್ಯವಂಶಿ (35) ಅವರೂ ಒಬ್ಬರು. ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಸೂರ್ಯವಂಶಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಡಿ.15ರಂದು ಇವರು ಮೃತಪಟ್ಟರು.</p><p>ಮೃತ ಸೂರ್ಯವಂಶಿ ಅವರ ಮನೆಗೆ ರಾಹುಲ್ ಗಾಂಧಿ ಅವರು ಸೋಮವಾರ ಭೇಟಿ ನೀಡಿ ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಹಿಂಸಾಚಾರದಲ್ಲಿ ಮೃತಪಟ್ಟ ವಿಯಜ್ ವಾಕೋಡೆ ಅವರ ಕುಟುಂಬದವರನ್ನೂ ರಾಹುಲ್ ಭೇಟಿ ಮಾಡಿದರು.</p><p>‘ಸೂರ್ಯವಂಶಿ ಅವರ ಮನೆಯವರು ನನಗೆ ಕೆಲವು ಫೋಟೊ ಹಾಗೂ ವಿಡಿಯೊಗಳನ್ನು ತೋರಿಸಿದ್ದಾರೆ. ಅವರ ಮರಣೋತ್ತರ ವರದಿಯನ್ನೂ ತೋರಿಸಿದ್ದಾರೆ. ಇವರು ಪೊಲೀಸರ ವಶದಲ್ಲಿ ಇರುವಾಗಲೇ ಮೃತಪಟ್ಟಿರುವುದು ನೂರಕ್ಕೆ ನೂರಷ್ಟು ಸತ್ಯ’ ಎಂದು ರಾಹುಲ್ ಹೇಳಿದರು. </p><p>‘ನನಗೆ ಪೊಲೀಸರು ಹಿಂಸೆ ನೀಡಿಲ್ಲ ಎಂದು ಸೂರ್ಯವಂಶಿ ಅವರೇ ನ್ಯಾಯಧೀಶರ ಎದುರು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳೂ ಇವೆ ಎಂದು ಮುಖ್ಯಮಂತ್ರಿ ಫಡಣವೀಸ್ ಅವರು ಅಧಿವೇಶನದಲ್ಲಿ ಹೇಳಿದ್ದಾರೆ. ಆದರೆ, ಅವರು ಸುಳ್ಳು ಹೇಳಿದ್ದಾರೆ’ ಎಂದರು.</p>.<div><blockquote>ರಾಹುಲ್ ಅವರು ರಾಜಕೀಯ ಕಾರಣಗಳಿಗಾಗಿ ಇಲ್ಲಿಗೆ ಬಂದಿದ್ದಾರೆ. ಜನರ ಮಧ್ಯೆ ದ್ವೇಷ ಹುಟ್ಟುವಂತೆ ಮಾಡುವುದು ಅವರ ಕೆಲಸ</blockquote><span class="attribution">ದೇವೇಂದ್ರ ಫಡಣವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿ</span></div>.ನಟರಾದ ಮುಷ್ತಾಕ್ ಖಾನ್, ಸುನೀಲ್ ಪಾಲ್ ಅಪಹರಣ: ಮಾಸ್ಟರ್ ಮೈಂಡ್ ಬಂಧನ.ಹರಿಯಾಣ: ಇಟ್ಟಿಗೆ ಗೂಡಿನ ಗೋಡೆ ಕುಸಿದು 4 ಮಕ್ಕಳು ಸಾವು, ಬಾಲಕಿ ಸ್ಥಿತಿ ಗಂಭೀರ.ವಾರಕ್ಕೆ 4 ದಿನ ದುಡಿದರೆ ಸಾಕು: ಹೆಚ್ಚು ಸಮಯ ಕೆಲಸ ಅರ್ಥಹೀನ; ಕಾರ್ತಿ ಚಿದಂಬರಂ.ಹುಬ್ಬಳ್ಳಿ | ಸೈಬರ್ ಕ್ರೈಂ: ಒಂದೇ ವರ್ಷ ₹32.70 ಕೋಟಿ ವಂಚನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪರಬಣಿ</strong>: ‘ಸೋಮನಾಥ ಸೂರ್ಯವಂಶಿ ದಲಿತ. ಇವರು ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದರು. ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟವರು ಇವರನ್ನು ಹತ್ಯೆ ಮಾಡಿದ್ದಾರೆ. ಇದೊಂದು ಸರ್ಕಾರಿ ಪ್ರಾಯೋಜಿತ ಹತ್ಯೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಆರೋಪಿಸಿದರು.</p><p>ಮಹಾರಾಷ್ಟ್ರದ ಪರಬಣಿ ಎಂಬ ಊರಿನ ರೈಲು ನಿಲ್ದಾಣದ ಮುಂದೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ಇರಿಸಲಾಗಿದೆ. ಪುತ್ಥಳಿ ಇರುವ ಜಾಗದಿಂದ ಕೆಲವು ಅಡಿ ದೂರದಲ್ಲಿ ಗಾಜಿನಿಂದ ರೂಪಿಸಿದ ಸಂವಿಧಾನ ಪ್ರತಿಯ ಪ್ರತಿಕೃತಿಯನ್ನು ಇರಿಸಲಾಗಿದೆ. ಈ ಪ್ರತಿಕೃತಿಯನ್ನು ಡಿ.10ರಂದು ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಈ ಬಳಿಕ ಈ ಊರಿನಲ್ಲಿ ಹಿಂಸಾಚಾರ ನಡೆದಿತ್ತು.</p><p>ಹಿಂಸಾಚಾರ ಪ್ರಕರಣ ಸಂಬಂಧ ಪೊಲೀಸರು ಸುಮಾರು 50 ಮಂದಿಯನ್ನು ಬಂಧಿಸಿದ್ದರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಪೈಕಿ ಪರಬಣಿಯ ಶಂಕರ ನಗರದ ನಿವಾಸಿ ಸೋಮನಾಥ ಸೂರ್ಯವಂಶಿ (35) ಅವರೂ ಒಬ್ಬರು. ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಸೂರ್ಯವಂಶಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಡಿ.15ರಂದು ಇವರು ಮೃತಪಟ್ಟರು.</p><p>ಮೃತ ಸೂರ್ಯವಂಶಿ ಅವರ ಮನೆಗೆ ರಾಹುಲ್ ಗಾಂಧಿ ಅವರು ಸೋಮವಾರ ಭೇಟಿ ನೀಡಿ ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಹಿಂಸಾಚಾರದಲ್ಲಿ ಮೃತಪಟ್ಟ ವಿಯಜ್ ವಾಕೋಡೆ ಅವರ ಕುಟುಂಬದವರನ್ನೂ ರಾಹುಲ್ ಭೇಟಿ ಮಾಡಿದರು.</p><p>‘ಸೂರ್ಯವಂಶಿ ಅವರ ಮನೆಯವರು ನನಗೆ ಕೆಲವು ಫೋಟೊ ಹಾಗೂ ವಿಡಿಯೊಗಳನ್ನು ತೋರಿಸಿದ್ದಾರೆ. ಅವರ ಮರಣೋತ್ತರ ವರದಿಯನ್ನೂ ತೋರಿಸಿದ್ದಾರೆ. ಇವರು ಪೊಲೀಸರ ವಶದಲ್ಲಿ ಇರುವಾಗಲೇ ಮೃತಪಟ್ಟಿರುವುದು ನೂರಕ್ಕೆ ನೂರಷ್ಟು ಸತ್ಯ’ ಎಂದು ರಾಹುಲ್ ಹೇಳಿದರು. </p><p>‘ನನಗೆ ಪೊಲೀಸರು ಹಿಂಸೆ ನೀಡಿಲ್ಲ ಎಂದು ಸೂರ್ಯವಂಶಿ ಅವರೇ ನ್ಯಾಯಧೀಶರ ಎದುರು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳೂ ಇವೆ ಎಂದು ಮುಖ್ಯಮಂತ್ರಿ ಫಡಣವೀಸ್ ಅವರು ಅಧಿವೇಶನದಲ್ಲಿ ಹೇಳಿದ್ದಾರೆ. ಆದರೆ, ಅವರು ಸುಳ್ಳು ಹೇಳಿದ್ದಾರೆ’ ಎಂದರು.</p>.<div><blockquote>ರಾಹುಲ್ ಅವರು ರಾಜಕೀಯ ಕಾರಣಗಳಿಗಾಗಿ ಇಲ್ಲಿಗೆ ಬಂದಿದ್ದಾರೆ. ಜನರ ಮಧ್ಯೆ ದ್ವೇಷ ಹುಟ್ಟುವಂತೆ ಮಾಡುವುದು ಅವರ ಕೆಲಸ</blockquote><span class="attribution">ದೇವೇಂದ್ರ ಫಡಣವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿ</span></div>.ನಟರಾದ ಮುಷ್ತಾಕ್ ಖಾನ್, ಸುನೀಲ್ ಪಾಲ್ ಅಪಹರಣ: ಮಾಸ್ಟರ್ ಮೈಂಡ್ ಬಂಧನ.ಹರಿಯಾಣ: ಇಟ್ಟಿಗೆ ಗೂಡಿನ ಗೋಡೆ ಕುಸಿದು 4 ಮಕ್ಕಳು ಸಾವು, ಬಾಲಕಿ ಸ್ಥಿತಿ ಗಂಭೀರ.ವಾರಕ್ಕೆ 4 ದಿನ ದುಡಿದರೆ ಸಾಕು: ಹೆಚ್ಚು ಸಮಯ ಕೆಲಸ ಅರ್ಥಹೀನ; ಕಾರ್ತಿ ಚಿದಂಬರಂ.ಹುಬ್ಬಳ್ಳಿ | ಸೈಬರ್ ಕ್ರೈಂ: ಒಂದೇ ವರ್ಷ ₹32.70 ಕೋಟಿ ವಂಚನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>