<p><strong>ಬೆಂಗಳೂರು</strong>: ರೈಲು ಪ್ರಯಾಣಿಕರಿಗೆ ರೈಲ್ವೆ ಸಚಿವಾಲಯ ಸಿಹಿ ಸುದ್ದಿಯೊಂದನ್ನು ನೀಡಿದೆ.</p><p>ಹೋಗಿ ಬರುವ ಎರಡೂ ಟಿಕೆಟ್ ಅನ್ನು (ರೌಂಡ್ ಟ್ರಿಪ್) ಒಟ್ಟಿಗೆ ಮುಂಗಡ ಕಾಯ್ಡಿರಿಸುವ ಪ್ರಯಾಣಿಕರಿಗೆ ಪ್ರಯಾಣ ದರದ ಮೇಲೆ ಶೇ 20 ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಿದೆ.</p><p>ಈ ಕೊಡುಗೆ ಇದೇ ಅಕ್ಟೋಬರ್ 13ರಿಂದ 26ರೊಳಗಿನ ಪ್ರಯಾಣ ಹಾಗೂ ನವೆಂಬರ್ 17ರಿಂದ ಡಿಸೆಂಬರ್ 1ರೊಳಗಿನ ಪ್ರಯಾಣದ ಬುಕಿಂಗ್ ಮೇಲೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದೆ.</p><p>ಈ ರಿಯಾಯಿತಿ ಸೌಲಭ್ಯದ ಬುಕಿಂಗ್ ಆಗಸ್ಟ್ 14ರಿಂದ ಪ್ರಾರಂಭವಾಗುತ್ತದೆ.</p><p>ರೌಂಡ್ ಟ್ರಿಪ್ ಟಿಕೆಟ್ ಪ್ರಯಾಣದ ರಿಯಾಯಿತಿ ಸೌಲಭ್ಯ ಸಿಗಬೇಕಾದರೆ ಪ್ರಯಾಣದ ಆರಂಭ ಹಾಗೂ ಗಮ್ಯ ಬದಲಾಗುವಂತಿಲ್ಲ. ಯಾರ ಹೆಸರಿಗೆ ಹೋಗುವ ಟಿಕೆಟ್ ಬುಕ್ ಮಾಡಿರುತ್ತಾರೋ ರಿಟರ್ನ್ ಟಿಕೆಟ್ ಸಹ ಅದೇ ಹೆಸರಿಗೆ ಇದ್ದರೆ ಮಾತ್ರ ರಿಯಾಯಿತಿ ಅನ್ವಯವಾಗುತ್ತದೆ.</p><p>ಅಷ್ಟೇ ಅಲ್ಲದೇ ರಿಟರ್ನ್ ಟಿಕೆಟ್ ಬುಕಿಂಗ್ ಖಚಿತ ಆದ ಮೇಲೆಯೇ ಒಟ್ಟಾರೆ ರೌಂಡ್ ಟ್ರಿಪ್ನ ಶೇ 20 ರಷ್ಟು ರಿಯಾಯಿತಿ ಸಿಗುತ್ತದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.</p><p>ದೀಪಾವಳಿ ಸೇರಿದಂತೆ ಇತರ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದೆ.</p>.ಈ ಹಬ್ಬದ ಸಮಯದಲ್ಲಿ ಬೆಂಗಳೂರಿನಿಂದ ವಿಶೇಷ ರೈಲುಗಳು: ವೇಳಾಪಟ್ಟಿ ಇಲ್ಲಿದೆ.ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ಸಂಚಾರದ ವೇಳಾಪಟ್ಟಿ ಇಲ್ಲಿದೆ...<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರೈಲು ಪ್ರಯಾಣಿಕರಿಗೆ ರೈಲ್ವೆ ಸಚಿವಾಲಯ ಸಿಹಿ ಸುದ್ದಿಯೊಂದನ್ನು ನೀಡಿದೆ.</p><p>ಹೋಗಿ ಬರುವ ಎರಡೂ ಟಿಕೆಟ್ ಅನ್ನು (ರೌಂಡ್ ಟ್ರಿಪ್) ಒಟ್ಟಿಗೆ ಮುಂಗಡ ಕಾಯ್ಡಿರಿಸುವ ಪ್ರಯಾಣಿಕರಿಗೆ ಪ್ರಯಾಣ ದರದ ಮೇಲೆ ಶೇ 20 ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಿದೆ.</p><p>ಈ ಕೊಡುಗೆ ಇದೇ ಅಕ್ಟೋಬರ್ 13ರಿಂದ 26ರೊಳಗಿನ ಪ್ರಯಾಣ ಹಾಗೂ ನವೆಂಬರ್ 17ರಿಂದ ಡಿಸೆಂಬರ್ 1ರೊಳಗಿನ ಪ್ರಯಾಣದ ಬುಕಿಂಗ್ ಮೇಲೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದೆ.</p><p>ಈ ರಿಯಾಯಿತಿ ಸೌಲಭ್ಯದ ಬುಕಿಂಗ್ ಆಗಸ್ಟ್ 14ರಿಂದ ಪ್ರಾರಂಭವಾಗುತ್ತದೆ.</p><p>ರೌಂಡ್ ಟ್ರಿಪ್ ಟಿಕೆಟ್ ಪ್ರಯಾಣದ ರಿಯಾಯಿತಿ ಸೌಲಭ್ಯ ಸಿಗಬೇಕಾದರೆ ಪ್ರಯಾಣದ ಆರಂಭ ಹಾಗೂ ಗಮ್ಯ ಬದಲಾಗುವಂತಿಲ್ಲ. ಯಾರ ಹೆಸರಿಗೆ ಹೋಗುವ ಟಿಕೆಟ್ ಬುಕ್ ಮಾಡಿರುತ್ತಾರೋ ರಿಟರ್ನ್ ಟಿಕೆಟ್ ಸಹ ಅದೇ ಹೆಸರಿಗೆ ಇದ್ದರೆ ಮಾತ್ರ ರಿಯಾಯಿತಿ ಅನ್ವಯವಾಗುತ್ತದೆ.</p><p>ಅಷ್ಟೇ ಅಲ್ಲದೇ ರಿಟರ್ನ್ ಟಿಕೆಟ್ ಬುಕಿಂಗ್ ಖಚಿತ ಆದ ಮೇಲೆಯೇ ಒಟ್ಟಾರೆ ರೌಂಡ್ ಟ್ರಿಪ್ನ ಶೇ 20 ರಷ್ಟು ರಿಯಾಯಿತಿ ಸಿಗುತ್ತದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.</p><p>ದೀಪಾವಳಿ ಸೇರಿದಂತೆ ಇತರ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದೆ.</p>.ಈ ಹಬ್ಬದ ಸಮಯದಲ್ಲಿ ಬೆಂಗಳೂರಿನಿಂದ ವಿಶೇಷ ರೈಲುಗಳು: ವೇಳಾಪಟ್ಟಿ ಇಲ್ಲಿದೆ.ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ಸಂಚಾರದ ವೇಳಾಪಟ್ಟಿ ಇಲ್ಲಿದೆ...<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>