<p><strong>ನವದೆಹಲಿ</strong>: ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಹಳೆ ದೆಹಲಿಯ ಪ್ರಸಿದ್ಧ ಘಂಟೆವಾಲಾ ಬೇಕರಿಗೆ ತೆರಳಿ ಸಿಹಿ ತಿಂಡಿ ತಯಾರಿಸಿದ್ದಾರೆ.</p><p>ಈ ಕುರಿತ ವಿಡಿಯೊವನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. </p><p>‘ಹಳೆಯ ದೆಹಲಿಯ ಪ್ರಸಿದ್ಧ ಘಂಟೆವಾಲಾ ಬೇಕರಿಯಲ್ಲಿ ಇಮಾರ್ತಿ(ಜಿಲೇಬಿ) ಮತ್ತು ಬೇಸನ್ ಲಡ್ಡು ತಯಾರಿಸಲು ಪ್ರಯತ್ನಿಸಿದೆ’ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.</p><p>‘ಸಿಹಿತಿಂಡಿಗಳನ್ನು ಇಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಅದರಲ್ಲಿ ಸಾಕಷ್ಟು ಶ್ರಮ ಮತ್ತು ಪ್ರತಿಭೆ ಇರುತ್ತದೆ’ ಎಂದು ಗಾಂಧಿ ಹೇಳಿದ್ದಾರೆ.</p>.<p>ಈ ವೇಳೆ ಅಂಗಡಿ ಮಾಲೀಕ ಮತ್ತು ಅಲ್ಲಿನ ಕೆಲಸಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. </p><p>ಬೇಕರಿ ಇತಿಹಾಸವನ್ನು ವಿವರಿಸುವ ವೇಳೆ ಅಂಗಡಿ ಮಾಲೀಕ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರಿಗೆ ಸಿಹಿ ತಿಂಡಿ ಪೂರೈಸಿರುವುದಾಗಿ ತಿಳಿಸಿದ್ದಾರೆ. ‘ನಿಮ್ಮ(ರಾಹುಲ್) ಮದುವೆಗೆ ಸಿಹಿತಿಂಡಿ ಪೂರೈಸಲು ಕಾಯುತ್ತಿದ್ದೇನೆ’ ಎಂದು ಅವರು ಹೇಳಿದಾಗ ರಾಹುಲ್ ಮುಗುಳ್ನಕ್ಕಿದ್ದಾರೆ.</p><p>ಮತ್ತೊಂದು ಪೋಸ್ಟ್ನಲ್ಲಿ ದೀಪಾವಳಿಯ ಶುಭಾಶಯ ತಿಳಿಸಿರುವ ಅವರು, ‘ಭಾರತವು ಸಂತೋಷದ ದೀಪಗಳಿಂದ ಬೆಳಗಲಿ. ಸಂತೋಷ, ಸಮೃದ್ಧಿ ಮತ್ತು ಪ್ರೀತಿಯ ಬೆಳಕು ಪ್ರತಿ ಮನೆಯಲ್ಲೂ ಹರಡಲಿ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಹಳೆ ದೆಹಲಿಯ ಪ್ರಸಿದ್ಧ ಘಂಟೆವಾಲಾ ಬೇಕರಿಗೆ ತೆರಳಿ ಸಿಹಿ ತಿಂಡಿ ತಯಾರಿಸಿದ್ದಾರೆ.</p><p>ಈ ಕುರಿತ ವಿಡಿಯೊವನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. </p><p>‘ಹಳೆಯ ದೆಹಲಿಯ ಪ್ರಸಿದ್ಧ ಘಂಟೆವಾಲಾ ಬೇಕರಿಯಲ್ಲಿ ಇಮಾರ್ತಿ(ಜಿಲೇಬಿ) ಮತ್ತು ಬೇಸನ್ ಲಡ್ಡು ತಯಾರಿಸಲು ಪ್ರಯತ್ನಿಸಿದೆ’ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.</p><p>‘ಸಿಹಿತಿಂಡಿಗಳನ್ನು ಇಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಅದರಲ್ಲಿ ಸಾಕಷ್ಟು ಶ್ರಮ ಮತ್ತು ಪ್ರತಿಭೆ ಇರುತ್ತದೆ’ ಎಂದು ಗಾಂಧಿ ಹೇಳಿದ್ದಾರೆ.</p>.<p>ಈ ವೇಳೆ ಅಂಗಡಿ ಮಾಲೀಕ ಮತ್ತು ಅಲ್ಲಿನ ಕೆಲಸಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. </p><p>ಬೇಕರಿ ಇತಿಹಾಸವನ್ನು ವಿವರಿಸುವ ವೇಳೆ ಅಂಗಡಿ ಮಾಲೀಕ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರಿಗೆ ಸಿಹಿ ತಿಂಡಿ ಪೂರೈಸಿರುವುದಾಗಿ ತಿಳಿಸಿದ್ದಾರೆ. ‘ನಿಮ್ಮ(ರಾಹುಲ್) ಮದುವೆಗೆ ಸಿಹಿತಿಂಡಿ ಪೂರೈಸಲು ಕಾಯುತ್ತಿದ್ದೇನೆ’ ಎಂದು ಅವರು ಹೇಳಿದಾಗ ರಾಹುಲ್ ಮುಗುಳ್ನಕ್ಕಿದ್ದಾರೆ.</p><p>ಮತ್ತೊಂದು ಪೋಸ್ಟ್ನಲ್ಲಿ ದೀಪಾವಳಿಯ ಶುಭಾಶಯ ತಿಳಿಸಿರುವ ಅವರು, ‘ಭಾರತವು ಸಂತೋಷದ ದೀಪಗಳಿಂದ ಬೆಳಗಲಿ. ಸಂತೋಷ, ಸಮೃದ್ಧಿ ಮತ್ತು ಪ್ರೀತಿಯ ಬೆಳಕು ಪ್ರತಿ ಮನೆಯಲ್ಲೂ ಹರಡಲಿ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>