ಮೋರ್ಚಾದಲ್ಲಿ ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಇದ್ದರೂ ಕೇಜ್ರಿವಾಲ್ ಅವರು ಸೇರಲು ಬಯಸುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯನ್ನು ತಡೆಯುವುದು ಈಗಿನ ಅವಶ್ಯಕತೆಯಾಗಿದೆ. ಬಿಜೆಪಿಯು ಮೆಹಬೂಬಾ ಮುಫ್ತಿ ಅವರೊಂದಿಗೆ ಕೈಜೋಡಿಸಬಹುದಾದರೆ, ಕೇಜ್ರಿವಾಲ್ ಮತ್ತು ಒವೈಸಿ ಕೂಡ ಒಂದೇ ವೇದಿಕೆಯಲ್ಲಿ ಏಕೆ ಬರಲಾಗದು’ ಎಂದು ಮರು ಪ್ರಶ್ನಿಸಿದರು.