ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಸೈಬರ್‌ ಕ್ರೈಂ: ಒಂದೇ ವರ್ಷ ₹32.70 ಕೋಟಿ ವಂಚನೆ

ನಾಗರಾಜ್‌ ಬಿ.ಎನ್‌.
Published : 23 ಡಿಸೆಂಬರ್ 2024, 6:47 IST
Last Updated : 23 ಡಿಸೆಂಬರ್ 2024, 6:47 IST
ಫಾಲೋ ಮಾಡಿ
Comments
ತನಿಖೆ ವಿಳಂಬ ಯಾಕೆ?
ದೂರುದಾರರು 5–10 ಖಾತೆಗಳಿಂದ ವಂಚಕರಿಗೆ ಹಣ ವರ್ಗಾವಣೆ ಮಾಡುವುದರಿಂದ ಬ್ಯಾಂಕ್‌ನಿಂದ ಮಾಹಿತಿ ಪಡೆಯಲು ವಿಳಂಬವಾಗುತ್ತದೆ. ಆರೋಪಿಗಳು ಒಂದನೇ ಹಂತದಿಂದ ಎರಡನೇ ಹಂತಕ್ಕೆ ಹಣ ವರ್ಗಾವಣೆ ಮಾಡಿ, ಅದನ್ನು ಸೆಲ್ಫ್‌ಚೆಕ್‌ ಅಥವಾ ಎಟಿಎಂ ಕಾರ್ಡ್‌ ಮೂಲಕ ಪಡೆಯುವುದರಿಂದ ಖಾತೆಯಲ್ಲಿ ಹಣ ಕಡಿಮೆಯಾಗಿರುತ್ತದೆ. ಕೆಲವು ಪ್ರಕಣಗಳಲ್ಲಿ ಆರೋಪಿಗಳು ಅಬುದಾಬಿ ಮತ್ತು ಮಧ್ಯ ಏಷ್ಯಾಗಳಲ್ಲಿನ ಎಟಿಎಂ ಕೇಂದ್ರಗಳಿಂದ ಹಣ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ವಂಚಕರು ವಾಟ್ಸ್‌ಆ್ಯಪ್‌, ಟೆಲಿಗ್ರಾಮ್‌ನಿಂದ ಕರೆ ಮಾಡುತ್ತಾರೆ. ತನಿಖೆ ಕೈಗೊಂಡಾಗ ಅವು ಬಿಹಾರ, ಮಧ್ಯಪ್ರದೇಶ ಹಾಗೂ ಕೆಲವು ಕರೆಗಳು ವಿದೇಶಗಳಿಂದ ಬಂದಿರುವುದು ಗಮನಕ್ಕೆ ಬಂದಿವೆ. ನಕಲಿ ಆ್ಯಪ್‌, ಸಿಮ್‌ ಕಾರ್ಡ್‌, ವೆಬ್‌ಸೈಟ್‌ ಬಳಕೆ ಮಾಡುವುದರಿಂದ ಪತ್ತೆ ಕಾರ್ಯ ವಿಳಂಬವಾಗುತ್ತಿವೆ’ ಎನ್ನುವುದು ಪೊಲೀಸರ ಅಭಿಪ್ರಾಯ.
ಸೈಬರ್‌ ವಂಚನೆಯಿಂದ ಪಾರಾಗಲು ಜಾಗೃತ ಆಗುವುದೊಂದೇ ಪರಿಹಾರ. ವಂಚನೆ ಯತ್ನ ಪ್ರಕರಣಗಳು ನಡೆದಾಗ 1930ಗೆ ಕರೆ ಮಾಡಬೇಕು. www.cybercrime.gov.in ಸಂಪರ್ಕಿಸಿ
ಬಿ.ಕೆ.ಪಾಟೀಲ ಇನ್‌ಸ್ಪೆಕ್ಟರ್‌, ಸೈಬರ್‌ ಕ್ರೈಂ ಠಾಣೆ, ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT