ಪುರ್ನಿಯಾದಲ್ಲಿ ನಡೆದ ಭಾರತ ಜೋಡೊ ನ್ಯಾಯ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ‘ಮಹಾಘಟಬಂಧನ್ ಮೈತ್ರಿಪಕ್ಷಗಳ ಒತ್ತಡದಿಂದಾಗಿ ಜಾತಿಗಣತಿ ನಡೆಸಲು ನಿತೀಶ್ ಒಪ್ಪಿಕೊಂಡಿದ್ದರು’ ಎಂದು ಹೇಳಿದ್ದರು.
ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರು ಏನೂ ಮಾಡುತ್ತಿಲ್ಲ. ಸೀಟು ಹಂಚಿಕೆ ಬಗ್ಗೆಯೂ ಮಾತನಾಡುತ್ತಿಲ್ಲ. ಪ್ರಮಾಣಿಕವಾಗಿ ಹೇಳಬೇಕಾದರೆ, ಮೈತ್ರಿಕೂಟಕ್ಕೆ ಇಂಡಿಯಾ ಎನ್ನುವ ಹೆಸರಿಡುವುದೂ ನನ್ನ ಆಯ್ಕೆಯಾಗಿರಲಿಲ್ಲ. ಅವರಾಗಿಯೇ ನಿರ್ಧಾರ ತೆಗೆದುಕೊಂಡರು. ನಾನು ಈ ಮರಳಿ ಇಲ್ಲಿಗೆ (ಎನ್.ಡಿ.ಎ.) ಬಂದಿದ್ದೇನೆ. ಇನ್ನು ಎಲ್ಲಿಗೂ ಹೋಗುವುದಿಲ್ಲ’ ಎಂದು ಹೇಳಿದರು.