‘ಕರ್ನಾಟಕದಲ್ಲೂ ಈ ಕುರಿತು ಚರ್ಚಿಸಲಾಗಿತ್ತು. ಇತ್ತೀಚಿನ ಬಜೆಟ್ನಲ್ಲಿ ಗಿಗ್ ಕಾರ್ಮಿಕರಿಗಾಗಿ ₹4 ಲಕ್ಷವರೆಗೆ ಅಪಘಾತ ವಿಮೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ನಮ್ಮ ಪಕ್ಷವಿರುವ ಸರ್ಕಾರಗಳು ಜಾರಿಗೆ ತರುತ್ತಿರುವ ಇಂಥ ಕಾನೂನುಗಳ ಮೂಲಕ ಕಾರ್ಮಿಕರು ಹಾಗೂ ಮಾಲೀಕರು ಇಬ್ಬರಿಗೂ ಪ್ರಯೋಜನವಾಗಲಿದೆ’ ಎಂದಿದ್ದಾರೆ.
‘ಬಡವರ ಪರವಾಗಿ ನಾವು ಸದಾ ನಿಲ್ಲುತ್ತೇವೆ ಹಾಗೂ ಭಾರತದ ಜನರಿಗಾಗಿ ಸದಾ ಶ್ರಮಿಸುತ್ತೇವೆ. ಆ ಮೂಲಕ ತಮ್ಮ ಪಾಲಿನದನ್ನು ಅವರು ಪಡೆಯುವಂತಾಗಲಿದೆ. ನಾವು ನೀಡಿದ ಭರವಸೆಯಂತೆಯೇ ಅದನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ’ ಎಂದಿದ್ದಾರೆ.
‘ಭಾರತದ ಪ್ರತಿಯೊಬ್ಬ ಶ್ರಮಿಕ ಆರ್ಥಿಕವಾಗಿ ಸದೃಢನಾದರೆ ಹಾಗೂ ಸಂಪೂರ್ಣ ಹಕ್ಕನ್ನು ಪಡೆಯುವವನಾದರೆ ಮಾತ್ರ ಭಾರತ ಒಂದಾಗಲಿದೆ’ ಎಂದು ರಾಹುಲ್ ಗಾಂಧಿ ಟ್ವೀಟ್ನಲ್ಲಿ ಹೇಳಿದ್ದಾರೆ.